ಈಗಾಗಲೇ ಯುವಜನರ ಬಾಯಿಯ ಚಾಕೋಲೇಟ್ ಆಗಿರುವ ಹಾಡು ಒಂದು ಕೋಟಿಗೂ ಅಧಿಕ ಜನರನ್ನು ತಲುಪಿಬಿಟ್ಟಿದೆ. ಹಾಗಾಗಿ ಚಿತ್ರತಂಡ ಖುಷಿಯ ಭಾವಗಳಲ್ಲಿ ತೇಲಾಡಿತು..
‘ಹಾಯಾಗಿದೆ.. ಎದೆಯೊಳಗೇ..’ ಎಂಬ ಎದೆಯನ್ನು ಪುಳಕಗೊಳಿಸುವ ಹಾಡನ್ನು ಮುಂದಿಟ್ಟುಕೊಂಡೇ ಪ್ರಚಾರ ಸಭೆಯಲ್ಲಿ ಭಾಗವಹಿಸಿತ್ತು ಚಿತ್ರತಂಡ.
ಅದು ‘ಟಾಮ್ ಅಂಡ್ ಜರ್ರಿ’ ಆದರೆ ವಾಲ್ ಡಿಸ್ನಿಯವರದಲ್ಲ.. ಅಪ್ಪಟ ಕನ್ನಡ ಪ್ರತಿಭೆಗಳು ಸೇರಿ ಮಾಡಿರುವ ಚಿತ್ರದ ಹೆಸರು. ಚಿತ್ರದ ಹಾಡುಗಳು ಹಾಗೂ ಮೇಕಿಂಗ್ ವಿಡಿಯೋ ಗಮನ ಸೆಳೆಯಿತು.
ಮುಖ್ಯವಾಗಿ ‘ಹಾಯಾಗಿದೆ… ಎದೆಯೊಳಗೆ..’ ಸೃಷ್ಟಿಸಿದ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ಚಿತ್ರದ ಆಶಯಗಳ ಕುರಿತು ಮಾತನಾಡಿದರು. ಹಾಡು ನಮ್ಮ ನಿರೀಕ್ಷೆಯನ್ನು ಎಲ್ಲೋ ಹೊರಟು ಹೋಗಿದೆ. ಈ ಹಾಡಿನ ಗಾಯಕ ಸಿದ್ ಶ್ರೀರಾಮ್ ಕನ್ನಡಕ್ಕೆ ಹಾಡಿದ ಮೊದಲ ಹಾಡು ಇದು.. ಇದರ ದೃಶ್ಯ ಸಂಯೋಜನೆ ಕೂಡ ಅದ್ಭುತವಾಗಿದೆ ಎಂದು ವಿವರಗಳನ್ನು ನೀಡುತ್ತಾ ಹೋದರು.
ನಿರ್ಮಾಪಕ ರಾಜು ಶೇರಿಗಾರ್ ಸಹ ಖುಷಿಯಲ್ಲಿದ್ದರು. ಚಿತ್ರದ ಬಜೆಟ್ ಲೆಕ್ಕ ಹಾಕುವುದಿಲ್ಲ.. ಚಿತ್ರಕ್ಕೆ ಅಗತ್ಯವೇನಿತ್ತು ಅದನ್ನು ಪೂರೈಸಲಾಗಿದೆ. ಇದು ಪ್ರೇಮದ ತುಂಟಾಟ ಬೆರೆತ ಚಿತ್ರ ಎಂದರು.
ನಿರ್ದೇಶಕ ರಾಘವ್ ವಿನಯ್ ಶಿವಗಂಗೆ ಅವರು ‘ಕೆ.ಜಿ.ಎಫ್’ ಚಿತ್ರದ ಮೂಲಕ ಅನುಭವಗಳನ್ನು ಪಡೆದುಕೊಂಡವರು. ಕೊಂಚ ಆಧ್ಯಾತ್ಮದ ಕಡೆಗೆ ವಾಲಿರುವ ಅವರು ಚಿತ್ರದಲ್ಲಿ ಕೂಡ ಅದನ್ನೇ ತುಂಬಿರುವುದಾಗಿ ವಿವರ ನೀಡಿದರು.
ಟೈಟಲ್ ಸಾಂಗ್ ಆಧ್ಯಾತ್ಮವನ್ನು ಹೊಂದಿದೆ. ಕಮರ್ಷಿಯಲ್ ಆಗಿ ಹೇಳೋಕೆ ಹೋದ್ರೆ ನಾಯಕ ನಟ ಗುರಾಯಿಸಿದರೆ ಹೊಡೆದಾಟ ಮಾಡ್ತಾನೆ, ನಾಯಕಿ ಗುರಾಯಿಸಿದರೆ ನಗೆ ಬೀರುತ್ತಾಳೆ. ಧರ್ಮ, ಸತ್ಯ ವೈರುಧ್ಯ ಎಲ್ಲವೂ ಇದೆ.
ಸಂತೋಷವಾಗಿ ಇರಲು ನೆಪಗಳು ಬೇಕು.. ‘ನಾಳೆ ಬಿರಿಯಾನಿಗೆ ಇವತ್ತಿನ ಚಿತ್ರಾನ್ನ ಮರೆಯಬಾರದು’ ಎಂದು ಆಧ್ಯಾತ್ಮ ಬೆರೆಸುವ ರೀತಿಯಲ್ಲಿ ಮಾತನಾಡುತ್ತಾ ಹೋದರು ನಿರ್ದೇಶಕರು.
ಅರ್ಜುನ್ ಮಾಸ್ಟರ್ ಸಾಹಸ, ಸಂಕೇತ್ ಛಾಯಾಗ್ರಹಣವಿದೆ. ಚಿತ್ರವನ್ನು ನವೆಂಬರ್ 12 ಕ್ಕೆ ಬಿಡುಗಡೆ ಮಾಡುವ ಆಶಯವಿದೆ ಎಂದರು. ಮುಖ್ಯ ಪಾತ್ರ ಮಾಡಿರುವ ನಿಶ್ಚಿತ್ ಹಾಗೂ ಚೈತ್ರಾ ಹಿರೋಯಿನ್ ಪಾತ್ರಗಳ ಬಗ್ಗೆ ಹೇಳಿಕೊಂಡರು. ಕಾರ್ಯಕಾರಿ ನಿರ್ಮಾಪಕ ವಿನಯ್ ಚಂದ್ರ, ಸಾಹಸ ನಿರ್ದೇಶಕ ಅರ್ಜುನ್ ರಾಜ್, ಖಳನಟ ಗುಣಶೇಖರ್ ಮಾತನಾಡಿದರು. ಹಾಡು ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಅರ್ಧ ಗೆದ್ದ ಖುಷಿಯಲ್ಲಿರುವ ತಂಡಕ್ಕೆಹಾಡಿನ ಆಶಯದಂತೆ ಹಾಯಾಗಿರಲಿ ಕೊಂಚ ಸಮಯವೇ ಹಿಡಿಯುತ್ತದೆ..