ಇದು ಮೂವರು ವಿಶೇಷ ಚೇತನರ ಕಥೆ.. ಜನರ ಮೌಢ್ಯಗಳನ್ನು ಅಳೆದು ಪ್ರಜ್ಞಾವಂತಿಕೆ ಮೂಡಿಸುವ ದಿಶೆಯಲ್ಲಿ ಮೂಡಿ ಬಂದಿರುವ ಚಿತ್ರ.
ಹೆಸರು ಪರ್ಯಾಯ..!
ಒಬ್ಬನಿಗೆ ಮಾತು ಬರುವುದಿಲ್ಲ. ಮತ್ತೊಬ್ಬನಿಗೆ ಕಿವಿ ಕೇಳುವುದಿಲ್ಲ; ಮುಖ್ಯ ಪಾತ್ರಧಾರಿಗೆ ಕಣ್ಣು ಕಾಣುವುದಿಲ್ಲ. ಈ ಮೂರು ಪಾತ್ರಗಳೇ ಚಿತ್ರದ ಜೀವಾಳ..
ಬೆಳಗಾವಿ ಮೂಲದ ಕೆಲವು ಸ್ನೇಹಿತರು ಸೇರಿ ಮಾಡಿದ ಚಿತ್ರ ಮುಂದಿನ ವಾರ ಅಂದರೆ ಸೆಪ್ಟೆಂಬರ್ 8 ರಂದು ಬಿಡುಗಡೆ ಕಾಣುತ್ತಿದ್ದು, ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ತಂಡ ಮಾತಿಗೆ ಕುಳಿತಿತ್ತು.
ಮಮತಾ ಕ್ರಿಯೇಷನ್ಸ್ ಮೂಲಕ ರಾಜಕುಮಾರ್ ಹಾಗೂ ಇಂದುಮತಿ ರಾಜಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಪತ್ರಕರ್ತ
ರಮಾನಂದ ಮಿತ್ರ ನಿರ್ದೇಶನ ಮಾಡಿದ್ದಾರೆ.
ಮೂವರು ಚೇತನರ ಕಥೆ ಇದಾಗಿದ್ದು, ಅಂಧ ವ್ಯಕ್ತಿಯ ಪಾತ್ರದಲ್ಲಿ ನಿರ್ಮಾಪಕ ರಾಜಕುಮಾರ್ ಅವರೇ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿದ್ದ ನನಗೆ ಚಿತ್ರ ನಿರ್ಮಿಸುವ ಕನಸಿತ್ತು. ಅದೀಗ ಸಾಕಾರಗೊಂಡಿದೆ ಎಂದರು ರಾಜಕುಮಾರ್.
ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಆಸುಪಾಸಿನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದೆವು. ಹಾಗಾಗಿ ಮುಂದಿನ ವಾರ ಚಿತ್ರವು ಬಿಡುಗಡೆ ಕಾಣುತ್ತಿದೆ ಎಂದರು.
ಪತ್ರಕರ್ತನಾಗಿರುವ ನನಗೆ ಚಿತ್ರ ನಿರ್ದೇಶನ ಎರಡನೇ ಪ್ರಯತ್ನ ಎಂದು ಹೇಳಿಕೊಂಡರು ರಮಾನಂದ ಮಿತ್ರ. ಇದೊಂದು ವಿಶೇಷ ಪ್ರಯತ್ನ ಎಂಬುದು ಬಿಡುಗಡೆಯ ನಂತರವೇ ತಿಳಿಯಲಿದೆ ಎಂದರು ನಿರ್ದೇಶಕರು.
ರಂಜನ್ ಕುಮಾರ್ ಮಾತು ಬಾರದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದು, ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ಇನ್ನು ಕಲಾವಿದೆ ಅರ್ಚನಾಶೆಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಮಿತ್ರಾ ಅವರು ಸ್ನೇಹಿತರು. ಹಾಗಾಗಿ ಕರೆದು ಪಾತ್ರ ಕೊಟ್ಟರು ಎಂದು ವಿವರಿಸಿದರು.
ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡಿದ್ದು, ನಾಲ್ಕು ಹಾಡುಗಳಿವೆ ಎಂಬ ಮಾಹಿತಿ ಕೊಟ್ಟರು ಎ.ಟಿ.ರವೀಶ್.
ಚಿತ್ರವನ್ನು ವಿತರಕ ನವರತ್ನ ಪ್ರಸಾದ್ ಬಿಡುಗಡೆ ಮಾಡುತ್ತಿದ್ದು, ನೂರು ಅಥವಾ ನೂರ ಐವತ್ತು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಕಾಣುತ್ತದೆ ಎಂದು ವಿವರಿಸಿದರು.