* ಐದು ಲಕ್ಷ ವೈಯಕ್ತಿಕ ಚೆಕ್ ನೀಡಿಕೆ
* ಬನಾರಸ್ ನಟನ ಹೃದಯ ವೈಶಾಲ್ಯ
* ಜೈದ್ ಖಾನ್ ಸಚಿವ ಜಮೀರ್ ಅಹಮದ್ ಪುತ್ರ
ಕಳೆದ ಒಂದು ತಿಂಗಳ ಹಿಂದೆ ಮೆದುಳಿನ ರಕ್ತಸ್ರಾವದಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಹಿರಿಯ ನಟಿ ಹೇಮಾ ಚೌಧರಿ ಅವರ ನಿವಾಸಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಹಾಗೂ ಚಿತ್ರನಟ ಜೈದ್ ಖಾನ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಇದೇ ವೇಳೆ ಹೇಮಾ ಚೌಧರಿ ಅವರಿಗೆ ಐದು ಲಕ್ಷ ರೂ.ಗಳ ವೈಯಕ್ತಿಕ ಚೆಕ್ ನೀಡಿದ ಜೈದ್ ಖಾನ್ ಸಂಪೂರ್ಣ ಗುಣಮುಖರಾಗುವಂತೆ ಹಾರೈಸಿದರು.
ಬನಾರಸ್ ಚಿತ್ರದ ಮೂಲಕ ಮನೆ ಮಾತಾಗಿರುವ ಜೈದ್ ಖಾನ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಪ್ರಯತ್ನಿಸುತ್ತಿರುವ ನಟ. ಮಾನವೀಯ ಅನುಕಂಪದ ನೆಲೆಯಲ್ಲಿ ಚಿಂತನೆ ನಡೆಸುವ ಜೈದ್ ಖಾನ್ ಚಿತ್ರರಂಗದಲ್ಲಿ ಕಷ್ಟದಲ್ಲಿರುವ ಹಿರಿಯರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಹಿರಿಯ ನಟಿ ಹೇಮಾಚೌಧರಿ ಕನ್ನಡ ಚಿತ್ರರಂಗಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಮತ್ತು ನಟನೆಗೆ ಮಾರು ಹೋಗಿರುವುದಾಗಿ ಇದೇ ವೇಳೆ ಜೈದ್ ಖಾನ್ ತಿಳಿಸಿದರು.
ವಿಧಾನ ಪರಿಷತ್ ನ ಮಾಜಿ ಸದಸ್ಯ ಸರೋವರ್ ಶ್ರೀನಿವಾಸ್ ಈ ಸಂದರ್ಭದಲ್ಲಿ ಜೈದ್ ಖಾನ್ ಅವರ ಜೊತೆಗಿದ್ದರು.