Snehapriya.com

June 8, 2025

ವೈಶಂಪಾಯನ ತೀರಕ್ಕೆ ಸೇನ್ಸಾರ್

Social Share :

ಆರ್. ಸುರೇಶಬಾಬು ನಿರ್ಮಿಸಿ, ರಂಗಕರ್ಮಿ ರಮೇಶ್ ಬೇಗಾರ್ ನಿರ್ದೇಶಿಸಿರುವ ‘ವೈಶಂಪಾಯನ ತೀರ..’ ಚಿತ್ರಕ್ಕೆ ಸೆನ್ಸಾರ್ ಮುಗಿದಿದೆ..

ಹೆಸರಾಂತ ಕಥೆಗಾರ ಮಹಾಬಲ ಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕತೆಯನ್ನು ಆಧರಿಸಿರುವ ಈ ಚಿತ್ರದಲ್ಲಿ ಯಕ್ಷಗಾನದ ಹಿನ್ನೆಲೆಯಲ್ಲಿ ಪ್ರಕೃತಿ ಮತ್ತು ಪುರುಷನ ಸಂಬಂಧವನ್ನು ನಿರೂಪಿಸಲಾಗಿದೆ.

ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದಲ್ಲಿ
ವೈಜಯಂತಿ ಅಡಿಗ, ಉಳಿದಂತೆ ರವೀಶ್ ಹೆಗಡೆ, ಪ್ರಸನ್ನ ಶೆಟ್ಟಿಗಾರ್,
ರಮೇಶ್‌ಭಟ್, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ಗುರುರಾಜ
ಹೊಸಕೋಟೆ, ಶೃಂಗೇರಿ ರಾಮಣ್ಣ, ರವಿಕುಮಾರ್ ಪಾತ್ರ ವರ್ಗದಲ್ಲಿ ಇದ್ದಾರೆ.

ರಂಗಭೂಮಿ ಹಿನ್ನೆಯ ಸತೀಶ್‌ಪೈ ಮತ್ತು ಸಂತೋಷ್‌ಪೈ ಇದೇ ಮೊದಲ ಬಾರಿ ಸಿನಿಮಾದಲ್ಲಿ ಕಾಣಿಸಿ ಕೊಂಡಿದ್ದಾರೆ. ಶ್ರೀನಿಧಿ ಕೊಪ್ಪ – ಹಿನ್ನೆಲೆ ಸಂಗೀತ, ಶಶಿರ ಛಾಯಾಗ್ರಹಣ, ಅವಿನಾಶ್ ಸಂಕಲನ ಈ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *