ಚಿತ್ರ ನೋಡಿ ಹೊರ ಬರುವ ಪ್ರೇಕ್ಷಕನಿಗೆ ದಿಲ್ ಪಸಂದ್ ಸವಿದು ಹೊರಬಂದ ಅನುಭವವಾಗುತ್ತದೆ..
ಅದೇ ದಿಲ್ ಪಸಂದ್..!
ಶಿವು ತೇಜಸ್ ನಿರ್ದೇಶನ ಮಾಡಿರುವ ಈ ಚಿತ್ರ ಇದೇ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಿಗೆ ಸಿಹಿ ಸಿಹಿ ರುಚಿ ರುಚಿ ದಿಲ್ ಪಸಂದ್ ಸವಿಯುವ ಯೋಗ..
ಈಚೆಗೆ ಸ್ಟಾರ್ ಹೊಟೇಲ್ ನಲ್ಲಿ ನಡೆದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಂತೂ ಬಂದವರಿಗೆಲ್ಲಾ ಬಿಸಿ ಬಿಸಿ ದಿಲ್ ಪಸಂದ್ ನೀಡಲಾಯಿತು. ಹಾಗೆ ದಿಲ್ ಪಸಂದ್ ನೀಡುವ ಕಾರ್ಯದ ನೇತೃತ್ವ ವಹಿಸಿದ್ದು ನಿರೂಪಕಿ ಅನುಶ್ರೀ.
ಮೊದಲಿಗೆ ಕಲಾವಿದ ತಬಲಾ ನಾಣಿ ಅವರು ಇಬ್ಬರು ಮುಖ್ಯ ನಟಿಯರಿಗೆ ದಿಲ್ ಪಸಂದ್ ಕೊಡುವ ಮೂಲಕ ಕಾರ್ಯಕ್ರಮದ ಸಿಹಿ ಯಾನ ಆರಂಭವಾಯಿತು. ತಬಲಾ ನಾಣಿ ಅವರು ವಿಘ್ನೇಶ್ವರ ನ ನೆನೆಯುವ ಪ್ರಾರ್ಥನಾ ಗೀತೆಯನ್ನು ಸಹ ಹಾಡಿದರು.
ಡಾರ್ಲಿಂಗ್ ಕೃಷ್ಣ ಜೊತೆಗೆ ನಿಶ್ವಿಕಾ ನಾಯ್ಡು ಹಾಗೂ ಮೇಘಾಶೆಟ್ಟಿ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವೊಂದು ರೋಮ್ಯಾಂಟಿಕ್ ಜರ್ನಿ ಎಂಬುದನ್ನು ವಿವಿಧ ಕಲಾವಿದರು ಬಣ್ಣಿಸಿದರು.
ಹಿರಿಯ ಕಲಾವಿದೆ ರಾಧಾ ರಾಮಚಂದ್ರ, ಸಾಹಿತ್ಯ ಬರೆದಿರುವ ನಿರ್ದೇಶಕ ಚೇತನ್ ಕುಮಾರ್, ಕವಿರಾಜ್, ನಿರ್ದೇಶಕ ಶಿವು ತೇಜಸ್
ನಿರ್ಮಾಪಕ ಸುಮಂತ್ ಕೀರ್ತಿ, ನಟ
ಕೃಷ್ಣ ಅಜಯ್ ರಾವ್, ನಟಿ ಮಿಲನಾ ನಾಗರಾಜ್ ಹೀಗೆ ಚಿತ್ರತಂಡದ ಅನೇಕ ಸದಸ್ಯರು ಚಿತ್ರಕ್ಕೆ ಶುಭ ಹಾರೈಸಿ ದಿಲ್ ಪಸಂದ್ ಸವಿದರು.
ಈ ಚಿತ್ರದಲ್ಲಿ ಪ್ರೇಮಿಗಳಿದ್ದಾರೆ.. ಪ್ರೇಮ ಎರಡು ರೀತಿಯಲ್ಲಿರುತ್ತದೆ ಜೋಡಿ ಪ್ರೇಮ ಮತ್ತು ಕುಟುಂಬ ಪ್ರೇಮ.. ನಿರ್ದೇಶಕರ ಪ್ರಕಾರ ಸಿಹಿ ಕುಟುಂಬ..
ಡಾರ್ಲಿಂಗ್ ಕೃಷ್ಣ ಅವರಿಗೆ ಎಲ್ಲಾ ಚಿತ್ರದಲ್ಲಿಯೂ ಇಬ್ಬರು ಹೀರೋಯಿನ್. ಇಲ್ಲಿ ಬ್ಯೂಟಿಫುಲ್ ಹೀರೋಯಿನ್ ಹಾಗಾಗಿ ಚಿತ್ರದ ಆಶಯಗಳು ಉತ್ತಮವಾಗಿವೆ ಎಂದವರು ನಟಿ ಮಿಲನಾ ನಾಗರಾಜ್.
ಊಟಿ ಮೊದಲಾದ ಕಡೆ ಚಿತ್ರೀಕರಣ ಆಹ್ಲಾದಕರ. ಅರ್ಜುನ್ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಹಣ ವಿಶೇಷವಾಗಿದೆ ಎಂಬ ಮಾಹಿತಿಗಳೂ ಬಂದವು.