ಈಗ ಯಾವುದೋ ಕಾರಣಕ್ಕೆ ಚಿತ್ರಮಂದಿರಗಳಲ್ಲಿ ಓಡದೇ ಹೋದ ಚಿತ್ರಗಳ ಪಾಲಿಗೆ ಆಪತ್ಭಾಂದವನಾಗಿ ಸೇರ್ಪಡೆಗೊಂಡಿರುವುದು ‘ಸಿನಿಬಜಾರ್’ ಓಟಿಟಿ ವೇದಿಕೆ.
ಈಗಾಗಲೇ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ಒಡಲಲ್ಲಿ ತುಂಬಿಸಿಕೊಂಡಿರುವ ಸಿನಿಬಜಾರ್ ಇನ್ನು ಸಾಕಷ್ಟು ಚಿತ್ರಗಳಿಗೆ ವೇದಿಕೆ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾರ್ಗದರ್ಶನದಲ್ಲಿ ಭಾಸ್ಕರ್ ವೆಂಕಟೇಶ್ ಹಾಗೂ ಇತರ ಗೆಳೆಯರು ಈ ಓಟಿಟಿ ಆಪ್ ಸಾಕಾರಗೊಳಿಸಿದ್ದು, ಸ್ಕ್ಯಾನ್ ಕೋಡ್ ಮೂಲಕ ಚಿತ್ರಗಳನ್ನು ಆರಿಸಿ ನೋಡಬಹುದು. ಅದಕ್ಕೆ ಚಿಕ್ಕ ಪ್ರಮಾಣದ ಶುಲ್ಕ ವಿಧಿಸಲಾಗುತ್ತದೆ. ಆದರೆ ಯಾವುದೇ ಚಂದಾದಾರರಿಕೆ (ಸಬ್ ಸ್ಕ್ರಿಫ್ಷನ್) ಇರುವುದಿಲ್ಲ ಎಂದರು ಉಮೇಶ್ ಬಣಕಾರ್.
ಚಿತ್ರಗಳನ್ನು ಆಸಕ್ತ ನಿರ್ಮಾಪಕರು ಈ ಆಪ್ ಗೆ ನೀಡಬಹುದು. ಪ್ರೇಕ್ಷಕರ ವೀಕ್ಷಣೆಯ ಆಧಾರದಲ್ಲಿ ಅವರಿಗೆ ಹಣ ಸಿಗುತ್ತದೆ. ಇದು 177 ದೇಶಗಳಲ್ಲಿ ಅಂದರೆ ವಿಶ್ವ ವ್ಯಾಪಿ ಚಾಲ್ತಿಯಲ್ಲಿ ಇರುವುದರಿಂದ ಖಂಡಿತವಾಗಿ ಉತ್ತಮ ಮಟ್ಟದ ಹಣ ದೊರೆಯ ಬಲ್ಲದು ಎಂಬುದು ನಮ್ಮ ನಂಬಿಕೆಯಾಗಿದೆ ಎಂದರು.
ಭಾಸ್ಕರ್ ವೆಂಕಟೇಶ್ ಅವರ ಶ್ರಮದ ಫಲವಾಗಿ ರೂಪುಗೊಂಡಿರುವ ಈ ಸಿನಿಬಜಾರ್ ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರುವುದು ವಿಶೇಷ ಹಾಗಾಗಿ ಇದು ಜನಪ್ರಿಯತೆ ಯತ್ತ ಹೆಜ್ಜೆ ಹಾಕಿದೆ. ಏಕೆಂದರೆ ಇಲ್ಲಿಯವರೆಗೆ ವರನಟ ಡಾ.ರಾಜ್ ಕುಮಾರ್ ಅವರ ‘ಭಾಗ್ಯವಂತ’ ಚಿತ್ರದಿಂದ ಹಿಡಿದು ಅನೇಕ ಚಿತ್ರಗಳು ನೋಡಲು ಲಭ್ಯವಿವೆ ಎಂದರು ಉಮೇಶ್ ಬಣಕಾರ್.
ಭಾಗ್ಯವಂತರು ಚಿತ್ರದ ನೆಗೆಟಿವ್ ಒಡೆತನ ಹೊಂದಿರುವ ಮುನಿರಾಜು,
ಗುರ್ಬಿ ಚಿತ್ರದ ನಿರ್ಮಾಪಕ ಕೃಷ್ಣಪ್ಪ ಅಬ್ಬೂರು, ಕಾಕ್ಟೈಲ್ ಚಿತ್ರದ ನಿರ್ಮಾಪಕ ನಿವೃತ್ತ ಅಧಿಕಾರಿ ಶಿವಪ್ಪ, ಪುತ್ರ ವೀರೇನ್ ಕೇಶವ್, ಪಂಪ ಚಿತ್ರದ ನಿರ್ಮಾಪಕ ಲಕ್ಷ್ಮಿಕಾಂತ್, ವೃಕ್ಷಂ ನಿರ್ಮಾಪಕ ಆದಿತ್ಯ ಕುಣಿಗಲ್, ಬಾಯೋ ಕೊಂಕಣಿ ಚಿತ್ರದ ನಿರ್ಮಾಪಕ ನಾಗೇಂದ್ರ ಕಾಮತ್ ಈ ಸಂದರ್ಭದಲ್ಲಿ ಈ ಓಟಿಟಿ ವೇದಿಕೆಯಿಂದ ಆಗಿರುವ ಪ್ರಯೋಜನ ಕುರಿತು ಮಾತನಾಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಕೋರಿದರು. ಸಿನಿಬಜಾರ್ ಕಾರ್ಯ ನಿರ್ವಾಹಕ ಅಧಿಕಾರಿ ಭಾಸ್ಕರ್ ವೆಂಕಟೇಶ್ ಆಪ್ ತಾಂತ್ರಿಕ ಕುಶಲಗಳ ಬಗ್ಗೆ ವಿವರ ನೀಡಿದರು.