ಇದೇ ವಾರ ಬಿಡುಗಡೆ ಕಾಣಲಿರುವ ಎಚ್.ಎನ್.ನರೇಶ್ ಕುಮಾರ್ ನಿರ್ದೇಶನದ ‘ಸೌತ್ ಇಂಡಿಯನ್ ಹೀರೋ’ ಚಿತ್ರವನ್ನು ನೋಡಿದ ರಿಯಲ್ ಸ್ಟಾರ್ ಉಪೇಂದ್ರ, ಚಿತ್ರತಂಡ ಕುರಿತು ಹಾಡಿ ಹೊಗಳಿದ್ದಾರೆ.
ಮುಖ್ಯವಾಗಿ ನಿರ್ದೇಶಕ ನರೇಶ್ ಕುಮಾರ್ ಅವರನ್ನು ಹಾಡಿ ಹೊಗಳಿದ ರಿಯಲ್ ಸ್ಟಾರ್ ಇದು ಅತ್ಯುತ್ತಮ ಚಿತ್ರ ಮಾತ್ರವಲ್ಲ; ಒಂದು ಉತ್ತಮ ಸಂದೇಶ ಕೂಡ ಇದೆ ಎಂದು ಹೇಳಿದ್ದಾರೆ.
ಅಲ್ಲದೆ ಈ ಚಿತ್ರವನ್ನು ಜನರೇ ಪ್ರಮೋಷನ್ ಮಾಡ್ತಾರೇ.. ಏನೂ ಭಯಪಡಬೇಡಿ ಎಂದು ಚಿತ್ರತಂಡದ ಬೆನ್ನು ತಟ್ಟಿದ್ದಾರೆ ಉಪೇಂದ್ರ.
ಈ ನಡುವೆ ‘ಸೌತ್ ಇಂಡಿಯನ್ ಹೀರೋ’ ಚಿತ್ರವು ದಕ್ಷಿಣ ಭಾರತದ ಎಲ್ಲಾ ಭಾಷೆಗಳಿಂದ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ. ಈಚೆಗೆ ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಏರ್ಪಡಿಸಿದ ಪ್ರದರ್ಶನದಲ್ಲಿ ಚಿತ್ರವನ್ನು ವೀಕ್ಷಣೆ ಮಾಡಿದ ವಿತರಕರು ಅತ್ಯುತ್ತಮ ವ್ಯಾಪಾರದಲ್ಲಿ ಕೈ ಜೋಡಿಸಿದ್ದಾರೆ.
ಹಾಗಾಗಿ ತಮ್ಮ ಪತ್ನಿ ಶಿಲ್ಪಾ ಅವರ ಜೊತೆ ಕೈ ಜೋಡಿಸಿ ನಿರ್ಮಾಣ ಮಾಡಿರುವ ನರೇಶ್ ಕುಮಾರ್ ಈಗ ಲಾಭದಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ.
ಸಾರ್ಥಕ್ ಹಾಗೂ ಖಾಸಿಮಾ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವು ಇದೇ ತಿಂಗಳ 24ರಂದು ಬಿಡುಗಡೆ ಕಾಣುತ್ತಿದ್ದು, ಕನ್ನಡದ ಜೊತೆಗೆ ದಕ್ಷಿಣ ಭಾರತದ ಭಾಷೆಗಳಲ್ಲಿಯೂ ಚಿತ್ರವು ಬಿಡುಗಡೆಯಾಗುತ್ತಿದೆ.