ದುನಿಯಾ ವಿಜಯ್ ಅವರ ಸಲಗ ಚಿತ್ರವು ಯುವಜನರ ಹಾಟ್ ಫೆವರಿಟ್ ಆಗಿ ಹೊಮ್ಮಿದೆ..
ಬಿಡುಗಡೆ ಕಂಡು ವಾರ ಕಳೆದರೂ ಅದರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ನಡೆದಿದೆ. ಚಿತ್ರಮಂದಿರಗಳು ಹೌಸ್ ಫುಲ್ ಬೋರ್ಡ್ ಹೇರಿಕೊಳ್ಳುತ್ತಲೇ ನಡೆದಿವೆ.
ಇದರ ಮಧ್ಯೆ ಮುಖ್ಯ ಚಿತ್ರಮಂದಿರ ತ್ರಿವೇಣಿಗೆ ಎದುರಾಗಿದ್ದ ತೊಂದರೆಯೂ ಈಗ ತಪ್ಪಿದೆ. ಅಲ್ಲಿ ಈ ವಾರ ಬಿಡುಗಡೆ ಕಾಣಬೇಕಿದ್ದ ಚಿತ್ರವು ಪಕ್ಕದ ಅನುಪಮ ಚಿತ್ರಮಂದಿರಕ್ಕೆ ವರ್ಗಾವಣೆಯಾಗಿದೆ.
‘ಸಲಗ’ ಚಿತ್ರದ ಗಳಿಕೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರನ್ನು ಖುಷಿಯಾಗಿಸಿದೆ. ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಅವರಿಗಂತೂ ಮೊದಲಿನಿಂದಲೂ ಚಿತ್ರದ ಬಗ್ಗೆ ಹೆಮ್ಮೆ. ಚಿತ್ರವು ಗೆದ್ದೆ ಗೆಲ್ಲುತ್ತದೆ ಎಂಬ ನಂಬಿಕೆ. ಹಾಗಾಗಿ ಪ್ರೇಕ್ಷಕನ ಹವಾ ನೋಡಿ ಸಹಜವಾಗಿ ಥ್ರಿಲ್ಲಾಗಿದ್ದಾರೆ. ಬಹಳ ಸಮಯದ ಬಳಿಕ ಯುಜ ಜನತೆ ಚಿತ್ರಮಂದಿರಗಳತ್ತ ಎಡತಾಕುತ್ತಿರುವುದು ಚಿತ್ರೋದ್ಯಮದ ಮಂದಿಯಲ್ಲಿ ಸಂತಸ ತುಂಬಿದೆ.