ಸ್ಟಾರ್ಟ್ ಅಪ್ ಕಲ್ಚರ್ ಈಗ ಹೊಸ ಹೊಸ ಆಲೋಚನೆಗಳ ಜೊತೆಗೆ ವಿಚಿತ್ರ ಉತ್ಸಾಹಗಳಲ್ಲಿ ವಿವಿಧ ರೂಪಗಳಲ್ಲಿ ಮೈದಳೆದಿದೆ..
‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..’ ಎಂಬಂತೆ ಐಟಿ ಉದ್ಯೋಗಿಗಳಲ್ಲಿ ಏನಾದರೂ ಹೊಸದನ್ನು ಆರಂಭಿಸುವ ಕಡೆಗೆ ಗಮನ ಹರಿಯುತ್ತದೆ..
ಇಂತಹ ವಿಶೇಷತೆಗಳ ಬಗ್ಗೆ ಗಮನ ಸೆಳೆಯುವ ‘ಮೇಡ್ ಇನ್ ಬೆಂಗಳೂರು’ ಚಿತ್ರ ಈ ವಾರ ಬಿಡುಗಡೆ ಕಾಣುತ್ತಿದೆ.
ಮಧುಸೂಧನ್, ಪುನೀತ್ ಮಾಂಜಾ,
ವಂಶಿ ಹಾಗೂ ಹಿಮಾಂಶಿ ಮುಖ್ಯ ಪಾತ್ರದಲ್ಲಿರುವ ಚಿತ್ರವನ್ನು ಪ್ರದೀಪ್ ಕೆ.ಶಾಸ್ತ್ರಿ ನಿರ್ದೇಶನ ಮಾಡಿದ್ದು, ಕೆ.ಎಸ್.ಬಾಲಕೃಷ್ಣ ಇದರ ನಿರ್ಮಾಪಕರು.
ಮೂವರು ಉದ್ಯಮ ಆರಂಭಿಸಿ ಬೆಳೆದ ಬಗೆಯನ್ನು ವರ್ಣಿಸಿದ ನಿರ್ಮಾಪಕರು ಉದ್ಯಮ ಮತ್ತು ಅದರ ಬೆಳವಣಿಗೆಯ ದಾರಿಯಲ್ಲಿ ಮತ್ತೆ ಏನಾದರೂ ಆರಂಭಿಸುವ ಉತ್ಸಾಹದಲ್ಲಿ ಈ ಚಿತ್ರ ಮಾಡಿರುವುದಾಗಿ ಹೇಳಿಕೊಂಡರು ನಿರ್ಮಾಪಕರು.
ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಅತ್ಯಂತ ಕಿರಿಯ ಸಿಇಓ ಎಂದು ಹೆಸರಾಗಿರುವ ಸುಹಾಸ್ ಗೋಪಿನಾಥ್ ಉಪಸ್ಥಿತಿ ಬಹಳವೇ ವಿಶೇಷವಾಗಿತ್ತು.
ಹಿರಿಯ ನಟ ಸಾಯಿಕುಮಾರ್ ಹಾಗೂ ಪ್ರಕಾಶ್ ಬೆಳವಾಡಿ ಕೂಡ ಹಾಜರಿದ್ದರು. ಬೆಂಗಳೂರನ್ನು ಪ್ರತಿಯೊಬ್ಬರು ಪ್ರೀತಿಸುತ್ತಾರೆ ಏಕೆ ಎಂಬುದನ್ನು ಹಿರಿಯ ನಟರಿಬ್ಬರೂ ವರ್ಣಿಸಿದರು.
ಬೆಂಗಳೂರು ಸರ್ವರಿಗೂ ಆಶ್ರಯ ತಾಣ ಇಲ್ಲಿ ವೈವಿಧ್ಯಮಯ ಜೀವನ ಹೇಗಿರುತ್ತದೆ ಎಂಬುದಕ್ಕೆ ಬನ್ನಿರಿ ಬೆಂಗಳೂರಿಗೆ ಎಂಬ ಹಾಡು ಸಾಕ್ಷಿಯಾಗಿತ್ತು. ಅಶ್ವಿನ್ ಪಿ.ಕುಮಾರ್ ಚಿತ್ರದ ಸಂಗೀತ ನಿರ್ದೇಶಕ.