Snehapriya.com

June 10, 2025

ಗದಾಯುದ್ಧ ಟ್ರೈಲರ್ ಬಿಡುಗಡೆ ವಾಮಾಚಾರದ ವಿರುದ್ಧದ ಕಥೆ

Social Share :

ಭೂತ ಪ್ರೇತಗಳ ಹೆಸರಿನಲ್ಲಿ ನಡೆಯುವ ವಾಮಾಚಾರ ನಿಜಕ್ಕೂ ಅನಿಷ್ಟ ಮತ್ತು ಸಮಾಜಕ್ಕೆ ಮಾರಕ.
ಕೇವಲ ವೈಯಕ್ತಿಕ ದ್ವೇಷ, ಧನದಾಹ ದಿಂದ ಮನುಷ್ಯರನ್ನು ದಮನ ಮಾಡುವ ಸಲುವಾಗಿ ಈ ವಾಮಾಚಾರ ನಡೆಸಲಾಗುತ್ತದೆ ಎಂದು ಹೇಳುವವರಿದ್ದಾರೆ.

ಇದೇ ವಿಷಯ ಇಟ್ಟುಕೊಂಡು ನಿರ್ಮಾಣವಾಗಿರುವ ಕಥೆ ಗದಾಯುದ್ಧ..!

ಮರುಜನ್ಮದ ರೂಪ ತಳೆದ ಭೀಮ‌ ಗದಾಯುದ್ಧದ ಮೂಲಕ ಹೇಗೆ ಇಂಥಹ ವಾಮಾಚಾರಿಗಳನ್ನು ಸಂಹರಿಸುತ್ತಾನೆ ಎನ್ನುವುದೇ ಈ ಚಿತ್ರದ ಸಾರಾಂಶ. ಹಿಂದೆ ‘ಮೃಗಶಿರ’ ಎಂಬ ಚಿತ್ರ ನಿರ್ದೇಶಿಸಿದ್ದ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನೂ ನಿರ್ದೇಶಿಸಿರುವುದು ವಿಶೇಷ.

ಈಚೆಗೆ ನಡೆದ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿ.ಮನೋಹರ್, ಹೆಚ್. ವಾಸು ಮೊದಲಾದ ಗಣ್ಯರು ಭಾಗವಹಿಸಿದ್ದರು.

ಬೆಳಗಾವಿ ಮೂಲದ ನಿತಿನ್ ಶಿರಗುರ್ ಕರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಅವರ ಪುತ್ರ ಸುಮಿತ್ ಹಾಗೂ ಧನ್ಯ ಪಾಟೀಲ್ ಮುಖ್ಯ ಪಾತ್ರದಲ್ಲಿದ್ದಾರೆ. ಖಳ ನಟರಾಗಿ ಹೆಸರು ಮಾಡಿರುವ ಡ್ಯಾನಿ ಕುಟ್ಟಪ್ಪ ಇಲ್ಲಿ ವಾಮಾಚಾರಿಯಾಗಿ ಕಾಣಿಸಿಕೊಂಡಿದ್ದಾರೆ

ಪ್ರತಿದಿನ ಹಲವಾರು ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತವೆ. ಆದರೆ ಅದರಲ್ಲಿ ಸಾಕಷ್ಟು ಪ್ರಕರಣಗಳು ಸಹಜವಾಗಿರುವುದಿಲ್ಲ; ಬದಲಿಗೆ ಸಂಶಯಾಸ್ಪದವಾಗಿರುತ್ತದೆ. ಅಂತಹ ಕೊಲೆಗಳ ಹಿಂದೆ ವಾಮಾಚಾರದ ಪ್ರೇರಣೆಯಿರುತ್ತದೆ ಎಂಬುದು ಕೆಲವೊಮ್ಮೆ ನಿರೂಪಿಸಲ್ಪಟ್ಟಿದೆ. ಹಾಗಾಗಿ ಇದೇ ವಿಷಯವನ್ನು ವೈಜ್ಞಾನಿಕವಾಗಿ ನಿರೂಪಿಸಲು ಯತ್ನಿಸಲಾಗಿದೆ ಎಂದರು ನಿರ್ದೇಶಕ ಶ್ರೀವತ್ಸ.

ಹಿಂದಿನ ಪೌರಾಣಿಕ ಘಟನೆ ಹಾಗೂ ಈಗಿನ ಕಥೆಯನ್ನಿಟ್ಟುಕೊಂಡು ಗದಾಯುದ್ಧ ಮಾಡಲಾಗಿದೆ. ಮೊದಲು ಈ ಪಾತ್ರವನ್ನು ಚಿರಂಜೀವಿ ಸರ್ಜಾ ಅವರೇ ಮಾಡಬೇಕಿತ್ತು. ಅವರಿಗೆ ಪಾತ್ರ ಹೇಳಿ ಒಪ್ಪಿಸಿಯೂ ಆಗಿತ್ತು. ಆದರೆ ಅವರು ಆಂಜನೇಯ ಪಾತ್ರ ಮಾಡುವುದಾಗಿ ಹೇಳಿದ್ದರು.

ಅ ಪಾತ್ರವನ್ನು ಗ್ರಾಫಿಕ್ಸ್ ನಲ್ಲೇ ಮಾಡಲಾಗಿದೆ. ಚಿತ್ರ ಸೆನ್ಸಾರ್ ಹಂತದಲ್ಲಿದ್ದು ಇನ್ನೆರಡು ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ವಿವರ ಬಿಚ್ಚಿಟ್ಟರು ಶ್ರೀವತ್ಸ.

ಸಾಲೋಮನ್ ಸಂಗೀತ, ಸುರೇಶ್ ಬಾಬು ಛಾಯಾಗ್ರಹಣವಿದೆ. ಐಶ್ವರ್ಯ ಸಿಂದೋಗಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‌ ಸ್ಪರ್ಶ ರೇಖಾ, ಶರತ್ ಲೋಹಿತಾಶ್ವ, ಯತಿರಾಜ್ ಪಾತ್ರ ವರ್ಗದಲ್ಲಿದ್ದಾರೆ.

ಅಗಲಿರುವ ನಟ ಸತ್ಯಜಿತ್, ಶರಪಂಜರ ಶಿವರಾಮ್ ಅವರ ಅಭಿನಯದ ಕೊನೇ ಚಿತ್ರವೂ ಇದಾಗಿದೆ ಎಂಬ ವಿವರವೂ ಬಂತು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *