* ನಾಳೆ (ಅಕ್ಟೋಬರ್ 4) ತೆರೆಗೆ *
* ಆರ್.ರವೀಂದ್ರ ನಿರ್ದೇಶನ *
* ಶ್ರೀ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ *
ಸಹಜ ಕೃಷಿಯೇ ಶ್ರೇಷ್ಠ ಎಂದು ಸಾರುವ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರಿಂದ ಪ್ರಶಂಸೆ ಪಡೆದ ಚಿತ್ರ ‘ಗೋಪಿಲೋಲ’ ನಾಳೆ ಬಿಡುಗಡೆ ಕಾಣುತ್ತಿದೆ.
ಕಳೆದ ಚಿತ್ರದಲ್ಲಿ ಬಾವಿ ಕಳೆದಿದೆ ಎಂಬ ಪ್ರಹಸನದ ಮೂಲಕ ಆಳುವವರ ಮತ್ತು ಅಧಿಕಾರಿಗಳ ಗೋಸಂಬೆತನ ಬಯಲು ಮಾಡಿದ್ದ ಆರ್.ರವೀಂದ್ರ ಈ ಬಾರಿ ಮನುಷ್ಯನ ಮೂಲಭೂತ ನೆಲೆಯಾಗಿರುವ ಕೃಷಿ ಮಹತ್ವ ಸಾರುವ ಚಿತ್ರ ಮಾಡಿದ್ದಾರೆ.
ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್.ಆರ್.ಸನತ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿರುವ ‘ಗೋಪಿಲೋಲ’ ಚಿತ್ರದ ಆಶಯಗಳು ದೊಡ್ಡದಾಗಿವೆ.
ನವರಾತ್ರಿಯ ಶುಭ ಸಂದರ್ಭದಲ್ಲಿ ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದ್ದು, ಬಿಡುಗಡೆಗೂ ಮುನ್ನ ಚಿತ್ರತಂಡದ ಸದಸ್ಯರು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀಮಂಜನಾಥಸ್ವಾಮಿ ದರ್ಶನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀವೀರೇಂದ್ರ ಹೆಗಡೆ ಅವರು ಚಿತ್ರದ ಪೋಸ್ಟರ್ ಹಾಗೂ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ನೈಸರ್ಗಿಕ ಕೃಷಿಯೇ ಶ್ರೇಷ್ಠ ಎಂಬ ಮುಖ್ಯ ಕಥಾಹಂದರವುಳ್ಳ ಈ ಚಿತ್ರದಲ್ಲಿ ಲವ್, ಆಕ್ಷನ್ ಸೇರಿದಂತೆ ಬೇರೆ ಬೇರೆ ಆಯಾಮಗಳಿವೆ ಎಂಬುದು ನಿರ್ದೇಶಕ ರವೀಂದ್ರ ಅವರ ವಿವರಣೆ.
ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ನೋಡುಗರ ಮನ ಗೆದ್ದಿರುವುದರಿಂದ ಚಿತ್ರತಂಡಕ್ಕೆ ಅತೀವ ಭರವಸೆ.
ನಿರ್ಮಾಪಕ ಎಸ್.ಆರ್.ಸನತ್ ಕುಮಾರ್ ಬರೆದಿರುವ ಕಥೆಗೆ ಕೇಶವಚಂದ್ರ ಚಿತ್ರಕಥೆ ಹಾಗೂ ಸಂಭಾಷಣೆ ಇದೆ. ಸೂರ್ಯಕಾಂತ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಿಥುನ್ ಅಶೋಕನ್ (ಚೆನ್ನೈ) ಸಂಗೀತ, ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತವಿದೆ.
ಸಹ ನಿರ್ಮಾಪಕರಾಗಿರುವ ಮಂಜುನಾಥ್ ಮುಖ್ಯ ಪಾತ್ರದಲ್ಲಿದ್ದು, ಅವರ ಜೊತೆ ನಿಮಿಷ ಕೆ ಚಂದ್ರ ಅಭಿನಯಿಸಿದ್ದಾರೆ.
ಎಸ್ ನಾರಾಯಣ್, ಸಪ್ತಗಿರಿ, ಜಾಹ್ನವಿ, ಜೋಸೈಮನ್, ನಾಗೇಶ್ ಯಾದವ್, ಪದ್ಮಾ ವಾಸಂತಿ, ಸ್ವಾತಿ, ಹನುಮಂತೇ ಗೌಡ, ಡಿಂಗ್ರಿ ನಾಗರಾಜ್, ಕೆಂಪೇಗೌಡ, ಸಚಿನ್, ರಾಧ ರಾಮಚಂದ್ರ, ರೇಖಾದಾಸ್, ಸತೀಶ್ ತಾರಾ ಬಳಗದಲ್ಲಿದ್ದಾರೆ.