ಇದೇ ವಾರ ಅಂದರೆ ಸೆಪ್ಟೆಂಬರ್ 17ರಂದು ‘ಚಡ್ಡಿ ದೋಸ್ತ್ ಕಡ್ಡಿ ಅಲಾಡುಸ್ಬುಟ್ಟ: ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ. ಪ್ರೇಕ್ಷಕರನ್ನು ನಕ್ಕು ನಗಿಸುವ ಪರಂಪರೆಗೆ ಇದು ಹೊಸ ಸೇರ್ಪಡೆ ಎಂಬುದು ನಿಜವಾದರೂ ಸಿನಿಮಾ ಬದುಕು ಮತ್ತು ಫ್ಯಾಷನ್ ಎಂದು ಹಂಬಲಿಸುವ ಜೋಡಿಯ ಪ್ರಯತ್ನ ಇದಾಗಿದೆ ಎಂದು ಖಂಡಿತಾ ಹೇಳಬಹುದು..
ಹೇಗೆಂದರೆ ಅದು ಈ ಚಿತ್ರದ ನಿರ್ಮಾಪಕ ಸೆವೆನ್ ರಾಜ್..!
ವಿರಳ ವ್ಯಕ್ತಿತ್ವದ ತನ್ನ ಸಂತೋಷದ ನೆಲೆಯಲ್ಲಿ ತಾನು ಬದುಕುವ ಆಶಯಗಳನ್ನು ಹೊಂದಿರುವ ಅಪರೂಪದ ನಿರ್ಮಾಪಕ ಸವೆನ್ ರಾಜ್ ಈಗ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಸರಿ ಸುಮಾರು 90ರ ದಶಕದಲ್ಲಿ ಬದುಕಿನ ಜೊತೆಗೆ ಸಿನಿಮಾ ಉಸಿರಾಗಿರಲಿ ಎಂದು ಕನಸು ಕಂಡವರು ಸೆವೆನ್ ರಾಜ್ ಯಾರಿಗೂ ಕೇರ್ ಮಾಡದೆ ರೆಡ್ ಅಂಡ್ ವೈಟ್ ನ್ನು ಜೀವನದ ಜೊತೆ ಅಂಟಿಸಿಕೊಂಡವರು. ಅದನ್ನು ಮೀರಿದ್ದು ಅವರ ಜೊತೆಗಿರುವ ಸಂಖ್ಯೆ. ಅದು ಏಳು ಮತ್ತು ಅದೃಷ್ಟ. ಹಾಗಾಗಿ ಅದನ್ನು ಗಟ್ಟಿಯಾಗಿ ನಂಬಿದ್ದಾರೆ. ಹಾಗೆಯೇ ಏಳು ಅಂಕಿ ಕೊನೆಗೆ ಬರುವ ದಿನಾಂಕ 17ರಂದೇ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಇನ್ನು ಅಚ್ಚರಿಯ ಸಂಗತಿ ಏನೆಂದರೆ ಸೆವೆನ್ ರಾಜ್ ಅವರ ದುಬಾರಿ ಕಾರು ಕೂಡ ರೆಡ್ ಅಂಡ್ ವೈಟ್. ಮತ್ತು ಏಳರ ಮಹತ್ವ ಸಾರುವ ನಂಬರ್ ಪ್ಲೇಟ್ ಹೊಂದಿದೆ ಎಂಬುದು ವಿರಳ ಸಂಗತಿಯೂ ಆಗುತ್ತದೆ.
ಜೀವನದಲ್ಲಿ ಇನ್ನು ಹೆಚ್ಚು ಸಾಧಿಸುವ ಛಲ ಹೊಂದಿರುವ ಸೆವೆನ್ ರಾಜ್ ಭಾರತೀಯ ಚಿತ್ರರಂಗ ತಿರುಗಿ ನೋಡುವ ಚಿತ್ರ ಮಾಡುವ ಸಿದ್ದತೆಯಲ್ಲಿ ತೊಡಗಿದ್ದಾರೆ.
ಇನ್ನು ಆಸ್ಕರ್ ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅಸ್ತಿತ್ವ ಸಾಧಿಸಿ ಆಸ್ಕರ್ ಕೃಷ್ಣ ಎಂದೇ ಹೆಸರಾಗಿರುವ ಆಸ್ಕರ್ ಕೃಷ್ಣ ಸಿನಿಮಾದ ಆಚೆಗೂ ಯೋಚಿಸಬಲ್ಲ ಪ್ರತಿಭಾವಂತ. ಒಂದೇ ಜಾನರ್ ಗೆ ಅಂಟಿಕೊಳ್ಳದೆ ಎಲ್ಲಾ ಬಗೆಯ ಚಿತ್ರಗಳನ್ನು ಮಾಡಬಲ್ಲೆ ಎಂದು ಈ ಚಿತ್ರದ ಮೂಲಕ ಸಾಧಿಸಲು ಹೊರಟಿದ್ದಾರೆ. ಹಾಗಾಗಿ ಹಾಸ್ಯದ ಹೊನಲು ಹರಿಸುವ ಸಾಹಸವೇ ಈ ಚಿತ್ರ.
ಜೊತೆಗೆ ನಟ, ಬರಹಗಾರ ಲೋಕೇಂದ್ರ ಸೂರ್ಯ ಹಾಗೂ ಇತರ ಪ್ರತಿಭಾವಂತರು ಅವರ ಜೊತೆ ಸೇರಿಕೊಂಡಿದ್ದಾರೆ.
ಆಲ್ದಿಬೆಸ್ಟ್ ಸರ್ .. ನಲ್ಮೆಯ ತಂಡಕ್ಕೆ 👋👋👋