*ಕಾಲಾಪತ್ಥರ್ ಸೆ.13 ತೆರೆಗೆ*
* ಚಿತ್ರದ ಟ್ರೈಲರ್ ಬಿಡುಗಡೆ *
ವಿಕ್ಕಿ ವರುಣ್ ಹಾಗೂ ಧನ್ಯಾ ರಾಮ್ ಕುಮಾರ್ ನಟಿಸಿರುವ ‘ಕಾಲಾಪತ್ಥರ್’ ಚಿತ್ರವು ಇದೇ ವಾರ ಬಿಡುಗಡೆ ಕಾಣುತ್ತಿದ್ದು, ಅದಕ್ಕೆ ಪೂರಕವಾಗಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ.
ಈಚೆಗೆ ಅದ್ದೂರಿ ಸಮಾರಂಭದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ತಂಡವನ್ನು ಹಾರೈಸಿದರು.
‘ಇಲ್ಲಿ ದೊಡ್ಡ ಚಿತ್ರ ಸಣ್ಣ ಚಿತ್ರ ಎಂಬುದಿಲ್ಲ ಕ್ರಿಯಾಶೀಲ ನಡೆಯ ಶ್ರದ್ಧೆಯಿಂದ ಮಾಡಿದ ಎಲ್ಲಾ ಚಿತ್ರಗಳು ಉತ್ತಮ ಚಿತ್ರಗಳೇ..’ ಎಂದು ಹೇಳಿದರು ಶಿವಣ್ಣ.
ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ ಈ ಚಿತ್ರವನ್ನು ವಿಕ್ಕಿ ವರುಣ್ ಅವರೇ ನಿರ್ದೇಶನ ಮಾಡಿದ್ದಾರೆ.
ಈಗ ದೊಡ್ಡ ಸತ್ವ ಪರೀಕ್ಷೆ ನಮ್ಮ ಮುಂದೆ ಇದೆ. ಈ ಚಿತ್ರದ ಆಶಯಗಳು ದೊಡ್ಡದಾಗಿವೆ ಎಂದವರು ನಿರ್ದೇಶಕ ಕಮ್ ನಟ ವಿಕ್ಕಿ ವರುಣ್.
ಶಿವಣ್ಣ ಮಾವ ಟ್ರೇಲರ್ ಬಿಡುಗಡೆ ಮಾಡಿಕೊಟ್ಟು ಆಶೀರ್ವಾದ ಮಾಡಿರುವುದು ಖುಷಿಯಾಗಿದೆ.
ವಿನಯ್ ರಾಜ್ ಕುಮಾರ್ ಸಹ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈ ಚಿತ್ರದಲ್ಲಿನ ಪಾತ್ರ ವಿಭಿನ್ನವಾಗಿದೆ ಎಂದರು ಧನ್ಯ ರಾಮ್ ಕುಮಾರ್.
ಚಿತ್ರದಲ್ಲಿ ನಟಿಸಿರುವ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ, ರಾಜೇಶ್ ನಟರಂಗ, ಚಕ್ರವರ್ತಿ ಚಂದ್ರಚೂಡ್ ಮೊದಲಾದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು.
ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು.