Snehapriya.com

June 9, 2025

ಎಚ್ಚರ ಇದು ವಾಮಚಾರದ ಸಾವಿನ ಸೂಚಿ ಸಕೂಚಿ

Social Share :

ಆ ಒಂದು ವಾಮಾಚಾರದ ಹೆಸರು ಹೇಳಿದರೆ ಸಾವಿನ ಬಾಗಿಲು ತಟ್ಟಬಹುದಂತೆ..

ಹಾಗೆಂದು ಹೇಳಿಕೊಂಡಿತು ಚಿತ್ರತಂಡ. ನಿರ್ಮಾಣದ ಹಂತದಲ್ಲಿ ಎದುರಾದ ಅಡೆತಡೆಗಳ ಜೊತೆಗೆ ಅನೇಕರನ್ನು ಕಳೆದುಕೊಳ್ಳಬೇಕಾಯಿತು ಎಂಬ ವಿವರವೂ ಲಭ್ಯ ವಾಯಿತು. ಚಿತ್ರದ ನಿರ್ದೇಶಕ ಬಿ.ಅಶೋಕ ಚಕ್ರವರ್ತಿ
ವಾಮಾಚಾರದ ಭಯಾನಕತೆಯನ್ನು ವಿವರಿಸಿದರು..

ಅಂದ ಹಾಗೆ ಈ ಚಿತ್ರದ ಹೆಸರು ಸಕೂಚಿ. ಇದಕ್ಕೆ ಸಾವಿನ ಸೂಚಿ ಎಂಬ ಟ್ಯಾಗ್ ಲೈನ್ ಸಹ ಇದೆ. ಬೆಂಗಳೂರಿನ ಕಲಾವಿದರ ಸಂಘದ ಆವರಣದಲ್ಲಿ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಯಾನಕತೆಯ ಅನುಭವಗಳನ್ನು ತೆರೆದಿಟ್ಟಿತು ಚಿತ್ರತಂಡ.

ಡಯಾನ ಮೇರಿ ಚಿತ್ರದ ನಾಯಕಿ. ಖುಷಿ ರವಿ,‌ ನಿರ್ದೇಶಕ ಮಹೇಶ್ ಬಾಬು, ಬಿಜೆಪಿ ಮುಖಂಡ ಲಕ್ಷ್ಮೀಕಾಂತ್ ಹಾಗೂ ಇತರರು ವೇದಿಕೆಯಲ್ಲಿದ್ದರು.

ಕೆಲವು ವರ್ಷಗಳ ಹಿಂದೆ ಶೃಂಗೇರಿಯಿಂದ ಕೊಪ್ಪಕ್ಕೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಅಲ್ಲೇ ಒಂದು ರೆಸಾರ್ಟ್ ನಲ್ಲಿ ರಾತ್ರಿ ಸಿಡಿಲಿನ ಅಬ್ಬರದ ನಡುವೆ ತುಂತುರು ಮಳೆ. ಈ ವೇಳೆ ಭಾರೀ ಸಿಡಿಲಿನ‌ ಶಬ್ದಕ್ಕೆ ನೂರಡಿ ಎತ್ತರದ ಮರದ‌ ಕೊಂಬೆ ಮುರಿದು ಬಿತ್ತು.‌ ಭಯಂಕರ ಶಬ್ದ. ಆನಂತರ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ವಿಜಯನಗರದಲ್ಲಿ ಮತ್ತೆ ಅದೇ ಶಬ್ದ ಕೇಳಿ ಬಂತು. ಈಗಲೂ ಆ ಶಬ್ದ ಕಿವಿಯಲ್ಲೇ ಇದ್ದ ಹಾಗೆ ಇದೆ. ನಂತರ ಅದರ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದಾಗ ಒಂದು ಇದೊಂದು ವಾಮಾಚಾರದ ಪ್ರಯೋಗ ಎಂಬುದು ತಿಳಿದು ಬಂತು ಎಂದು ವಿವರಿಸಿದರು ನಿರ್ದೇಶಕರು.

ಪ್ರೇತಾತ್ಮಗಳಿಗೆ ಪ್ರೇತಾತ್ಮ ಈ ಸಕೂಚಿ ಎಂಬುದು ಪ್ರೇತಾತ್ಮಗಳಿಗೆ ಪ್ರೇತಾತ್ಮ.. ಈ ವಿಷಯ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಇದು ನಿರ್ಮಾಪಕರಿಗೆ ಇಷ್ಟವಾಗಿ ಈಗ ಸಿನಿಮಾ ಸಿದ್ದವಾಗಿದೆ ಎಂದರು ನಿರ್ದೇಶಕ ಅಶೋಕ್ ಚಕ್ರವರ್ತಿ.

ನಿರ್ದೇಶಕರು ಕಥೆ ಹೇಳಿದಾಗ, ಬರೀ ಹಾರಾರ್ ಕಥೆ ಇರಬಹುದು ಎಂದುಕೊಂಡಿದ್ದೆ. ಆದರೆ ಸಕೂಚಿ ಕಮರ್ಷಿಯಲ್ ಸಿನಿಮಾ. ಇದರಲ್ಲಿ ಹಾರಾರ್, ಪ್ರೇಮಕಥೆ ಎಲ್ಲವೂ ಇದೆ ಎಂಬುದು ಮುಖ್ಯಪಾತ್ರದಲ್ಲಿರುವ ತ್ರಿವಿಕ್ರಮ ಅವರ ಮಾತು.

ಮುಖ್ಯ ಪಾತ್ರಧಾರಿ ಡಯನಾ ಕೂಡ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಸಂಗೀತ ನಿರ್ದೇಶಕ ಗಣೇಶ್ ಗೋವಿಂದಸ್ವಾಮಿ ಸಂಗೀತದ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕ ಬಿ.ಸಿ.ಅಶ್ವಿನ್, ಕ್ರಿಯೇಟಿವ್ ಹೆಡ್ ಹಾಗೂ ಕಾರ್ಯಕಾರಿ ನಿರ್ಮಾಪಕ ಚಂದ್ರಶೇಖರ್ ಕೆ.ಆರ್, ಸಹ ನಿರ್ಮಾಪಕರಾದ ಮಹವೀರ್ ಪ್ರಸಾದ್ ಹಾಗೂ ಮಧುಕರ್ ಇದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *