ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಅಭಿಮಾನಿಗಳ ತಲೆಗೆ ಮತ್ತೆ ಹುಳ ಬಿಟ್ಟಿದ್ದಾರೆ.
ಈ ಬಾರಿ ನಿರ್ದೇಶನದ ಕ್ಯಾಪ್ ಹಾಕಲಿರುವ ಉಪೇಂದ್ರ ಮಾರ್ಚ್ 11ರ ಶುಕ್ರವಾರ ಹೊರಬಿಟ್ಟಿರುವ ಪೋಸ್ಟರ್ ಅತ್ಯಂತ ರೋಚಕವಾಗಿದೆ.
ಲಹರಿ ಸಂಸ್ಥೆ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ಈ ರೋಚಕ ಅಂಶಗಳು ಎದ್ದು ಕಾಣುತ್ತವೆ; ಏಕೆಂದರೆ ಪೋಸ್ಟರ್ ಅನೇಕ ಪುರಾತನ ಕಥೆಯನ್ನು ಹೇಳುತ್ತದೆ.
ಮುಖ್ಯವಾಗಿ ಹೋರಾಟದ ವ್ಯಕ್ತಿಯೊಬ್ಬ ಕುದುರೆ ಮೇಲೆ ಕುಳಿತ್ತಿದ್ದರೆ; ಕಾಲಿನ ಬಳಿ ಯು ಆಕಾರವಾಗಿ ಬೆಂಕಿಯುಂಡೆ ಕಾಣಿಸುತ್ತದೆ. ಇದು ಕುದುರೆಯ ಲಾಳವೋ.. ಉರಿಯುತ್ತಿರುವ ಯು ಆಕಾರವೋ ಎಂಬ ಪ್ರಶ್ನೆಯನ್ನು ಪ್ರೇಕ್ಷಕನ ತಲೆಯ ತುಂಬ ಕಿಡಿಯ ರೂಪದಲ್ಲಿ ತುಂಬಿದೆ.
ಈ ಚಿತ್ರ ಏಳು ಭಾಷೆಗಳಲ್ಲಿ ನಿರ್ಮಾಣವಾಗಲಿದೆ ಎಂಬ ಕ್ಲ್ಯೂ ಬಿಡಲಾಗಿದೆ. ಅದರ ಹೊರತು ನಿರ್ಮಾಣ ಸಂಸ್ಥೆ ಹೆಸರಿದೆ. ಈಚೆಗೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ತಮ್ಮ ಹೊಸ ಚಿತ್ರದ ಪೋಸ್ಟರ್ 11ರಂದು ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ಕೆಲ ದಿನಗಳ ಹಿಂದೆ ಉಪೇಂದ್ರ ಅವರು, ಹೊಸ ಜಮಾನದಲ್ಲಿ ಒಂದು ಸಿನಿಮಾ ಮಾಡುತ್ತೇನೆ ಕಾದು ನೋಡಿ ಎಂದು ಹೇಳಿದ್ದರು. ಇದೀಗ ಪೋಸ್ಟರ್ ನಲ್ಲಿ ಕುತೂಹಲ ಹುಟ್ಟಿಸಿದ್ದಾರೆ.