Snehapriya.com

June 9, 2025

ಮಾರಕಾಸ್ತ್ರ ಭರವಸೆಯ ನೆಲೆಗೆ ವಿಶೇಷ ಚೇತನ ಗುರುಮೂರ್ತಿ..

Social Share :

ಕನ್ನಡ ಚಿತ್ರರಂಗದಲ್ಲಿ ಹೀರೋಗಳಿಗೆ ಸಮನಾಗಿ ಮಿಂಚಿದ ನಟಿ ಮಾಲಾಶ್ರೀ
ಸಾಹಸಮಯ ಚಿತ್ರಗಳ ಮೂಲಕ ಆಕ್ಷನ್ ಕ್ವೀನ್ ಎಂಬ ಬಿರುದನ್ನೂ ಪಡೆದರು. ಇದೀಗ ಅವರು ಅದೇ ಮಾದರಿಯ ಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ.

ಅದೇ ಮಾರಕಾಸ್ತ್ರ..!

ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಇಬ್ಬರು ಹೊಸಬರು. ನಿರ್ಮಾಪಕ ನಟರಾಜ್ ಸಾಂಸ್ಕೃತಿಕ ನೆಲೆಯಲ್ಲಿ ಚಿಂತನೆ ಮಾಡುವವರು. ಅವರ ಪತ್ನಿ ಕೋಮಲಾ ನಟರಾಜ್ ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ಆದರೆ ಕ್ರಿಯಾಶೀಲತೆ ವಿಷಯದಲ್ಲಿ ನೆನಪಾಗುವುದು ನಿರ್ದೇಶಕ ಗುರುಮೂರ್ತಿ ಸುನಾಮಿ. ಅವರು ವಿಶೇಷ ಚೇತನ ಎಂಬುದು ಇಲ್ಲಿ ಗಮನಾರ್ಹ.

ಬಾಲ್ಯದಲ್ಲಿ ಪೊಲಿಯೋಗೆ ತುತ್ತಾಗಿ ವಿಶೇಷ ಚೇತನರಾಗಿರುವ ಗುರುಮೂರ್ತಿ ಸುನಾಮಿ, ಒಂದು ಚಿತ್ರದ ಅದರಲ್ಲಿಯೂ ಕಮರ್ಷಿಯಲ್ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್ ಎಂಬುದು ಹೆಗ್ಗಳಿಕೆ.

ಈಚೆಗೆ ಚಿತ್ರದ ಟೀಸರ್ ಬಿಡುಗಡೆ ಕಂಡಿದೆ. ಇದು ಚಿತ್ರದ ಬಗ್ಗೆ ಅತಿಯಾದ ಭರವಸೆಯನ್ನು ಹುಟ್ಟಿಸಿದೆ. ಹಾಗಾಗಿ ಗುರುಮೂರ್ತಿ ಸುನಾಮಿ ಅವರ ಹೊಸ ಆಶೋತ್ತರದಲ್ಲಿ ತೇಲುತ್ತಿದ್ದಾರೆ.

ಇಡೀ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಲಾಗಿದೆ. ಮಾಲಾಶ್ರೀ ಮೇಡಂ ಅವರ ಸಾಹಸವಂತೂ ಅದ್ಭುತ. ಜೊತೆಗೆ ಆನಂದ್ ಆರ್ಯ ನಟನೆ, ಡ್ಯಾನ್ ಎಲ್ಲದರಲ್ಲೂ ಭರವಸೆ ಹುಟ್ಟಿಸಿದ್ದಾರೆ. ಹರ್ಷಿಕಾ ಪೂಣಚ್ಚ ಅವರಂತಹ ಹೆಸರಾಂತ ನಟಿ ಅವರಿಗೆ ಜೋಡಿಯಾಗಿ ನಟಿಸಿರುವುದು ಹೆಮ್ಮೆ ಎನಿಸಿದೆ ಎಂದು ಹೇಳುತ್ತಾ ಹೋದರು ಗುರುಮೂರ್ತಿ ಸುನಾಮಿ.

ಚಿತ್ರದ ಟೀಸರ್ ಮತ್ತು ಹಾಡುಗಳು ಅತ್ಯುತ್ತಮ ಎಂಬ ಅಭಿಪ್ರಾಯ ಬಂದಿದೆ. ಇನ್ನು ಸಾಹಸದ ಬಗ್ಗೆ ಮಾಲಾಶ್ರೀ ಮೇಡಂ ಹಾಗೂ ಥ್ರಿಲ್ಲರ್ ಮಂಜು ಮಾಸ್ಟರ್ ಅದರ ಹೆಚ್ಚುಗಾರಿಕೆ ಬಗ್ಗೆ ಕೊಂಡಾಡಿದ್ದಾರೆ ಎಂದರು.

ಟೀಸರ್ ಬಿಡುಗಡೆಯ ಮೊದಲ ಹಂತದಲ್ಲಿಯೇ ಚಿತ್ರವು ಗಮನ ಸೆಳೆದಿದೆ. ಮುಂದಿನ ಹಂತದಲ್ಲಿ ಅದರ ಪ್ರಕರತೆ ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ ಎಂಬುದು ನಿರ್ದೇಶಕ ಗುರುಮೂರ್ತಿ ಸುನಾಮಿ ಅವರ ಗಟ್ಟಿಯಾದ ನಂಬಿಕೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *