ಚಂದ್ರಕೀರ್ತಿ ಮುಖ್ಯಪಾತ್ರದಲ್ಲಿ ನಟಿಸಿ ನಿರ್ದೇಶನ ಮಾಡಿರುವ ಮನರಂಜನಾತ್ಮಕ ಥ್ರಿಲ್ಲರ್ ಚಿತ್ರವು ಬಿಡುಗಡೆಗೆ ಸಜ್ಜುಗೊಂಡಿದೆ. ಚಿತ್ರದ ಬಿಡುಗಡೆ ಪೂರ್ವದಲ್ಲಿ ಟ್ರೈಲರ್ ಮೂಲಕ ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ.
ಅಂದ ಹಾಗೆ ಚಿತ್ರದ ಹೆಸರು ‘ತೂತು ಮಡಿಕೆ’. ಆ ಹೆಸರು ಏಕೆ ಎಂಬುದಕ್ಕೆ ತಂಡದಿಂದ ಸಮರ್ಪಕ ಉತ್ತರ ಬರಲಿಲ್ಲ.. ಆದರೆ ಸ್ನೇಹಿತರಿಬ್ಬರ ಹರ ಸಾಹಸದ ಜೊತೆಗೆ ಮಾನವೀಯ ಅನುಕಂಪದ ಜನರ ನಡೆಯ ವಿವರಗಳು ಬಂದವು.
ಇದು ಕೊರೊನಾ ಮುಂಚೆ ಆರಂಭವಾದ ಚಿತ್ರ. ಒಂದು ರೀತಿಯಲ್ಲಿ ತಡವಾಗಿದೆ. ಆದರೆ ಚಿತ್ರ ಸ್ಯಾಟಲೈಟ್, ಓಟಿಟಿ ಗೆ ಮಾರಾಟವಾಗಿದೆ. ಹಾಗಾಗಿ ನಿರ್ಮಾಪಕರು ಲಾಭದಲ್ಲಿದ್ದಾರೆ ಎಂಬ ವಿವರಗಳು ಬಂದವು..
ವಿಶೇಷವೆಂದರೆ; ಈ ಚಿತ್ರವನ್ನು ಲಂಡನ್ ನಲ್ಲಿ ನೆಲೆಸಿದ್ದ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ ಮತ್ತು ಸಿನಿಮಾ ನಿರ್ಮಾಣ ಮಾಡುವ ಸಲುವಾಗಿಯೇ ಲಂಡನ್ ಬಿಟ್ಟು ಬಂದಿದ್ದಾರೆ. ದೊಡ್ಡ ಬಜೆಟ್ ಆಯ್ತು. ಆದರೆ ಸ್ಯಾಟಲೈಟ್ ಮಾರಾಟವಾದ ಹಿನ್ನೆಲೆಯಲ್ಲಿ ನಾವು ಸೆಫ್ ಎಂಬ ಉತ್ತರ ಬಂತು ನಿರ್ಮಾಪಕರಿಂದ.
ಚಿತ್ರದ ಶೀರ್ಷಿಕೆ ಗೀತೆ ಸೂಪರ್ ಹಿಟ್ ಆಗಿದೆ. ಸ್ವಾಮಿನಾಥನ್ ಸಂಗೀತದಲ್ಲಿ ನಿತಿನ್ ನಾರಾಯಣ್ ರಚಿಸಿರುವ ಗೀತೆಯನ್ನು ಚೇತನ್ ನಾಯಕ್ ಹಾಡಿದ್ದಾರೆ.
ಕಲಾವಿದರಾದ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ನರೇಶ್ ಭಟ್,
ವಿನಯ್ ಸ್ವಾಮಿ, ಸೂರ್ಯ ಪ್ರವೀಣ್, ಜತ್ತಿನ್ ವೇದಿಕೆಯಲ್ಲಿ ಮಾತನಾಡಿದರು.
ಚಂದ್ರಕೀರ್ತಿ ಎದುರು ಪಾವನಾ ನಟಿಸಿದ್ದಾರೆ. ನನ್ನದು ಟೀ ಅಂಗಡಿಯ ಲೋಕಲ್ ಹುಡುಗಿಯ ಪಾತ್ರ ಎಂದರು ಪಾವನಾ..
ನಾನು ನಟನೆಯನ್ನು ನಂಬಿದ್ದೆ. ಉತ್ತಮ ಅವಕಾಶಗಳೂ ಬಂದವು. ಆದರೆ ಇಲ್ಲಿ ನಿರ್ದೇಶನದ ಅನಿವಾರ್ಯತೆ ಸೃಷ್ಟಿಯಾಯಿತು ಎಂದರು ಚಂದ್ರಕೀರ್ತಿ. ನಟ ಮತ್ತು ನಿರ್ದೇಶಕ ಆಗುವ ಕಷ್ಟ ಗೊತ್ತಿದೆ. ಆದರೆ ಇಲ್ಲಿ ಅನೇಕ ಗೆಳೆಯರ ಬೆಂಬಲದಿಂದ ಎಲ್ಲವೂ ಸುಲಭವಾಯ್ತು ಎಂದರು.