ಇದು ಆಹ್ಲಾದಕರ ಅನುಭವದ ಜೊತೆ ಬದುಕಿನಲ್ಲಿ ಹೇಗಿರಬೇಕು ಎಂಬ ತಿಳುವಳಿಕೆ ಮೂಡಿಸುತ್ತದೆ. ನಮ್ಮ ನಡುವೆ ಇರುವ ಒಂದು ಸಾಮಾನ್ಯ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುತ್ತದೆ..
ಅದೇ ಶುಗರ್ ಲೆಸ್..!
ಕೆ.ಎಮ್. ಶಶಿಧರ್ ನಿರ್ಮಿಸಿ, ನಿರ್ದೇಶನ ಮಾಡಿರುವ ‘ಶುಗರ್ ಲೆಸ್’ ಒಂದು ಮನರಂಜನಾತ್ಮಕ ಚಿತ್ರ ಜೊತೆಗೆ ಪ್ರತಿ ಮನೆಯಲ್ಲಿಯೂ ಇರುವ ಒಂದು ಸಾಮಾನ್ಯ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಹೌದು ಶುಗರ್ ಮತ್ತು ಬಿಪಿ ಇಂದಿನ ಸಾಮಾಜಿಕ ಬದುಕಿನಲ್ಲಿ ಕಾಡುವ ಸಮಸ್ಯೆಗಳೇ ಆಗಿವೆ. ಮೊದಲು ಅರ್ಧ ವಯಸ್ಸಿಗೆ ಬರುತ್ತಿದ್ದ ಕಾಯಿಲೆ ಈಗ ಚಿಕ್ಕ ವಯಸ್ಸಿಗೆ ದಾಳಿ ಇಡುತ್ತದೆ. ಬಳಿಕ ಜೀವನ ಶೈಲಿಯನ್ನೇ ಬದಲಿಸಿ ಬಿಡುತ್ತದೆ.
ಇದರ ಬಗ್ಗೆ ಬೆಳಕು ಚೆಲ್ಲುವ ಚಿತ್ರ ‘ಶುಗರ್ ಲೆಸ್’ ಇದೇ ವಾರ (ಜು.8) ಬಿಡುಗಡೆ ಕಾಣುತ್ತಿದೆ. ಪೃಥ್ವಿ ಅಂಬರ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ದತ್ತಣ್ಣ, ರಮೇಶ್ ಭಟ್, ರಘು ರಾಮನ ಕೊಪ್ಪ, ನಿತೇಶ್, ಪ್ರದೀಪ್ ಪೂಜಾರಿ ಮೊದಲಾದ ಕಲಾವಿದರ ಬಳಗವಿದೆ.
ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಶಶಿಧರ್ ಸೇರಿದಂತೆ ಪೃಥ್ವಿ ಅಂಬರ್, ನಿತೇಶ್, ಪ್ರದೀಪ್, ರಘು ರಾಮನ ಕೊಪ್ಪ, ಸಹ ನಿರ್ಮಾಪಕ ಕೃಷ್ಣೇಗೌಡ ಮೊದಲಾದವರು ಹಾಜರಿದ್ದರು.
ಈ ಚಿತ್ರವನ್ನು ಸಾಮಾಜಿಕ ನೆಲೆಯಲ್ಲಿ ನೋಡಲಾಗಿದೆ. ಏಕೆಂದರೆ ಇದು ಪ್ರತಿ ಮನೆಯಲ್ಲಿ ಇರುವ ಸಮಸ್ಯೆ. ಕೆಲವೊಮ್ಮೆ ಇದು ಮಾರಣಾಂತಿಕ ವಾಗಿ ಕಾಡುತ್ತದೆ. ಇದರಿಂದ ಚಿಕ್ಕ ವಯಸ್ಸಿನವರೂ ಹೃದಯಘಾತಕ್ಕೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಿವು ಮೂಡಿಸುವ ಸಾಮಾಜಿಕ ಚಿತ್ರವಾಗಿ ಇದು ಮೂಡಿ ಬರುತ್ತಿದೆ ಎಂದರು ಕೆ.ಎಮ್.ಶಶಿಧರ್.
ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳು ವಿಧಾನ ಮನರಂಜನೆಯ ರೂಪದಲ್ಲಿದೆ ಎಂದರು ಪೃಥ್ವಿ. ಯೋಗದ ಮೂಲಕ ಹಲವು ಟಿಪ್ಸ್ ನೀಡುವುದಾಗಿ ರಘು ರಾಮನಕೊಪ್ಪ ತಿಳಿಸಿದರು.
ಚಿತ್ರದ ಆಶಯಗಳು ಉತ್ತಮವಾಗಿವೆ. ನಾವು ವ್ಯಾಪಾರ ದಲ್ಲಿ ಸೇಫ್ ಆಗಿದ್ದೇವೆ. ಚಿತ್ರ ಜನರಿಗೆ ಅತ್ಯುತ್ತಮ ಸಂದೇಶ ನೀಡುತ್ತದೆ ಎಂದು ನಂಬಿದ್ದೇವೆ ಎಂದರು ನಿರ್ದೇಶಕರು.