* ಇದೇ ವಾರ (ನ.10) ಬಿಡುಗಡೆ
* ಅತಿಥಿ ಪಾತ್ರದಲ್ಲಿ ದರ್ಶನ್
* ಬಿ.ಸಿ.ಪಾಟೀಲ್ ಬಂಡವಾಳ
ಯೋಗರಾಜ್ ಭಟ್ ನಿರ್ದೇಶನದ ಹಾಗೂ ಮಾಜಿ ಸಚಿವ ಕೌರವ ಖ್ಯಾತಿಯ ಬಿ.ಸಿ.ಪಾಟೀಲ್ ನಿರ್ಮಾಣದ ‘ಗರಡಿ’ ಇದೇ ವಾರ ಅಂದರೆ ನವೆಂಬರ್ 10ರಂದು ಬಿಡುಗಡೆ ಕಾಣುತ್ತಿದೆ..
ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಕೊನೆಯ ಸಾಹಸ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ಅವರು ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಚಿತ್ರದಲ್ಲಿ ಬಿ.ಸಿ.ಪಾಟೀಲ್ ಹಾಗೂ ಸೂರ್ಯ (ಯಶಸ್ ಸೂರ್ಯ) ಮುಖ್ಯ ಪಾತ್ರದಲ್ಲಿದ್ದು,
ಬಿ.ಸಿ.ಪಾಟೀಲರ ಅಳಿಯ ಸುಜಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವನಜಾ ಪಾಟೀಲ್ ನಿರ್ಮಾಣದ ಈ ಚಿತ್ರದಲ್ಲಿ ಅವರ ಪುತ್ರಿ ಸೃಷ್ಟಿ ಪಾಟೀಲ್ ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿ ದುಡಿದಿದ್ದಾರೆ.
ಧನು ಮಾಸ್ಟರ್ ನೃತ್ಯ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ನಿರಂಜನ್ ಬಾಬು ಛಾಯಾಗ್ರಹಣವಿದೆ.
ನಟಿ ಸೋನೆಲ್ ಮಾಂಟೇರೋ ಪ್ರಧಾನ ಪಾತ್ರದಲ್ಲಿದ್ದು, ಧರ್ಮಣ್ಣ ಹಾಗೂ ಇತರ ಕಲಾವಿದರು ಪ್ರಮುಖ ಭೂಮಿಕೆಯಲ್ಲಿದ್ದಾರೆ.
ಹಿಂದೆ ಗರಡಿ ಮನೆಗಳು ಊರಿನ ಪೊಲೀಸ್ ಠಾಣೆಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು. ಹಾಗಾಗಿ
ಗರಡಿ ಮನೆಯ ನಿಜವಾದ ವೈಭವ ತೋರುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗಿದೆ ಎಂಬುದು ನಿರ್ದೇಶಕ ಯೋಗರಾಜ್ ಭಟ್ ಅವರ ವಿವರಣೆ.
ಮುಂಬೈ ಮೂಲದ ರಿಲಯನ್ಸ್ ಸಂಸ್ಥೆ ಚಿತ್ರದ ಜೊತೆ ಒಪ್ಪಂದ ಮಾಡಿಕೊಂಡಿರುವುದರಿಂದ ಚಿತ್ರವನ್ನು ದೇಶವ್ಯಾಪಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂಬುದು ಬಿ.ಸಿ.ಪಾಟೀಲರ ಮಾಹಿತಿ.