ಈ ಚಿತ್ರ ತಂದೆ ಮಗನ ಸೆಂಟಿಮೆಂಟ್ ಕಥೆ ಹೇಳುತ್ತದೆ. ಮಕ್ಕಳ ಬಗ್ಗೆ ಪರಿಣಾಮಕಾರಿ ಸಂದೇಶ ನೀಡುವ ಪ್ರಯತ್ನವಿದು..
ಹಾಗೆಂದು ಹೇಳಿಕೊಂಡಿದೆ ಚಿತ್ರತಂಡ. ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಕೊನೆಯ ಹಂತದ ಚಿತ್ರೀಕರಣ ಬಾಕಿ ಇದೆ.
ಚಿತ್ರದ ಹೆಸರು ಹರ್ಷ..!
ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಹರ್ಷ ಕಾಣಿಸಿಕೊಂಡಿದ್ದು, ರಾಘವೇಂದ್ರ ಬಿ. ಮೈಸೂರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ಸಹ ನಿರ್ದೇಶನ ಮಾಡಿದ್ದಾರೆ.
ಮುಖ್ಯ ಪಾತ್ರದಲ್ಲಿ ಪ್ರಪುಲ್ ಸುರೇಂದ್ರ ನಟಿಸಿದ್ದು, ಮಾನಸಗೌಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆಯ ಪಾತ್ರದಲ್ಲಿ ಹಿರಿಯನಟ ಶಂಕರ್ ಅಶ್ವಥ್ ನಟಿಸಿದ್ದಾರೆ. ಅಲ್ಲದೆ ಸಂಗೀತ, ಮೈತ್ರಿ, ಸುನಿಲ್ ಬನವಾಶಿ, ಸಂಜು, ಮಾದೇಗೌಡ ಹೆಗ್ಗಡ ದೇವನಕೋಟೆ, ಮನೋಜ್ ಷಡಕ್ಷರಿ, ರವಿಕುಮಾರ್ S. ಗೆಂಡೆ, ದೀಪ, ಖುಷಿ ಹೀಗೆ ಸಾಕಷ್ಟು ಕಲಾವಿದರ ತಾರಾಬಳಗವನ್ನು ಈ ಚಿತ್ರ ಒಳಗೊಂಡಿದೆ.
ಸಮೃದ್ಧಿ ರಾಘವೇಂದ್ರ ನಿರ್ಮಾಣವಿರುವ ಚಿತ್ರಕ್ಕೆ ಶಶಿಧರ್ ಎ. ಸಹ ನಿರ್ಮಾಪಕ. ಕೊಟ್ರೇಶ್ ಪಾ. ಅರುಣಾ ಛಾಯಾಗ್ರಹಣ, ಅತೀಶಯ್ ಜೈನ್ ಸಂಗೀತ, ಗಿರೀಶ್.ಎ.ಪಿ ಸಾಹಸ,
ಸುಧಾಕರ್ ಗಂಗಾವತಿ ಕಲಾನಿರ್ದೇಶನವಿದೆ.