* ಇಂದು (ಅಕ್ಟೋಬರ್ 3) ತೆರೆಗೆ *
* ಅಘೋರಿಗಳ ವಾಮಾಚಾರದ ಕಥೆ*
* ಅಘೋರಿ ಮತ್ತು ದೇವಿ ಅವತಾರದಲ್ಲಿ ರಾಧಿಕಾ *
‘ಮೊದಲು ಮನೆಯಲ್ಲೇ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗುವಾಗ ಭಯವಾಗುತ್ತಿತ್ತು. ಈಗ ಹಾರರ್ ಫೀಲ್ ಬರುವುದೆ ಇಲ್ಲ..’
ದೆವ್ವ ಮತ್ತು ಭಯಾನಕತೆ ಕುರಿತು ಹೀಗೆ ವರ್ಣಿಸಿದರು ನಟಿ ರಾಧಿಕಾ ಕುಮಾರಸ್ವಾಮಿ..
ಈ ಚಿತ್ರವನ್ನು ಸ್ಮಶಾನದಲ್ಲಿ ಚಿತ್ರೀಕರಿಸುವಾಗ ಭಯವಾಗಿ, ಸ್ಮಶಾನದ ಸೆಟ್ ಹಾಕಲು ಹೇಳಿದ್ದೆ. ಸಹೋದರ ರವಿರಾಜ್ ಹಾಗೂ ಶ್ರೀ ಜೈ ಸಾಕಷ್ಟು ಧೈರ್ಯ ತುಂಬಿ ಸ್ಮಶಾನದಲ್ಲೇ ಚಿತ್ರೀಕರಣ ನಡೆಯುವಂತೆ ಮಾಡಿದರು.
ಅಘೋರಿ ಪಾತ್ರ ಮಾಡುವುದು ಸಾಮಾನ್ಯ ವಿಷಯವಲ್ಲ; ತಂತ್ರಮಂತ್ರ ಸಿದ್ಧಿಗಳ ಆಲೋಚನೆಯಲ್ಲಿ ಕಠಿಣ ನಿರ್ಧಾರದಲ್ಲಿ ಅಚಲ ನಂಬಿಕೆಯಲ್ಲಿ ಸಾಧನೆ ಮಾಡಲು ಹೊರಡುವ ಅವರ ಜೀವನ ಶೈಲಿ ಮನುಷ್ಯನ ಬದುಕಿಗೆ ಎಟಕುವುದಿಲ್ಲ..
ಅತಿ ಮಾನುಷ ಶಕ್ತಿಯ ವಶ ಮಾಡಿಕೊಳ್ಳುವಿಕೆ ಮತ್ತು ಅದರ ನಂಬಿಕೆಯ ನೆಲೆಯಲ್ಲಿ ಅಗೋಚರ ವಿಷಯಗಳಿರುತ್ತವೆ. ಅದನ್ನು ಸಾಕಷ್ಟು ಸಂಶೋಧಿಸಿ ಈ ಚಿತ್ರದಲ್ಲಿ ತರಲಾಗಿದೆ ಎಂದರು ನಿರ್ದೇಶಕ ಶ್ರೀ ಜೈ.
ರಮೇಶ್ ಅರವಿಂದ್ ಪೊಲೀಸ್ ವರಿಷ್ಠಾಧಿಕಾರಿ ಪಾತ್ರ ನಿರ್ವಹಿಸಿದ್ದು, ಅಘೋರಿಗಳ ಆಲೋಚನೆಗಳ ಪ್ರಭಾವಕ್ಕೆ ಒಳಗಾಗುವರೋ ಇಲ್ಲವೋ ಎಂಬುದನ್ನು ಚಿತ್ರದಲ್ಲೇ ನೋಡಬೇಕು.
ಆದರೆ ಸಾಕಷ್ಟು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದರೂ ಈ ಪಾತ್ರದ ನೆಲೆ ಬೇರೆಯೇ ಆಗಿದೆ ಎಂದರು ರಮೇಶ್ ಅರವಿಂದ್.
ಅನು ಪ್ರಭಾಕರ್ ಅವರಿಗೆ ಮತ್ತೆ ಗೃಹಿಣಿ ಪಾತ್ರ ರಮೇಶ್ ಅರವಿಂದ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಧಿಕಾ ಅವರ ಸಹೋದರ ರವಿರಾಜ್ ಚಿತ್ರದ ಬಿಡುಗಡೆ ಹಾಗೂ ತಾಂತ್ರಿಕ ವಿಷಯಗಳ ಬಗ್ಗೆ ಮಾತನಾಡಿದರು. ಚಿತ್ರದ ಭಾಗವಾಗಿದ್ದಕ್ಕೆ ಖುಷಿಯಾಗಿದೆ ಎಂದರು ರಂಗಾಯಣ ರಘು ಹಾಗೂ ಸಾಹಸ ನಿರ್ದೇಶಕ ರವಿವರ್ಮ.