ಕಂಟ್ರಿಮೇಡ್ ಎಂದ ತಕ್ಷಣವೇ ಪಿಸ್ತೂಲ್ ನೆನಪಾಗುತ್ತದೆ. ಇಲ್ಲಿ ಅದರ ಪೀಠಿಕೆ ಏಕೆಂದರೆ ಭೂಗತ ಜಗತ್ತಿನ ಸುತ್ತ ಹೆಣೆಯಲಾದ ಕಥೆ ಹೊಂದಿರುವ ಸಿನಿಮಾಗೆ ಈ ಹೆಸರಿಡಲಾಗಿದೆ.
ಅಂದ ಹಾಗೆ ಬೆಂಗಳೂರಿನ ಬನಶಂಕರಿಯಲ್ಲಿರುವ ಶ್ರೀಧರ್ಮಗಿರಿ ಮಂಜುನಾಥ ದೇವಾಲಯ ಆವರಣದಲ್ಲಿ ಈಚೆಗೆ ‘ಕಂಟ್ರಿಮೇಡ್’ ಮುಹೂರ್ತ ಚಿತ್ರಕ್ಕೆ ಮುಹೂರ್ತ ಜರುಗಿತು.
ದುನಿಯಾ ವಿಜಯ್, ನಾಗ್ ಶೇಖರ್, ತಬಲನಾಣಿ, ವಶಿಷ್ಠ ಸಿಂಹ ಮೊದಲಾದ ಗಣ್ಯರು ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರತಂಡ ಮಾಧ್ಯಮಗಳಿಗೆ ಉತ್ಸಾಹದಿಂದಲೇ ವಿವರ ನೀಡಿತು.
ನಿರ್ದೇಶಕ ರಾಘವಸೂರ್ಯ ಚಿತ್ರದ ಬಗ್ಗೆ ವಿವರ ನೀಡಿದರು. ಇದು ಭೂಗತ ಜಗತ್ತಿನ ವ್ಯಕ್ತಿಯೊಬ್ಬನ ಕಥೆ. ಉತ್ತರ ಕರ್ನಾಟಕ ಮೂಲದ ಆತ ಅಲ್ಲಿಂದ ಕೋಲ್ಕತ್ತಾಗೆ ತೆರಳಿ ಭೂಗತ ಜಗತ್ತಿನೊಂದಿಗೆ ಗುರುತಿಸಿಕೊಳ್ಳುವ ಹೋರಾಟದ ಕಥೆ ಇದೆ.
ಗನ್ ಇಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಚಿತ್ರಕ್ಕೆ :ಕಂಟ್ರಿಮೇಡ್’ ಎಂಬ ಹೆಸರನ್ನು ಇಡಲಾಗಿದೆ. ನಿಶ್ಚಿತ್ ಕರೋಡಿ ಗ್ಯಾಂಗ್ ಸ್ಟರ್ ಪಾತ್ರವನ್ನು ನಿರ್ವಹಿಸುತ್ತಿದ್ದು, ಅವರ ಎದುರು ರಚೇಲ್ ಡೆವಿಡ್ ನಟಿಸುತ್ತಿದ್ದಾರೆ ಎಂಬ ಮಾಹಿತಿಗಳು ಬಂದವು.
ಗಂಟು ಮೂಟೆ ಹಾಗೂ ಟಾಮ್ ಅಂಡ್ ಜರ್ರಿಯಲ್ಲಿ ವಿಭಿನ್ನ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದ ನಿಶ್ಚಿತ್ ಕರೋಡಿ ಇಲ್ಲಿ ಭೂಗತ ಜಗತ್ತಿನ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಚೆಲ್ ಡೆವಿಡ್ ಅವರಿಗೆ ಚಾಲ್ ಲೇಟ್ ಬೇಬಿ ರೀತಿಯ ಪಾತ್ರ.
ನಿರ್ದೇಶಕರ ಪ್ರಕಾರ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆ ನಂತರ ಕೊಲ್ಕತ್ತಾ ಕಡೆ ಹೊರಳುತ್ತದೆ. ಶೂಟಿಂಗ್ ಸಹ ಸದ್ಯದಲ್ಲೇ ಅದೇ ಭಾಗಗಳಲ್ಲಿ ನಡೆಯುತ್ತದೆ..
ತೆಲುಗು ಲವ್ ಮಾಕ್ ಟೇಲ್ ಅವತರಣಿಕೆ ನಿರ್ಮಾಣ ಮಾಡಿದ ಭಾವನಾ ರವಿ ನಿರ್ಮಾಪಕಿ. ದೀಪು ಎಸ್ ಕುಮಾರ್ ಸಂಕಲನ, ನಕುಲ್ ಅಭಯಂಕರ್ ಸಂಗೀತ ಚಿತ್ರಕ್ಕಿದೆ.