ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿ ಆಡಳಿತ ಚುಕ್ಕಾಣಿ ಹಿಡಿತ ಬೆನ್ನಲ್ಲೇ ಆ ಗೆಲುವಿಗೆ ಕಾರಣಕರ್ತರಿಗೆ ಕಾಂಗ್ರೆಸ್ ಧನ್ಯವಾದ ಹೇಳುತ್ತಿದೆ.
ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿ ಬೆಂಬಲ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಭೇಟಿ ಮಾಡಿದ್ದಾರೆ.
‘ಇದೊಂದು ಸೌಹಾರ್ದ ಭೇಟಿಯಾಗಿತ್ತು’ ಎಂದು ಸುರ್ಜೆವಾಲ ಹೇಳಿಕೆ ನೀಡಿದರು. ಬಳಿಕ ಚುನಾವಣಾ ಸಮಯದಲ್ಲಿ ಶಿವಣ್ಣ ದಂಪತಿ ಮಾಡಿದ ಸಹಾಯ ಮತ್ತು ಸಹಕಾರ ಮರೆಯುವಂತಿಲ್ಲ ಎಂಬುದನ್ನು ಪಕ್ಷವು ಸದಾ ನೆನೆಯುತ್ತದೆ ಎಂದು ತಿಳಿಸಿದ್ದಾರೆ.
ಈ ಭೇಟಿ ಸಂದರ್ಭದಲ್ಲಿ ಶಿವಣ್ಣ ದಂಪತಿ ನಡೆದುಕೊಂಡ ರೀತಿ ನೀಡಿದ ಆತಿಥ್ಯ ಅದ್ಭುತ ಎಂದವರು ಕೊಂಡಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.