Snehapriya.com

June 6, 2025

ಟ್ರೈಲರ್ ನಲ್ಲಿ ರಣಾಕ್ಷನ ಅಬ್ಬರ ದೇವರು ದೆವ್ವದ ಸಂಘರ್ಷದ ಕಥೆ

Social Share :

ಒಂದು ಗ್ರಾಮದಲ್ಲಿ ನಡೆಯುವ ನಿಗೂಢ ಹಾಗೂ ಭಯಾನಕ ಘಟನೆಗಳ ಸುತ್ತ ಅನುಮಾನದ ಹುತ್ತ..

ದೇವರು ಮತ್ತು ದೆವ್ವದ ಸುತ್ತ ಕಟ್ಟುಕಥೆಗಳಿಂದ ಬೆಚ್ಚಿ ಬೀಳುವ ಜನರು ಕೊನೆಗೆ ತೆಗೆದುಕೊಳ್ಳುವ ಕ್ರಮ ಏನು..

ಇದು ತಿಳಿಯಬೇಕಾದರೆ ಸಿನಿಮಾ ನೋಡಬೇಕು ಅದೂ ಎಲ್ಲರೂ ಬಂದು ಚಿತ್ರಮಂದಿರದಲ್ಲೇ ಸಿನಿಮಾ ನೋಡಬೇಕು ಎಂಬ ಕರೆ ಕೊಟ್ಟಿತು ಚಿತ್ರತಂಡ.

ಅದು ರಣಾಕ್ಷ..!

ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯವಾಗಿರುವ ಸೀರುಂಡೆ ರಘು ಮುಖ್ಯ ಪಾತ್ರದಲ್ಲಿ ನಟಿಸಿರುವ
ರಣಾಕ್ಷ ಚಿತ್ರದಲ್ಲಿ ದೇವರು ಮತ್ತು ದೆವ್ವದ ನಡುವಿನ ಸಂಘರ್ಷ ಮನರಂಜನೆಯ ವಸ್ತುವಾಗಿದೆ.

ಕೆ.ರಾಘವ ನಿರ್ದೇಶನದ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಯಾನಕ ಘಟನೆ ಮತ್ತು ಸಂದರ್ಭಗಳನ್ನು ವಿವರಿಸಿತು ಚಿತ್ರತಂಡ.

ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ಚಿತ್ರಗಳನ್ನು ಮಾಡುವ ಆಶಯದಲ್ಲಿ ಈ ಚಿತ್ರದ ಮೂಲಕ ನಿರ್ಮಾಣಕ್ಕೆ ಮುಂದಾಗಿರುವ ರಾಮು, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವಾಗಿ ರಣಾಕ್ಷ ನಿಲ್ಲುತ್ತದೆ ಎಂದರು.

ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನ ಈ ಚಿತ್ರವನ್ನು ಗೆಳೆಯ ಉಮಾಮಹೇಶ್ವರ
ಅವರ ನೆರವಿನಿಂದ ಮಾಡಲಾಗಿದೆ. ಸಕಲೇಶಪುರ ಸುತ್ತ ಮುತ್ತ ಚಿತ್ರೀಕರಣ ನಡೆಯುವಾಗ ಥ್ರಿಲ್ಲಿಂಗ್ ಆಗಿರುವ ಸಂಗತಿಗಳೂ ನಡೆದವು ಎಂಬ ವಿವರ ನೀಡಿದರು ರಾಮು.

ಯಾವುದೇ ಮಂತ್ರ , ತಂತ್ರ , ಶಕ್ತಿಗಳ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು ಎಂಬ ಸಂದೇಶ ಚಿತ್ರದಲ್ಲಿದೆ ಎಂದರು.

ಅನೇಕ ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದೆ. ರಾಮು ಅವರು ಈ ಚಿತ್ರ ಮುಖ್ಯ ಪಾತ್ರಧಾರಿ ಎಂದು ಹೇಳಿದಾಗ ನಂಬಲು ಸಾಧ್ಯವಾಗಲಿಲ್ಲ ಎಂದರು ನಟ ಸೀರುಂಡೆ ರಘು.

ಸಂಗೀತ ನಿರ್ದೇಶಕ ಆಲಾಪ್ ಹಾಗೂ ಕಿರುತೆರೆ ನಟಿ ಅಪೂರ್ವ ಮತ್ತು ಚಿತ್ರದಲ್ಲಿ ನಟಿಸಿರುವ ಇಬ್ಬರು ನವ ನಟಿಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *