ಶೀರ್ಷಿಕೆ ಇಲ್ಲಿ ವಿಭಿನ್ನ ಅದೂ ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬಂದಿದ್ದ ಓಂ, ಸ್ವಸ್ತಿಕ್, ಸೂಪರ್ ನಂಥ ಚಿತ್ರಗಳಿಗೆ ಇದ್ದ ಚಿನ್ಹೆ ಇಲ್ಲಿ ಶೀರ್ಷಿಕೆ.
ಅದೇ ಸ್ಟಾರ್ ಅಂದ್ರೆ ನಕ್ಷತ್ರ..!
ನಕ್ಷತ್ರದ ಗುರುತನ್ನೇ ತಮ್ಮ ಚಿತ್ರದ ಶೀರ್ಷಿಕೆಯಾಗಿಟ್ಟುಕೊಂಡು ಚಿತ್ರ ಮಾಡಲು ಹೊರಟಿರುವವರು ನಿರ್ಮಾಪಕ ಶರತ್. ಅವರೇ ಚಿತ್ರದ ಹೀರೋ ಕೂಡ. ಈ ಚಿತ್ರಕ್ಕೆ ಪತಿ, ಪತ್ನಿ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ.
ಅನು ಹಾಗೂ ಮಂಜು ವಿಜಯಸೂರ್ಯ ಸೇರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀನಿವಾಸ ನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ನಡೆದ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಶಾಸಕ ರವಿ ಸುಬ್ರಮಣ್ಯ ಅಗಮಿಸಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಅಪ್ಪ ಪ್ರಕಾಶ್ ಚಿತ್ರಗಳಲ್ಲಿ ಫೈಟರ್ ಆಗಿ ನಟಿಸುತ್ತಿದ್ದರು. ಇದೇ ಕಾರಣದಿಂದ ಚಿತ್ರ ಮಾಡುವ ಆಸಕ್ತಿ ಮೂಡಿತು ಎಂದರು ನಿರ್ಮಾಪಕ ಕಮ್ ಹೀರೋ ಶರತ್.
ಈ ಹಿಂದೆ ಪ್ಯಾಟಿ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿನ್ನರ್ ಆಗಿದ್ದೆ; ಥೇಟರ್ ಹಿನ್ನೆಲೆಯೂ ಇದೆ. ಇದೊಂದು ರೌಡಿಸಂ ಹಿನ್ನೆಲೆಯ ಚಿತ್ರ ಎಂದರು.
ಲೈಟ್ ಬಾಯ್ ಆಗಿದ್ದವನಿಗೆ ನಿರ್ದೇಶಕ ಆಗುವ ಅವಕಾಶ ಬಂದಿದ್ದು ಖುಷಿಯಾಗಿದೆ. ಲೈಟಿಂಗ್ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಒಂದು ಅವಕಾಶ ಸಿಕ್ಕಿದೆ ಎಂದವರು ನಿರ್ದೇಶಕ ಮಂಜು ವಿಜಯಸೂರ್ಯ.
ಇದು ಲೋಕಲ್ ರೌಡಿಸಂನ ಕಥೆ ಹಾಗಾಗಿ ಬೆಂಗಳೂರಿನಲ್ಲೇ ಹೆಚ್ಚು ಭಾಗದ ಶೂಟಿಂಗ್ ನಡೆಯುತ್ತದೆ. ಹೊಡೆದಾಟಕ್ಕಿಂತ ಹೆಚ್ಚಾಗಿ ಥ್ರಿಲ್ಲರ್ ಎಂಬುದು ಎದ್ದು ಕಾಣುವಂತೆ ಸ್ಕ್ರಿಪ್ಟ್ ಮಾಡಲಾಗಿದೆ ಎಂದರು.
ಈ ಹಿಂದೆ ‘ಸದ್ದು ವಿಚಾರಣೆ ನಡೆಯುತ್ತಿದೆ’ ಎಂಬ ಚಿತ್ರದಲ್ಲಿ ನಟಿಸಿದ್ದ ರಜತ ರಕ್ಷ ಇಲ್ಲಿ ಶರತ್ ಅವರ ಜೊತೆ ನಟಿಸಿದ್ದು, ತಲವಾರ್ ಎಂಬುದೂ ಸೇರಿದಂತೆ ಮೂರು ಚಿತ್ರಗಳಲ್ಲಿ ನಟಿಸಿದ್ದೆ; ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು ಎಂಬ ವಿವರ ಬಂತು.
ಛಾಯಾಗ್ರಾಹಕ ಪ್ರವೀಣ್ ಎಂ, ಪ್ರಭು, ಮತ್ತೊಬ್ಬ ನಿರ್ದೇಶಕಿ ಅನು
ಮಾತನಾಡಿದರು. ನಾಲ್ಕು ಹಾಡುಗಳಿದ್ದು, ವಿಕಾಸ್ ವಸಿಷ್ಠ ಸಂಗೀತ ನೀಡುತ್ತಿದ್ದಾರೆ ಎಂಬ ವಿವರ ಬಂದವು.