ಯೋಗರಾಜ್ ಭಟ್ ನಿರ್ದೇಶನದ ಹಾಗೂ ಮಾಜಿ ಸಚಿವ ಕೌರವ ಖ್ಯಾತಿಯ ಬಿ.ಸಿ.ಪಾಟೀಲ್ ನಿರ್ಮಾಣದ ‘ಗರಡಿ’ ನವೆಂಬರ್ 10ರಂದು ಬಿಡುಗಡೆ ಕಾಣುತ್ತಿದೆ..
ಮುಂಬೈ ಮೂಲದ ರಿಲಯನ್ಸ್ ಸಂಸ್ಥೆ ಚಿತ್ರದ ಜೊತೆ ಒಪ್ಪಂದ ಮಾಡಿಕೊಂಡಿರುವುದರಿಂದ ಚಿತ್ರವನ್ನು ದೇಶವ್ಯಾಪಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಹಾಗಾಗಿ ಶೀರ್ಷಿಕೆ ಹಾಡಿನ ಜೊತೆ ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ. ನವೆಂಬರ್ 10ರಂದು
ದೇಶಾದ್ಯಂತ ಗರಡಿ ಟೂರ್ನಮೆಂಟ್
ಗರಡಿ ಎಳೆತ ಸೆಳೆತ ಎಂದು ನಕ್ಕರು ಬಿ.ಸಿ.ಪಾಟೀಲ್.
ಚಿತ್ರದಲ್ಲಿ ಸೂರ್ಯ (ಯಶಸ್ ಸೂರ್ಯ) ಮುಖ್ಯ ಪಾತ್ರದಲ್ಲಿದ್ದು, ಅವರೀಗ ಯಶಸ್ ತೆಗೆದು ಗರಡಿ ಸೂರ್ಯ ಆಗಿದ್ದಾರೆ. ಸುಮಾರು 20 ವರ್ಷಗಳಿಂದ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಹಾಗಾಗಿ ಹೆಸರು ಬದಲಿಸಿಕೊಳ್ಳಲು ಸಲಹೆ ಬಂದ ಹಿನ್ನೆಲೆಯಲ್ಲಿ ಈಗ ಬದಲಾಗಿದೆ ಎಂದು ವಿವರ ಕೊಟ್ಟರು ಗರಡಿ ಸೂರ್ಯ.
ಅಂದ ಹಾಗೆ ಸೂರ್ಯ ಹಾಗೂ ಬಿ.ಸಿ.ಪಾಟೀಲರ ಅಳಿಯ ಸುಜಯ್ ಮೈಸೂರಿನಲ್ಲಿ ಗರಡಿ ಪಟ್ಟುಗಳ ತರಬೇತಿ ಪಡೆದರು ಎಂಬ ಮಾಹಿತಿಯೂ ಬಂತು.
ವನಜಾ ಪಾಟೀಲ್ ನಿರ್ಮಾಣದ ಈ ಚಿತ್ರದಲ್ಲಿ ಅವರ ಪುತ್ರಿ ಸೃಷ್ಟಿ ಪಾಟೀಲ್ ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿ ದುಡಿದಿದ್ದಾರೆ.
ನೃತ್ಯ ನಿರ್ದೇಶಕ ಧನಂಜಯ್ ಬಸವರಾಜು (ಧನು ಮಾಸ್ಟರ್), ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ
ಛಾಯಾಗ್ರಾಹಕ ನಿರಂಜನ್ ಬಾಬು
ಖಳನಾಗಿ ಕಾಣಿಸಿಕೊಂಡಿರುವ ರಘು ಈ ಸಂದರ್ಭದಲ್ಲಿ ಮಾತನಾಡಿದರು.
ನಟಿ ಸೋನೆಲ್ ಮಾಂಟೇರೋ ಹಾಗೂ ನಟ ಧರ್ಮಣ್ಣ ಶೂಟಿಂಗ್ ಸಂದರ್ಭದ ತಮಾಷೆಯ ಪ್ರಸಂಗಗಳನ್ನು ವರ್ಣಿಸಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಕೊನೆಯ ಸಾಹಸ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ಸೂರ್ಯ ಅವರನ್ನು ಹಾಕಿಕೊಂಡು ಚಿತ್ರ ಮಾಡಿದರೆ, ಒಂದು ಹಾಡು ಅಥವಾ ಫೈಟ್ ನಲ್ಲಿ ಕಾಣಿಸಿಕೊಳ್ಳುವುದಾಗಿ ನೀಡಿದ ವಾಗ್ದಾನದಂತೆ ನಡೆದುಕೊಂಡಿದ್ದಾರೆ ಎಂಬ ಮಾಹಿತಿ ಕೊಟ್ಟರು ಬಿ.ಸಿ.ಪಾಟೀಲ್.
ದರ್ಶನ್ ಅವರು ಸಿನಿಮಾದಲ್ಲಿ ನನಗೆ ಮರುಜನ್ಮ ನೀಡಿದ್ದಾರೆ. ಅವರಿಂದ ನಾನು ಚಿತ್ರದಲ್ಲಿ ಅಭಿನಯಿಸಿರುವೆ ಎಂದು ನೆನೆದರು ಸೂರ್ಯ.
ಹಿಂದೆ ಗರಡಿ ಮನೆಗಳು ಊರಿನ ಪೊಲೀಸ್ ಠಾಣೆಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು ಎಂದರು ನಿರ್ದೇಶಕ ಯೋಗರಾಜ್ ಭಟ್.
ಗರಡಿ ಮನೆಯ ನಿಜವಾದ ವೈಭವ ತೋರುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗಿದೆ ಎಂದರು.