ಫಸ್ಟ್ ರಾಂಕ್ ರಾಜು ಹಾಗೂ ರಾಜು ಕನ್ನಡ ಮೀಡಿಯಂನಂತಹ ಅಪೂರ್ವ ಕಾಮಿಡಿ ಚಿತ್ರಗಳನ್ನು ಕೊಟ್ಟ ನಿರ್ದೇಶಕ ನರೇಶ್ ಕುಮಾರ್ ಎಚ್.ಎನ್ ಈಗ ಬೇರೆ ಜಾನರ್ ಗೆ ಹೊರಳಿದ್ದಾರೆ..
ಅದೇ ‘ಸೌತ್ ಇಂಡಿಯನ್ ಹೀರೋ’..!
ಹೌದು ಏನಪ್ಪಾ ಹೆಸರೇ ಹೀಗಿದೆ ಎಂದು ಕೊಂಡರೆ.. ಹೌದು ನಾವು ದಕ್ಷಿಣ ಭಾರತದ ತಾರೆಯರ ಮೇಲೆಯೇ ಸಿನಿಮಾ ಮಾಡುತ್ತಿರುವುದು ಎಂಬ ಉತ್ತರ ಕೊಟ್ಟರು ನಿರ್ದೇಶಕ ನರೇಶ್ ಕುಮಾರ್.
ಇದರಲ್ಲೂ ಕಾಮಿಡಿ ಇದೆ. ಆದರೆ ಅದು ರೆಗ್ಯೂಲರ್ ಕಾಮಿಡಿ ಅಲ್ಲ; ಅದು ವಿಭಿನ್ನ ಧಾಟಿಯಲ್ಲಿದೆ. ಒಬ್ಬ ಫಿಸಿಕ್ಸ್ ಟೀಚರ್ ಲಾಜಿಕ್ ಹುಡುಕುತ್ತಾ ಹೋಗುತ್ತಾನೆ. ಆತನ ಹೆಸರೂ ಲಾಜಿಕ್ ಲಕ್ಷ್ಮಣ ರಾವ್. ಇಲ್ಲಿ ಹಾಡು ಫೈಟು ಎಲ್ಲವೂ ಇದೆ ಜೊತೆಗೆ ತಲೆಗೆ ಹುಳ ಬಿಡುವ ಅಂಶವೂ ಇದೆ ಎಂದು ಹೇಳುತ್ತಾ ಹೋದರು ನಿರ್ದೇಶಕರು.
2018 ನಂತರ ದೊಡ್ಡ ಗ್ಯಾಪ್ ಆಯ್ತು ಮಧ್ಯದಲ್ಲಿ ಕೊರೊನಾ ಬಂತು. ಆದರೂ ಲಡಾಕ್ ನಂತಹ ಹಿಮ ಆವರಿತ ಪ್ರದೇಶದಲ್ಲಿ ಶೂಟಿಂಗ್ ಸಾಹಸ ಮಾಡಿದ್ದೇವೆ ಎಂಬ ವಿವರ ಕೊಟ್ಟರು.
ಈ ಚಿತ್ರಕ್ಕೆ ನರೇಶ್ ಕುಮಾರ್ ಅವರ ಪತ್ನಿ ಶಿಲ್ಪಾ ಎಲ್.ಎಸ್ ನಿರ್ಮಾಪಕರು. ಪತಿಯ ಸಿನಿಮಾ ಸಾಹಸಕ್ಕೆ ಸಂಪೂರ್ಣ ನೆರವು ನೀಡಿದ್ದಾರೆ.
ವಿಜಯ್ ಚೆಂಡೂರ್ ರೀಲ್ ನಲ್ಲಿ ನಿರ್ದೇಶಕನ ಪಾತ್ರ ಮಾಡಿದ್ದು ಅದು ಸಂಪೂರ್ಣ ಹಾಸ್ಯಮಯ ಎಂಬುದಾಗಿ ಹೇಳಿಕೊಂಡರು.
ನಟಿ ಸುಮನ್ ನಗರ್ ಕರ್ ಅವರ ಪತಿ ಗುರುದೇವ್ ನಾಗರಾಜ್ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರವನ್ನು ನಿರ್ವಹಿಸಿದ್ದು, ಈ ಪಾತ್ರ ನಿಗೂಢವಾಗಿರುತ್ತದೆ. ಹಾಗಾಗಿ ಗುಟ್ಟು ಬಿಟ್ಟು ಕೊಡಲಾರೆ ಎಂದರು.
ಸಾರ್ಥಕ್ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದು, ಇವರ ಎದುರು ಖಾಸಿಮಾ ನಟಿಸಿದ್ದಾರೆ. ಸಾರ್ಥಕ್ ಅವರ ಒರಿಜಿನಲ್ ಹೆಸರು ದರ್ಶನ್.
‘ಅವನು ಮತ್ತು ಶ್ರಾವಣಿ’ ಸಿರಿಯಲ್ ಮೂಲಕ ಕಿರುತೆರೆಯಲ್ಲಿ ಹೆಸರಾದವರು. ಇಲ್ಲಿ ವಿಭಿನ್ನವಾದ ಲುಕ್ ಪಾತ್ರಕ್ಕೆ ಅವಕಾಶ ಸಿಕ್ಕಿರುವುದು ಖುಷಿಯಾಗಿದೆ. ಇಲ್ಲಿ ನಾನು ಅದೃಷ್ಟ ಖಂಡಿತಾ ಹುಡುಕುವೆ ಎಂದರು ಸಾರ್ಥ ಕ್.
ಕಲಾವಿದರಾದ ಅಮಿತ್, ಅಶ್ವಿನ್ ರಾವ್ ಪಲ್ಲಕ್ಕಿ, ಛಾಯಾಗ್ರಾಹಕರ ಪೈಕಿ ಒಬ್ಬರಾದ ಪ್ರವೀಣ್, ಸಂಗೀತ ನಿರ್ದೇಶಕರಾದ ಹರ್ಷವರ್ಧನ್ ರಾಜ್, ಅನಿಲ್ ಸಿ.ಜೆ ಹಾಜರಿದ್ದರು. ಕರಿಸುಬ್ಬು ಸ್ಟುಡಿಯೋದಲ್ಲಿ ಪೋಸ್ಟ್ ಪ್ರೊಡಕ್ಷನ್ ನಡೆಯುವುದನ್ನು ಕರಿಸುಬ್ಬು ಅವರೇ ವಿವರಿಸಿದರು.