Snehapriya.com

June 8, 2025

ಎಲ್ಲರಂತಲ್ಲ ಈ ನಿರ್ಮಾಪಕರು ಸತ್ಯ ಕರ್ಮದ ವಿಶ್ಲೇಷಕರು

Social Share :

* ಧನರಾಜಬಾಬು ಜಿ. ಬಿ.ಟೆಕ್
* ಭೂವರಾಹ ಟ್ರಸ್ಟ್ ನ ಮುಖ್ಯಸ್ಥರು
* ಈ ಪ್ರಕೃತಿಯಿಚ್ಛಾ ನಿಸ್ವಾರ್ಥ ಸಹಬಾಳ್ವೆ ಇವರ ತತ್ವಸಿದ್ದಾಂತ.
* ವಾಸ್ತವತಾ ವಿಚಾರದೊಳಗಿನ ಅಮೃತಬೇರಾದ ಪಚ್ಚಸಂಸ್ಕಾರದ ಸತ್ಯತಾ ಮನೆಚ್ಚರ ಪ್ರಚುರಕಾರರು
* ಇಹ ಪರದ ಆತ್ಮಾವಲೋಕನಾದ ನಿಗೂಢತೆಯ ವಿಶ್ಲೇಷಕರು.
* ಎದೆಗಾರಿಕೆಯ ಸಹನಿರ್ಮಾಪಕರು
* ಶಿಥಿಲಗೊಂಡ ದೇವಾಲಯದ ಪುನರ್ ಜೀರ್ಣೋದ್ಧಾರ ವಿಗ್ರಹಗಳ ಪುನರ್ ಪ್ರಾಣಪ್ರತಿಷ್ಠದ ಕಾರ್ಯ ಮತ್ತು ಕಲಿಕಾ ವರ್ಗದವರ ಶಿಕ್ಷಣಕ್ಕೆ ಸಹಾಯ ಉತ್ತೇಜನ.

ನಗರದ ಹಾಗು ಹೊರವಲಯದ ವೇಗದ ಬದುಕಿನ ನಡುವೆ ನಮ್ರತೆಯನ್ನು ಬೆಳೆಸಿ ಪೋಷಿಸುವುದು ಸಾಮಾನ್ಯ ವಿಷಯವಲ್ಲ.
ಎಲ್ಲರಲ್ಲಿಯೂ ಸಹೃದಯಿಯಾಗಿರಲು ಬಯಸುವ ಹಂಬಲಿಕೆಯವರು.
ಧರ್ಮದಲ್ಲಿ ಧರ್ಮಾಂಧದ ನಂಜನ್ನು ಬೆರೆಸಿಕೊಳ್ಳಬೇಡಿಯೆಂದು ಸಾರುವ ವೈಚಾರಿಕ ನೆಲೆಯ ಪೋಷಣೆ; ಬದುಕಿನ ವಿವಿಧ ಮಜಲುಗಳ ಹುಡುಕಾಟ; ವ್ಯಾವಹಾರಿಕ ಜಗತ್ತಿನ ಮಹತ್ವದ ನಂಟು..
ಇವುಗಳೆಲ್ಲದರ ಮಧ್ಯೆ ಕುಳಿತು ಸಾಮಾನ್ಯರಲ್ಲಿ ಸಾಮಾನ್ಯ ಎಂಬಂತೆ ನಡೆದುಕೊಳ್ಳುವ ಅಪರೂಪದ ವ್ಯಕ್ತಿ ಭೂವರಾಹ ಟ್ರಸ್ಟ್‌ ನ ಮುಖ್ಯಸ್ಥರು..

ಅವರೇ ಧನರಾಜಬಾಬು ಜಿ. !

ಈಚೆಗೆ ಬಿಡುಗಡೆ ಕಂಡ ‘ಡೆವಿಡ್’ ಎಂಬ ಚಿತ್ರವನ್ನು ಸಹನಿರ್ಮಾಪಕರಾಗಿ ಪೋಷಿಸಿ ಬೆಳೆಸಿದವರು. ಕೊರೊನಾ ಅಥವಾ ಇತರ ಕಾರಣಗಳಿಂದ ನಿಂತು ಹೋಗಿದ್ದ ಚಿತ್ರಕ್ಕೆ ಜೀವತುಂಬಿ ಬಿಡುಗಡೆಯ ಅಂಚಿಗೆ ತಂದು ನಿಲ್ಲಿಸಿದವರು.

ಮೂಲಗುರು ಕಪಿರಾಯಪೂಜಿತ ಭೂವರಾಹ ಕೇಶವ ನಾಮಾಂಕಿತದಲ್ಲಿ ನಾರಾಯಣನನ್ನು ಸದಾ ಧ್ಯಾನಿಸುವ ಧನರಾಜಬಾಬು ಅವರಿಗೆ ಈ ಮಣ್ಣು, ಸಂಸ್ಕೃತಿ, ಯಾವೊಂದು ಜೀವದ ಪುನರಪಿ ಹುಟ್ಟುಸಾವಿನ ಕರ್ಮಚಕ್ರಾಟದ ಸತ್ಯಾಸತ್ಯತೆಯ ಅಧ್ಯಾಯನ, ಪುನರ್ಜನ್ಮದ ಜೀವಕರ್ಮದ ವಾಸನೆಯ ವಿಚಾರವನ್ನರಿಯುವ ಆಸಕ್ತಿ.

ಭೂವರಾಹ ಟ್ರಸ್ಟ್ ನ ಮೂಲಕ ಇಹಾ ಹಾಸ್ಪಿಟಲ್ ಎಂಬ ಹೆಸರಿನಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಿರುವುದು ಇವರ ಹೆಗ್ಗಳಿಕೆ. ಅಲ್ಲದೆ ಪ್ರತಿ ನಿತ್ಯ ತಮ್ಮನ್ನು ಅರಸಿ ಬರುವ ನೊಂದ ಜೀವಗಳಿಗೆ ಧೈರ್ಯಮಾತು, ಬುದ್ದಿಮಾತು, ಸಜ್ಜನತೆ ಹಾಗು ಸಹಾಯಹಸ್ತ ಚಾಚುವ ಗುಣ ಯಾರಿಗೂ ತಿಳಿದಿಲ್ಲ. ಏಕೆಂದರೆ ಅಂತಹ ವಿಷಯಗಳು ಪ್ರಚಾರದ ರೂಪ ಪಡೆಯಬಾರದು ಎಂಬುದು ಅವರ ಅಭಿಲಾಷೆ.

ಇನ್ನು ಬರಹದ ವಿಷಯಕ್ಕೆ ಬಂದರೆ ಅವರೊಳಗಿನ ಅಗಾಧ ಶಕ್ತಿಯ ಪರಿಚಯವೇ ಆಗುತ್ತದೆ. ಪ್ರತಿ ವಿಷಯದ ಬಗ್ಗೆಯೂ ಅವರ ಒಳನೋಟದೊಳಗೆ ಮತ್ತೊಂದು ಒಳನೋಟ ಅಚ್ಚರಿಗೆ ದೂಡುತ್ತದೆ.
ಪ್ರತಿಯೊಬ್ಬ ಲೇಖಕನಿಗೆ ಒಂದು ಜೀವನ ದೃಷ್ಟಿ ಇರುತ್ತದೆ. ಅದು ಕೃತಿಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ಧನರಾಜಬಾಬು ಅವರ ವಿಚಾರ ದೃಷ್ಟಿ ವಿಶಾಲ ನೆಲೆಯಲ್ಲಿ ಬಹುಮುಖ ವ್ಯಾಪ್ತಿಯನ್ನು ಪಡೆದುಕೊಂಡಿರುವುದೇ ವಿಶೇಷ.

ಅದರಲ್ಲಿ ಮುಖ್ಯವಾಗಿ ಆಧ್ಯಾತ್ಮ, ಸಂಸ್ಕೃತಿ, ಉಪಾಸನೆ, ಆಚಾರ, ವಿಚಾರ, ಧರ್ಮ, ದೈವ, ಸಂಸ್ಕಾರ, ಸಹಬಾಳ್ವೆ, ಪ್ರೀತಿ, ನೋವು, ಮಮತೆ, ಎಚ್ಚರ, ಮಾನವೀಯತೆ, ಸೌಂದರ್ಯೋಪಾಸನೆ ಎಲ್ಲವೂ ಇರುತ್ತದೆ. ಅವರ ಮನಸ್ಸಿನ ಚಿಂತನೆ ಚಾಣಕ್ಯ ನೀತಿಗೆ ಅನುಗುಣವಾಗಿ, ವಿಧುರ ನೀತಿ ಅಡಕವಾಗಿ ಪ್ರಜ್ಞಾಪೂರ್ವಕವಾಗಿ ಬೆಳೆದು ಎಲ್ಲವನ್ನು ಪ್ರಶ್ನಿಸಿ, ಕೆದಕಿ, ಹುಡುಕಿ ಕೊನೆಗೆ ಜೀವನಾದರ್ಶವಾಗಿ ನಿಲ್ಲುತ್ತದೆ.

ಅವರ ಕೃತಿಯಾದ ಎನ್ಮನ ನೆರಳಿನ ನಗ್ನಾಂಧತೆಯ ಕಾರ್ಮೋಡವನ್ನು ಅನ್ವೇಷಣೆ ಮಾಡಿದಾಗ ಕಾಣುವುದು ಜೀವನದ ವಿರಾಟ್ ರೂಪವೇ. ಬೇರೆಯವರ ವಿಚಾರಗಳಿಗೆ ಇವರ ವಿಚಾರಗಳು ಮುಖಾಮುಖಿಯಾದಾಗ ಹೋಲಿಕೆಗೂ ನಿಲುಕದಾಗಿ ಜೀವನ ಮತ್ತು ದೃಷ್ಟಿಕೋನ ಹೊಂದಿರುವ ವಿಶಾಲ ನೆಲೆಯೂ ಗೋಚರವಾಗುತ್ತದೆ.

ಆಗ ನಮಗನಿಸುವುದು ‘ಬದುಕನ್ನು ವಿಶಾಲ ವ್ಯಾಪ್ತಿಯಲ್ಲಿ ನೋಡಿದಾಗ ಮಾತ್ರ ಇಂತಹ ಬರಹಗಳು ಸಾಧ್ಯ..’.
ಅವರ ಒಂದು ಬರಹದ ರೂಪತೆಯು ಹೀಗಿರುತ್ತದೆ..

‘ಪರಲೋಕ’
___________

‘ಊರನ್ನು ಮೆಚ್ಚಿಸಲೋಗಿ ಮೂರ್ಖನಾದೆ.
ಈ ಜಗದಲ್ಲಿನ ಮನ ಬಣ್ಣವನ್ನು ಬಣ್ಣಿಪುವುದರಲ್ಲಿ ಎಡವಿದೆ.
ಎನ್ನ ತಪ್ಪನ್ನು ಎತ್ತಿತೋರಿ ತನ್ನ ಬೇಳೆಕಾಳನ್ನು ಬೇಯಿಸಿಕೊಂಡವನ ಬಾಯಿಗೆ ಬೀಗವನ್ನಾಕಲೋಗುವುದರಲ್ಲಿ ಭೀತನಾದೆ.
ಇಹಲೋಕದ ಸತ್ಯಕರ್ಮ ವ್ಯಾಪಾರತೆಯ ಭೋಗಭೋಗಾಂಧದ ಮರ್ಮತೆಯಲ್ಲಿ ಯಶಕಾಣಲೋಗಿ ಸೋಲಿನಲ್ಲಿ ಬೆಂದೆ.
ಪರಲೋಕದ ಸ್ವರ್ಗಬಾಗಿಲನ್ನು ದಾಟಲು ಕನವರಿಸಿದ್ದರಲ್ಲಿ ಪಚ್ಚಕಾಯಕದ ಭೂಸ್ವರ್ಗದ ಬಾಗಿಲಿನ ಶಾಪಕ್ಕೆ ತುತ್ತಾದೆ.
ಕಾಲಮರ್ಮತೆಯ ಚಕ್ರವ್ಯೂಹದಲ್ಲಿ ನಾನಾಗಿಯೇ ಸ್ವಾರ್ಥತೆಯ ಮನೋಮೂಢನಾಗಿ ಸಿಕ್ಕಿಕೊಂಡು ಒದ್ದಾಡಿ ಬಲಿಯಾಗುವುನೆಂಬ ಭವಿಷ್ಯಭಯದ ರಾಕ್ಷಸನು ಎನ್ನನ್ನು ಆವರಿಸಿದ್ದಾದರೂ, ಇದರ ಕಾರಣತೆಯನ್ನು ನಿನ್ನಲ್ಲಿ ಮರೆಸಲಾಗದ ಎನ್ಮನ ನೆರಳಿನ ಜಾಣ್ಕಿರುಕಾಂಧೇಶ್ವರನೆ ನಾನಾದೆನಲ್ಲೊ ಎನ್ನ ಮೂಲಗುರು ಕಪಿರಾಯಪೂಜಿತ ಪ್ರಕೃತಿನಾಥ ಭೂವರಾಹ ಕೇಶವನೆ’.

ಮಾನವ ಕುಲದ ಆಸೆ, ನಿರಾಸೆ, ನಿಷ್ಟುರತೆ, ಆಸೆಬುರುಕುತನ, ಅಸೂಯೆ ಎಲ್ಲದರ ಅಭಿವ್ಯಕ್ತಿಯಾಗಿಯೇ ಬರಹ ನಿಲ್ಲುವಾಗ; ಆ ದೇವರು ಎಲ್ಲದರಲ್ಲಿಯೂ ಒಳಗೊಂಡು ಜೀವಿಸುವುದನ್ನು ನೋಡುವ ವಿಶಾಲ ದೃಷ್ಟಿಕೋನದ ನೆಲೆಯಲ್ಲಿ ನೋಡಲಾಗುತ್ತದೆ.
ಧನರಾಜಬಾಬು ಅವರ ಬರಹದ ವಿಶೇಷತೆ ಏನೆಂದರೆ ಅದು ಅವರ ಆರಾಧ್ಯದೈವ ಕಪಿರಾಯಪೂಜಿತ ಭೂವರಾಹ ಕೇಶವ ಸ್ಮರಣೆಯಲ್ಲಿ ಅಂತ್ಯವಾಗುತ್ತಲೇ ಅರ್ಥಪೂರ್ಣವಾಗುತ್ತವೆ.

ಧನರಾಜಬಾಬು ನೋಡಲು ಸರಳ ಮತ್ತು ಸಹೃದಯ. ಆದರೆ ಬಾಲ್ಯವನ್ನು ಮೀರುವಾಗಲೇ ದೈವ ದೈವತ್ವದ ತಪ್ಪಲಲ್ಲಿ ಕುಳಿತು ಆಧ್ಯಾತ್ಮದ ಚಿಂತನೆ ನಡೆಸಿದವರು ಎಂಬುದು ಅಚ್ಚರಿ ಆದರೂ ಸತ್ಯ. ಅವರ ಅನ್ವೇಷಣೆಯಲ್ಲಿ ಬದುಕು ಸ್ಪಷ್ಟತೆ ಕಂಡುಕೊಂಡಿದೆ.

ಆದರೆ ವೇಗದ ಜೊತೆ ಸೆಣಸುವ ಜನರಿಗೆ ಅವರ ವಿಚಾರಧಾರೆ ಕಬ್ಬಿಣದ ಕಡಲೆ ಆಗಿರಲೂ ಬಹುದು. ಧನರಾಜಬಾಬು ಅವರು ನಿಜವಾಗಿ ವೇಗದ ಜೊತೆ ಸೆಣಸಿ, ಸೋತು ಗೆದ್ದು ಕಲಿತವರು‌. ತಮ್ಮ ವಿವೇಕ ಮತ್ತು ಶಕ್ತಿಯುತ ಭಾವನೆಗಳಿಂದ ಇತರರನ್ನು ಬೆರಗುಗೊಳಿಸಿದವರು. ಇದೇ ಅವರ ವಿಚಾರ ಧಾರೆಗೆ ಸ್ಫೂರ್ತಿ.


ಆ ದೇವರು ಅಂದರೆ ಕಪಿರಾಯಪೂಜಿತ ಭೂವರಾಹ ಕೇಶವನು ಈ ಪ್ರಕೃತಿಯ ಒಳಗೂ ಹೊರಗೂ ಅಡಕವಾಗಿ ಕುಳಿತಿರುವಾಗ ಅದರ ಶೋಧನೆ ಜೊತೆ ಆಧ್ಯಾತ್ಮದ ಶೋಧನೆ ಕೂಡ ದೊರಕಿದರೆ ಹೇಗೆ ಜ್ಞಾನದ ಅಭಿವ್ಯಕ್ತಿ ಸಾಧ್ಯವೋ ಹಾಗೆ ಅಪರಿಮಿತ ಜ್ಞಾನದ ಹೊಳವಿನಲ್ಲಿ ಅವರ ಬರಹ ಪ್ರಕಾಶಮಾನ. ಆದರೆ ಓದುವ ಕ್ರಮ ಸರಿಯಾದ ರೀತಿಯಲ್ಲಿ ಇರಬೇಕು ಅಷ್ಟೇ.
ಒಂದು ವರ್ಷಗಳ ಹಿಂದೆ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಗೊಂಡ ಅವರ ಕೃತಿ ‘ಎನ್ಮನ ನೆರಳು’ ಆಧ್ಯಾತ್ಮದ ಅಗಾಧ ರೂಪವನ್ನೇ ಪರಿಚಯಿಸುತ್ತದೆ. ಅದರ ಹಿಂದಿನ ಶಕ್ತಿ ದೈವ ದೈವತ್ವದ ತಪ್ಪಲಿನಲ್ಲಿ ದೊರೆತ ಜ್ಞಾನೋದಯದ ಮಹತ್ವವೇ ಇರಬಹುದು.

ಅದೊಂದು ವಿಚಾರ ಶಕ್ತಿ. ಅನುಭವದ ಸಾಧ್ಯತೆಯಲ್ಲಿ ತೆರೆದುಕೊಂಡ ಬದುಕಿನ ಸಾರ ಅದು. ಕ್ರಿಯಾತ್ಮಕ ಶಕ್ತಿಯ ನೆಲೆಯಲ್ಲಿ ರೂಪುಗೊಂಡ ವೈವಿಧ್ಯಮಯ ವಿಚಾರಧಾರೆ ಮನುಷ್ಯನ ಚೇತನ, ಧರ್ಮ ಅಥವಾ ಸಮಾಜದ ಜೀವನ ಅನಿಸಲೂ ಬಹುದು.
ಸಾಮಾಜಿಕ ನೆಲೆಯಲ್ಲಿ ಸಾಧನೆ ಹೇಗಿರಬೇಕು ಎಂಬುದಕ್ಕೆ ಧನರಾಜಬಾಬು ಅವರು ಅತ್ಯುತ್ತಮ ಉದಾಹರಣೆ. ವಾಸ್ತವದ ನೆಲೆಯಲ್ಲಿ ಅವರೊಂದು ಸ್ಫೂರ್ತಿ. ಆಧ್ಯಾತ್ಮಿಕ ನೆಲೆಯಲ್ಲಿ ಅವರು ಇತರರಿಗೆ ಅನುಕರಣೆ.


ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ಅದ್ವಿತೀಯ ಸಾಧನೆ ಮಾಡಿದ ಮಹಾಪುರುಷರ ಸಾಲಿನಲ್ಲಿ ಖಂಡಿತಾ ನಿಲ್ಲಬಲ್ಲವರು. ಮುಖ್ಯವಾಗಿ ದಾನದ ಪರಿಧಿಯಲ್ಲಿ ದೀನರಿಗೆ ನೆರವಾಗಿ ದಾನದ ಮಹತ್ವ ಸಾರುವಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟವರು.

 

ಸಿನಿಮಾ-ಗಾಸಿಪ್
Social Share :

2 thoughts on “ಎಲ್ಲರಂತಲ್ಲ ಈ ನಿರ್ಮಾಪಕರು ಸತ್ಯ ಕರ್ಮದ ವಿಶ್ಲೇಷಕರು”

  1. ಮುರಳೀಧರ

    ಧನರಾಜ್ ಬಾಬು ಒಬ್ಬ ವಿಶೇಷ ಜ್ಞಾನ ಉಳ್ಳ ವ್ಯಕ್ತಿ ದೇವರಲ್ಲಿ ಅಪಾರ ನಂಬಿಕೆ ಗೌರವ ಮತ್ತು ವಿಶೇಷವಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಆಸಕ್ತಿ ವಹಿಸಿ ಪ್ರಚಾರ ವಿಲ್ಲದೆ ಸೇವೆ ಮಾಡಿರುವ ವ್ಯಕ್ತಿ.
    ಪಂಚ ಭೇದ ತಾರತಮ್ಯವಿಲ್ಲದೆ ಎಲ್ಲಾ ಸಮೂಹವನ್ನು ಸ್ವಾಗತಿಸುವ ವ್ಯಕ್ತಿ.

  2. ಸತ್ಯವಾದ ಮಾತುಗಳು, ಬಹು ಬೇಗ ಈ ಮುಗಿಯಿತಲ್ಲ ಅಂತ ಅನಿಸಿತು, ಅವರ ಬದುಕಿನ ಹೋರಾಟದ ಕಥೆ ಇನ್ನೂ ಇದೆ, ಅದನ್ನು ಸಹ ಸಂಗ್ರಹಿಸಿ ಬರೆದರೆ ಬೇರೆಯವರಿಗೆ ಸ್ಪೂರ್ತಿ ಆಗಬಹುದು,
    ಧನ್ಯವಾದಗಳು

Leave a Reply to ಮುರಳೀಧರ Cancel Reply

Your email address will not be published. Required fields are marked *