ಇಲ್ಲಿ ಅಣ್ಣ ತಮ್ಮಂದಿರಬ್ಬರೂ ನಕ್ಕು ನಗಿಸುತ್ತಾರೆ. ಏಕೆಂದರೆ ಅವರಿಬ್ಬರೂ ಸ್ಯಾಂಡಲ್ ವುಡ್ ನ ಕಾಮಿಡಿ ಸ್ಟಾರ್ ಗಳು..
ಹೌದು ತಬಲಾ ನಾಣಿ ಮತ್ತು ಕುರಿ ಪ್ರತಾಪ್ ಅವರಿಬ್ಬರ ನಗುವಿನ ಪ್ರತಾಪ ಯಾರಿಗೆ ತಿಳಿದಿಲ್ಲ.. ಇಲ್ಲಿ ಸೊಗಸಾದ ಕಥೆಯ ಜೊತೆ ಬರುತ್ತಿದ್ದಾರೆ ಆರ್.ಸಿ.ಬ್ರದರ್ಸ್.
ಸಹೋದರರಿಬ್ಬರ ಬಾಂಧವ್ಯದ ಕಥೆಯನ್ನು ಹಾಸ್ಯಮಯ ಘಟನೆಗಳನ್ನಿಟ್ಟುಕೊಂಡು ನಿರೂಪಿಸಿರುವ ಚಿತ್ರ ಆರ್ಸಿ ಬ್ರದರ್ಸ್. ಪ್ರಕಾಶ್ಕುಮಾರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ಕಟ್ ಹೇಳಿದ್ದಾರೆ. ಸಂಭ್ರಮಶ್ರೀ, ಕಾಮಿಡಿ ಕಿಲಾಡಿಗಳು ನಯನ ಹಾಗೂ ನೀತುರಾಯ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಆಶಯಗಳು ಮತ್ತು ನಕ್ಕು ನಗಿಸು ಅಂಶಗಳ ವಿವರ ನೀಡಿತು ಚಿತ್ರತಂಡ.
ಅಂದ ಹಾಗೆ ಇದೇ ಜನವರಿ 26ರಂದು ಚಿತ್ರವು ಬಿಡುಗಡೆ ಕಾಣುತ್ತಿದೆ. ವಕೀಲರಾಗಿರುವ ಮಣಿ ಶಶಾಂಕ್ ಈ ಚಿತ್ರದ ನಿರ್ಮಾಪಕರು. ಜೊತೆಗೆ ಸಹನಾ ಗಿರೀಶ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಇವರ ಪತಿ ಗಿರೀಶ್ ಕ್ರೀಡಾಪಟು. ಒಲಂಪಿಕ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಸಾಧನೆ ಇವರದು.
ಚಿತ್ರಕ್ಕೆ ತಬಲಾನಾಣಿ ಅದ್ಭುತ ಡೈಲಾಗ್ಗಳನ್ನು ಬರೆದಿದ್ದಾರೆ. ಸೋದರರ ನಡುವಿನ ಬಾಂಧವ್ಯ, ಜಗಳ ಮತ್ತು ಸೆಂಟಿಮೆಂಟ್ ಚಿತ್ರದ ಪ್ರಮುಖ ವಿಷಯಗಳು ಎಂಬುದನ್ನು ನಿರ್ದೇಶಕ ಪ್ರಕಾಶ್ ಕುಮಾರ್ ವಿವರಿಸಿದರು.
ತಬಲಾ ನಾಣಿ ಅವರಿಗೆ ಇದು 125ನೇ ಚಿತ್ರ. ಹಾಗಾಗಿ ಅತ್ಯಂತ ಮಹತ್ವದ ಚಿತ್ರವೂ ಹೌದು. ಅವರೇ ಸಂಭಾಷಣೆ ಕೂಡ ಬರೆದಿದ್ದಾರೆ. ಜೊತೆಗೆ ಚಿತ್ರದ ಬಗ್ಗೆ ಅಪಾರ ಭರವಸೆ ಹೊಂದಿರುವುದಾಗಿ ಹೇಳಿಕೊಂಡರು ತಬಲಾ ನಾಣಿ.
ಸಂಭ್ರಮಶ್ರೀ ಅವರಿಗೆ ಪೋಲೀಸ್ ಪಾತ್ರ ಎಂಬ ವಿವರ ಬಂತು. ಪ್ರದೀಪ್ ವರ್ಮ ಸಂಗೀತ, ಕಿರಣ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.