ಒಂದು ಚಿತ್ರ ತಂಡದ ನಲಿವಿನಲ್ಲಿ ಕನಸುಗಳು ತುಂಬಿಕೊಂಡಿವೆ. ಉತ್ಸಾಹ ಉಲ್ಲಾಸ ಮನೆ ಮಾಡಿದೆ..
ಅದೇ ಪ್ರಾಯಶಃ..!
ಚಿತ್ರದ ಹೆಸರು ಪ್ರಾಯಶಃ, ಚಿತ್ರವೂ ಪಾಯಸದಂತೆ ಅತ್ಯಂತ ಸಿಹಿಯಾಗಿರುತ್ತದೆ.. ತಂಡವೂ ಅಷ್ಟೇ ಖುಷಿಯಿಂದ ಚಿತ್ರ ನಿರ್ಮಾಣ ಮಾಡಿದೆ.
ಈಚೆಗೆ ನಡೆದ ಟ್ರೈಲರ್ ಬಿಡುಗಡೆಯಲ್ಲಿ ಚಿತ್ರದ ಆಶಯಗಳ ಕುರಿತು ಚಿತ್ರತಂಡ ಹೇಳಿಕೊಂಡಿತು..
ಚಿತ್ರವೊಂದು ನಿಗೂಢ ಕಥಾನಕ.. ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ ಪ್ರೇಕ್ಷಕರನ್ನು ಸೆಳೆಯುತ್ತಾ ಹೋಗುತ್ತದೆ ಎಂದರು ನಿರ್ದೇಶಕ ರಂಜಿತ್ ರಾವ್. ಈ ಚಿತ್ರವನ್ನು ನಿರ್ಮಾಣ ಕೂಡ ಅವರದೇ..
ಧಾರಾವಾಹಿ ನಂಟು ಇಡೀ ತಂಡಕ್ಕಿದೆ. ಆದರೆ ಅದರಂತೆ ಚಿತ್ರ ಇಲ್ಲ; ಬದಲಿಗೆ ವೇಗವನ್ನು ಪಡೆದುಕೊಂಡಿದೆ. ಚಿತ್ರದ ಆಶಯಗಳು ಕೂಡ ಉತ್ತಮವಾಗಿವೆ ಎಂದರು ರಂಜಿತ್ ರಾವ್.
ಮುಂದಿನ ವಾರ ಅಂದರೆ ಡಿಸೆಂಬರ್ 9 ರಂದು ಚಿತ್ರ ಬಿಡುಗಡೆ ಕಾಣುತ್ತಿದೆ. ಇದಕ್ಕೆ ಹಿರಿಯರ ಹಾರೈಕೆ ಬೇಕಾಗಿದೆ ಎಂದರು.
ಹೊಸ ನಟ ಶೋಭರಾಜ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸಿದ್ದು, ಇದೂ ಪ್ರಮುಖ ಪಾತ್ರಗಳಲ್ಲಿ ಒಂದು. ಈ ಚಿತ್ರ ಮತ್ತು ಪಾತ್ರ ನನ್ನ ಬದುಕಿಗೆ ಹೊಸ ದಾರಿ ಹಾಕಿಕೊಟ್ಟಿದೆ ಎಂದರು ಶೋಭರಾಜ್.
ನಾನು ಸೀರಿಯಲ್ ಮೂಲಕ ಬಂದಿದ್ದರೂ ಅದರ ಹ್ಯಾಂಗೋವರ್ ಬಿಟ್ಟು ಅಭಿನಯ ಮಾಡಿರುವೆ ಎಂದರು ಮುಖ್ಯ ಪಾತ್ರದಲ್ಲಿ ನಟಿಸಿರುವ ರಾಹುಲ್.
ಧಾರಾವಾಹಿಗಳಲ್ಲಿ ನಟಿಸುವಾಗ ಎಲ್ಲರಿಗೂ ಒಂದು ಆಸೆ ಇರುತ್ತದೆ.. ಮುಂದೆ ನಾನು ಸಿನಿಮಾ ಮಾಡಬೇಕು ಎಂಬುದು. ಅಂತಹ
ಸಿನಿಮಾ ಮಾಡುವ ಇಚ್ಚೆ ಈ ಮೂಲಕ ಕೈಗೂಡಿದೆ. ಆದರೆ ಧಾರವಾಹಿಯ ಯಾವ ಅಂಶವೂ ಇದರಲ್ಲಿ ಕಾಣುವುದಿಲ್ಲ ಎಂದು ಹೇಳುತ್ತಾ ಹೋದರು.
ಸಹ ನಿರ್ಮಾಪಕಿ ಕೃಷ್ಣ ಕುಮಾರಿ,
ಛಾಯಾಗ್ರಾಹಕ ಪ್ರಶಾಂತ್ ಪಾಟೀಲ್
ಸಂಕಲನಕಾರ ಅಶೋಕ್, ಚಿತ್ರಕ್ಕೆ ಸಹಕಾರ ನೀಡಿರುವ ಅಭಿಜಿತ್, ಸಂಗೀತ ನಿರ್ದೇಶಕ ವಿಜಯ್ ಕೃಷ್ಣ ಡಿ, ದಕ್ಷಿಣ ಕನ್ನಡ ಭಾಗದ ವಿತರಕ ನಿಶಾಂತ್, ಕಾರ್ಯ ನಿರ್ವಾಹಕ ನಿರ್ಮಾಪಕ ಸುನಿಲ್ ಹಾಗೂ ಮಧು ಉಪಸ್ಥಿತರಿದ್ದರು.