ತಮಿಳು ಸ್ಟಾರ್ ನಟ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಗರಾಜ್ ಜೋಡಿಯ
ದಳಪತಿ 67 ಚಿತ್ರದ ಅದ್ದೂರಿ ಮುಹೂರ್ತ ಕಂಡಿದೆ.
ಚೆನ್ನೈನಲ್ಲಿ ಫೆ. 2ರಂದು ನಡೆದ ಅದ್ದೂರಿ ಮುಹೂರ್ತದಲ್ಲಿ
ಕಲಾವಿದರಾದ ತ್ರಿಷಾ ಕೃಷ್ಣನ್, ಅರ್ಜುನ್ ಸರ್ಜಾ, ಜಗದೀಶ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಸೇರಿದಂತೆ ಸಿನಿಮಾದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.
7 ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ‘ಮಾಸ್ಟರ್’ ಸಿನಿಮಾ ಬಳಿಕ ವಿಜಯ್ ಜತೆಗಿದು ನಿರ್ದೇಶಕರ ಎರಡನೇ ಸಿನಿಮಾವಾಗಿದೆ.
ಕೈದಿ, ಮಾಸ್ಟರ್ ಮತ್ತು ಬೀಸ್ಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದ ರಾಕ್ಸ್ಟಾರ್ ಅನಿರುದ್ಧ ರವಿಚಂದ್ರನ್ ಸಂಗೀತವಿದ್ದು, ನಾಲ್ಕನೇ ಬಾರಿ ವಿಜಯ್ ಜತೆ ಕೈ ಜೋಡಿಸಿದ್ದಾರೆ.
ಮನೋಜ್ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್ ರಾಜ್ ಸಂಕಲನ, ಸತೀಸ್ ಕುಮಾರ್ ಕಲೆ, ದಿನೇಶ್ ನೃತ್ಯ ನಿರ್ದೇಶನವಿದೆ.