Snehapriya.com

June 9, 2025

ಬಿಡುಗಡೆಯ ಹಂಬಲದಲ್ಲಿ ಶ್ರೀಮಂತ

Social Share :

ರೈತ ಅನ್ನದಾತ; ರೈತ ದೇಶದ ಬೆನ್ನೆಲುಬು; ರೈತ ಶ್ರೀಮಂತ ಎಂದು ಸಾರುವ ರಮೇಶ್ ಹಾಸನ್ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ ‘ಶ್ರೀಮಂತ’ ಬಿಡುಗಡೆಗೆ ಸಜ್ಜುಗೊಂಡಿದೆ.

ಚುನಾವಣೆ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡಿದ್ದ ‘ಶ್ರೀಮಂತ’ ಮತ ಎಣಿಕೆ ನಡೆದ ಬಳಿಕ ಚಿತ್ರ ಮಂದಿರಗಳಲ್ಲಿ ಪ್ರತ್ಯಕ್ಷವಾಗುತ್ತಿದೆ.

ಬಾಲಿವುಡ್ ನಟ ಸೋನುಸೂದ್ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ ವಿಶೇಷತೆಗಳಿಗೆ ಕೊರತೆಯೇ ಇಲ್ಲ; ಮುಖ್ಯವಾಗಿ ಹಂಸಲೇಖ ಸಂಗೀತದಲ್ಲಿ ಮೂಡಿ ಬಂದಿರುವ ರೈತ ಮಹಾ ಸಂತ ಎಂದು ಬಿಂಬಿಸಿರುವ ರೈತ ಗೀತೆ ಚಿತ್ರದ ಹೈಲೈಟ್.

ಈ ಹಾಡು ಮೇರು ಗಾಯಕ ಡಾ.ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರ ಕೊನೆಯ ಹಾಡು. ಈ ಹಾಡನ್ನು ಥೀಮ್ ಸಾಂಗ್ ಆಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಚಿತ್ರತಂಡ ವಿವರ ನೀಡಿದೆ.

ಚಿತ್ರದಲ್ಲಿ ಕನ್ನಡದ ಮುಂಚೂಣಿಯ ನಾಯಕ ನಟರೊಬ್ಬರು ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರತಂಡ ಈ ವಿಷಯವನ್ನು ಬಹಿರಂಗಗೊಳಿಸಿಲ್ಲ. ಕ್ರಾಂತಿ ಎಂಬ ಯುವನಟ ಮತ್ತು ಸಾಕಷ್ಟು ಕಲಾವಿದರ ಸಂಗಮ ಚಿತ್ರದಲ್ಲಿದೆ.

ಬಹುಕೋಟಿ ವೆಚ್ಚದ ಈ ಚಿತ್ರವನ್ನು ರಮೇಶ್ ಹಾಸನ್ ಅವರ ಜೊತೆ ನಾರಾಯಣಪ್ಪ ಹಾಗೂ ಸಂಜಯ್ ಬಾಬು ನಿರ್ಮಿಸಿದ್ದಾರೆ. ಬಹಳವೇ ಶ್ರೀಮಂತಿಕೆಯ ವಿಷಯಗಳನ್ನು ಒಳಗೊಂಡಿರುವ ‘ಶ್ರೀಮಂತ’ ಚಿತ್ರದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ನಾಡಿನ ಅಗ್ರಮಾನ್ಯ ಗಣ್ಯರು ಪ್ರಶಂಸಿದ್ದಾರೆ ಎಂಬುದು ಹೆಗ್ಗಳಿಕೆ.

ಅಂದ ಹಾಗೆ ಚಿತ್ರವು ಮೇ 19 ರಂದು ತೆರೆ ಕಾಣುತ್ತಿದೆ. ಆ ಮೂಲಕ ಕನ್ನಡದ ಚಿತ್ರರಸಿಕರ ಮನ ಸೂರೆಗೊಳ್ಳುವ ಹಾದಿಯಲ್ಲಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *