Snehapriya.com

June 9, 2025

ಶ್ರೀಮಂತ ಟೀಸರ್ ಬಿಡುಗಡೆ ರೈತನ ಜಾತ್ರೆ ಹಬ್ಬದ ಸಂಭ್ರಮ..

Social Share :

ಬಹು ನಿರೀಕ್ಷಿತ ಹಾಸನ್ ರಮೇಶ್ ನಿರ್ದೇಶನದ ‘ಶ್ರೀಮಂತ’ ಚಿತ್ರವು ಬಿಡುಗಡೆಗೆ ಸಜ್ಜುಗೊಂಡಿದ್ದು, ಈಚೆಗೆ ಬಿಡುಗಡೆ ಕಂಡಿರುವ ಚಿತ್ರದ ಹೊಸ ಟೀಸರ್ ಸಿನಿ ರಸಿಕರ ಗಮನ ಸೆಳೆಯುತ್ತಿದೆ..

ರೈತ ಅಂದ್ರೆ ಹಬ್ಬ, ರೈತ ಅಂದ್ರೆ ಜಾತ್ರೆ ಹೀಗೆ ಬೇಸಾಯ ಸಂಸ್ಕೃತಿಯ ವಿವಿಧ ಮಜಲುಗಳನ್ನು ಹೇಳಲು ಮಾಡಿರುವ ಪ್ರಯತ್ನ ಟೀಸರ್ ನಲ್ಲಿ ಎದ್ದು ಕಾಣುತ್ತದೆ..

ಮುಖ್ಯವಾಗಿ ಮುಖ್ಯ ಪಾತ್ರದಲ್ಲಿರುವ ದಕ್ಷಿಣ ಭಾರತದ ಹೆಸರಾಂತ ನಟ ಸೋನು ಸೂದ್ ಟೀಸರ್ ನ ಪ್ರಮುಖ ಭಾಗವಾಗಿ ಕಾಣಿಸಿಕೊಂಡಿದ್ದಾರೆ. ರೈತ ಎಂದರೆ, ಅನ್ನದಾತ ಮತ್ತು ನಮ್ಮ ಸಂಸ್ಕೃತಿಯ ಪ್ರತೀಕ ಎಂಬುದು ಚಿತ್ರದಲ್ಲಿ ಮುಖ್ಯಾಂಶವಾಗಿದೆ.

ನಾದಬ್ರಹ್ಮ ಹಂಸಲೇಖ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಈಗಾಗಲೇ ‘ಮಳೆ ಮುನಿದರೆ ಸಂತ’ ಎಂಬ ಹಾಡು ಜನಪ್ರಿಯತೆ ಪಡೆದುಕೊಂಡಿದೆ. ಈ ಹಾಡು ಲೆಜೆಂಡ್ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ ಕೊನೆಯ ಹಾಡು.

ರವಿಕುಮಾರ್ ಸನಾ ಚಿತ್ರದ ಛಾಯಾಗ್ರಹಕರಾಗಿದ್ದು, ರೈತನ ಪ್ರಜ್ವಲ ಬೆಳಕು ಮತ್ತು ಪ್ರಕರ ಬದುಕನ್ನು ಚೆಂದವಾಗಿ ಕಟ್ಟಿ ಕೊಟ್ಟಿರುವುದು ಎದ್ದು ಕಾಣುತ್ತದೆ.

ಯುವ ನಟ ಕ್ರಾಂತಿ, ವೈಷ್ಣವಿ ಪಟವರ್ಧನ್, ವೈಷ್ಣವಿ ಮೆನನ್ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಚರಣ್ ರಾಜ್, ಸಾಧು ಕೋಕಿಲ, ರಮೇಶ್ ಭಟ್, ಕಲ್ಯಾಣಿ ಮೊದಲಾದವರಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *