* ಪ್ರತಿಷ್ಠಿತ ಆರ್.ಸಿ.ಸ್ಟುಡಿಯೋಸ್
* ವಿಜಯೇಂದ್ರ ಪ್ರಸಾದ್ ವರದಾನ
* ಸುದೀಪ್ ಗೆ ಬರ್ತಡೆ ಗಿಫ್ಟ್
ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ಖ್ಯಾತಿಯ ನಿರ್ದೇಶಕ ಆರ್.ಚಂದ್ರು ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಚಿತ್ರ ಮಾಡುತ್ತಿದ್ದು, ಇದರಲ್ಲಿ ಹಾಲಿವುಡ್ ಮೇಕಿಂಗ್ ಚಿಂತನೆಗಳಿವೆ..
ಮುಖ್ಯವಾಗಿ ದಕ್ಷಿಣ ಭಾರತದ ಹೆಸರಾಂತ ಬರಹಗಾರ ವಿಜೇಂದ್ರಪ್ರಸಾದ್ ಅವರು ಸ್ಕ್ರಿಪ್ಟ್ ಬರಹದ ಉಸ್ತುವಾರಿ ವಹಿಸುತ್ತಿರುವುದು ಹೆಗ್ಗಳಿಕೆ.
ಸುದೀಪ್ ಮುಖ್ಯ ಪಾತ್ರದಲ್ಲಿರುವ ಈ ಬಹುಕೋಟಿ ವೆಚ್ಚದ ಚಿತ್ರದ ಮೇಕಿಂಗ್ ವಿಷಯದಲ್ಲಿ ಅಪ್ರತಿಮ ಮೈಲಿಗಲ್ಲು ಸ್ಥಾಪಿಸಲಿದೆ ಎಂಬುದು ಆರ್.ಚಂದ್ರು ಭರವಸೆ.
ದಕ್ಷಿಣಭಾರತದ ಪ್ರಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಮಗಧೀರ, ಬಾಹುಬಲಿ, ಆರ್ ಆರ್ ಆರ್ ನಂತಹ ಹಿಟ್ ಚಿತ್ರಗಳ ಕಥೆಗಾರ ಮತ್ತು ಸ್ಕ್ರಿಫ್ಟ್ ರೈಟರ್ ವಿ .ವಿಜಯೇಂದ್ರ ಪ್ರಸಾದ್ ಎಂಬುದು ಇತಿಹಾಸ.
ಇದೀಗ ಕನ್ನಡದ ಪ್ರತಿಷ್ಠಿತ ಆರ್ ಸಿ (ಆರ್.ಚಂದ್ರು) ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಸೂಪರ್ ವೈಸ್ ಮಾಡಿದ್ದು, ಅರ್.ಚಂದ್ರು ನಿರ್ದೇಶನದ ಕ್ಯಾಪ್ ಹಾಕುತ್ತಿದ್ದಾರೆ.
ಆರ್ ಸಿ ಸ್ಟುಡಿಯೋಸ್ ಈ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಿಚ್ಚ ಸುದೀಪ್ ಹುಟ್ಟುಹಬ್ಬವಾದ ಸೆಪ್ಟೆಂಬರ್ 2 ರಂದು ಅಧಿಕೃತವಾಗಿ ಘೋಷಣೆಯಾಗಲಿದೆ.
ಆರ್ ಸಿ ಸ್ಟುಡಿಯೋಸ್ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, 5 ದೊಡ್ಡ ದೊಡ್ಡ ಚಿತ್ರಗಳಿಗೆ ಈ ವರ್ಷ ಚಾಲನೆ ನೀಡಲಿದೆ ಎಂಬುದು ಹೆಮ್ಮೆಯ ವಿಷಯ.
ಈ ಮೂಲಕ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ಕೂಡ ಗ್ಲೋಬಲ್ ಸಂಸ್ಥೆಯಾಗಿ ಯುವ ಪ್ರತಿಭಾವಂತ ಮತ್ತು ಉದಯೋನ್ಮುಖರಿಗೆ ಅವಕಾಶ ಕಲ್ಪಿಸುವ ಮಹಾನ್ ಆಶೋತ್ತರಗಳೊಂದಿಗೆ ಆರಂಭವಾಗಿದೆ.
ಮೂವರು ಪ್ರತಿಭಾ ಸಂಪನ್ನರು ಒಂದಾಗಿ ಮಾಡಬಹುದಾದ ಚಮತ್ಕಾರ ಏನಿರಬಹುದು ಎಂಬುದು ಇದೀಗ ಕುತೂಹಲದ ವಿಷಯ.