* ಚಂದನ-ಪ್ರಸನ್ನ ಭಾಸ್ಕರ್ ವಿವಾಹ
* ಪಿಆರ್ ಓ ಸುಧೀಂದ್ರ ವೆಂಕಟೇಶ್ ಮಗಳು ಚಂದನ
* ವಿವಾಹ ಮಹೋತ್ಸವಕ್ಕೆ ಬಂದ ಗಣ್ಯರು
* ರವಿಚಂದ್ರನ್, ಹಂಸಲೇಖ, ಉಪೇಂದ್ರ ಮೊದಲಾವರು..
ಕನ್ನಡ ಚಿತ್ರರಂಗದ ಪ್ರಚಾರಕರ್ತ(ಪಿ ಆರ್ ಓ) ಸುಧೀಂದ್ರ ವೆಂಕಟೇಶ್ ಅವರ ಪುತ್ರಿ ಚಿ.ಸೌ. ಚಂದನ ವಿವಾಹ ಚಿ.ರಾ.ಪ್ರಸನ್ನ ಭಾಸ್ಕರ್ ಅವರೊಂದಿಗೆ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.
ವಿವಾಹ ಮಹೋತ್ಸವಕ್ಕೆ ಸಿನಿಮಾ ರಂಗದ ಅತಿರಥ ಮಹಾರಥ ಗಣ್ಯರು ಪಾಲ್ಗೊಂಡು ವಧು- ವರರಿಗೆ ಆಶೀರ್ವಾದ ಮಾಡಿದ್ದು ವಿಶೇಷವಾಗಿತ್ತು.
ರವಿಚಂದ್ರನ್, ರಮೇಶ್ ಅರವಿಂದ್, ಉಪೇಂದ್ರ, ಧ್ರುವ ಸರ್ಜಾ, ಅಜೇಯ್ ರಾವ್ , ವಿನೋದ್ ಪ್ರಭಾಕರ್, ಹಂಸಲೇಖ ದಂಪತಿ, ಸುಧಾರಾಣಿ, ರಾಗಿಣಿ ದ್ವಿವೇದಿ, ಚಾಂದಿನಿ, ಅಮೂಲ್ಯ, ಸೋನು ಗೌಡ , ಪ್ರಗತಿ ರಿಷಭ್ ಶೆಟ್ಟಿ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಧರ್ಮ, ತಬಲ ನಾಣಿ, ಶ್ರೀನಾಥ್, ಕೀರ್ತಿ ರಾಜ್, ಧರ್ಮ ಕೀರ್ತಿರಾಜ್, ಸಿಹಿಕಹಿ ಚಂದ್ರು, ಓಂ ಸಾಯಿಪ್ರಕಾಶ್..
ಬಿ.ಸುರೇಶ್, ಗುರುದತ್, ರವಿಚೇತನ್ ನಿರ್ಮಾಪಕರಾದ ಸಾ.ರಾ.ಗೋವಿಂದು, ಎಸ್.ಎ.ಚಿನ್ನೇಗೌಡ, ಎಸ್ ವಿ ಬಾಬು, ಎಂ.ಜಿ.ರಾಮಮೂರ್ತಿ, ಟಿ.ಪಿ.ಸಿದ್ದರಾಜು, ಶೈಲಜಾ ನಾಗ್, ರಾಜ್ ಕುಮಾರ್..
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ಆರ್ ಚಂದ್ರು, ಟಿ.ಎನ್ ಸೀತಾರಮ್, ಬಹದ್ದೂರ್ ಚೇತನ್..
ಸಾಹಸ ನಿರ್ದೇಶಕ ರವಿವರ್ಮ, ಗಾಯಕಿಯರಾದ ಮಂಜುಳಾ ಗುರುರಾಜ್, ಬಿ.ಆರ್ ಛಾಯಾ, ಸಂಗೀತ ಕಟ್ಟಿ ಸೇರಿದಂತೆ ಮುಂತಾದ ಚಿತ್ರರಂಗದ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧು-ವರರನ್ನು ಆಶೀರ್ವದಿಸಿದರು.
ಮೇ 7 ರ ಭಾನುವಾರ ಇಟ್ಟಮಡು ಆದಿತ್ಯ ಕಲ್ಯಾಣ ಮಂಟಪದಲ್ಲಿ ಸಿನಿಮಾ ಪ್ರಪಂಚದ ತಾರಾ ಸಂಗಮದ ನಡುವೆ ಚಂದನ ಮತ್ತು ಪ್ರಸನ್ನ ಭಾಸ್ಕರ್ ಮಿಂಚಿ ಸತಿ ಪತಿಗಳಾದರು.