* ಸೆ.27 ಸಂಜು ಬಿಡುಗಡೆ *
* ಪತ್ರಕರ್ತ ಯತಿರಾಜ್ ನಿರ್ದೇಶನ *
* ಇದು ಟೀನೇಜ್ ಲವ್ ಸ್ಟೋರಿ *
ಪತ್ರಕರ್ತ ಹಾಗೂ ನಟರಾಗಿ ಗುರುತಿಸಿಕೊಂಡಿರುವ ಯತಿರಾಜ್ ಈಗ ನಿರ್ದೇಶಕರಾಗಿಯೂ ಪರಿಚಯ. ಅವರ ಮತ್ತೊಂದು ಚಿತ್ರ ‘ಸಂಜು’ ಈ ವಾರ ಬಿಡುಗಡೆ ಕಾಣುತ್ತಿದೆ.
ಪ್ರೇಮ ಕಥೆ; ಭಾವನಾತ್ಮಕ ಸಂಬಂಧ ಹಾಗೂ ಪ್ರಕೃತಿ ಈ ಮೂರು ಅಂಶಗಳ ಜೊತೆ ಬೆರೆತಿರುವ ಅದಮ್ಯ ಜೋಡಿಯೊಂದರ ಕಥೆಯನ್ನು ಪ್ರಸ್ತುತ ಪಡಿಸುತ್ತಿರುವ ಆಶಯವನ್ನು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.
‘ಸಂಜು ವೆಡ್ಸ್ ಗೀತಾ’ ಎಂಬ ಅನನ್ಯ ಪ್ರೇಮ ಕಥೆಯನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿದ ಪ್ರೇಕ್ಷಕ ‘ಸಂಜು’ ವನ್ನೂ ವಿಶಾಲ ನೆಲೆಯಲ್ಲಿ ಸ್ವೀಕರಿಸಬಲ್ಲ ಎಂಬುದು ಅವರ ಗಟ್ಟಿಯಾದ ನಂಬಿಕೆ.
ಹದಿ ಹರೆಯದಲ್ಲಿ ಎದುರಾಗುವ ಸೋಲು, ಅವಮಾನ, ಹತಾಶೆಗಳಿಂದ ಅನೇಕರ ಬದುಕು ಕುಗ್ಗಿ ಹೋಗಬಹುದು..
ಇಂತಹ ಸಂದರ್ಭವನ್ನು ಕೆಲವರು ಸವಾಲಾಗಿಯೂ ಸ್ವೀಕರಿಸಬಹುದು. ಹೆಚ್ಚಿನವರು ಕುಗ್ಗಿ ಹೋಗುತ್ತಾರೆ. ಈ ಎರಡೂ ಸಂದರ್ಭವನ್ನು ಸಂಜುವಿನಲ್ಲಿ ಹೇಳಲಾಗಿದೆ ಎಂಬುದು ಯತಿರಾಜ್ ನೀಡುವ ವಿವರಣೆ.
ಮೈಸೂರಿನ ಸಂತೋಷ್ ಡಿ.ಎಂ ಇದರ ನಿರ್ಮಾಪಕ. ಚಿತ್ರೀಕರಣದ ವೇಳೆ ಯಾವುದೇ ಕೊರತೆ ಬರದಂತೆ ನಿರ್ಮಾಪಕರು ನೋಡಿಕೊಂಡರು.
ಮಡಿಕೇರಿಯ ಮೂರ್ನಾಡುವಿನಲ್ಲಿ ಹಾಕಲಾಗಿದ್ದ ಬಸ್ ಸ್ಟಾಪ್ ಸೆಟ್ ಚಿತ್ರದ ಮುಖ್ಯಾಂಶವಾಗುತ್ತದೆ ಎಂದರು ನಿರ್ದೇಶಕರು.
ಸುಂದರಶ್ರೀ, ಸಂಗೀತ, ಬಲರಾಜ್ ವಾಡಿ, ಅಪೂರ್ವ, ಬೌ ಬೌ ಜಯರಾಮ್, ಮಹಂತೇಶ್, ಪ್ರಕಾಶ್ ಶೆಣೈ ಮತ್ತು ಕಾತ್ಯಾಯಿನಿ ಅವರುಗಳ ಅಭಿನಯ ಅತ್ಯುತ್ತಮ.
ಮುಖ್ಯ ಪಾತ್ರದಲ್ಲಿರುವ ಸಾತ್ವಿಕ ಹಾಗೂ ಮನ್ವಿತ್ ಜೋಡಿಯ ಅಭಿನಯ ಅವರಿಗೆ ಅವರೇ ಸಾಟಿ..
ಛಾಯಾಗ್ರಾಹಕ ವಿದ್ಯಾ ನಾಗೇಶ್, ಸಂಗೀತ ನಿರ್ದೇಶಕ ವಿಜಯ್ ಹರಿತ್ಸ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ನೃತ್ಯ ಸಂಯೋಜನೆ ಮಾಡಿರುವ ಮದನ್- ಹರಿಣಿ, ಸಂಜೀವ ರೆಡ್ಡಿ ಸಂಕಲನ ಮತ್ತು ಸೋನುಸಾಗರ ಹಾಗೂ ಅರುಣ್ ಕುಮಾರ್ ಅವರ ಸಹ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳು ಬಂದವು.