Snehapriya.com

June 8, 2025

ಪ್ರಜಾರಾಜ್ಯದಲ್ಲಿ ಆರ್ಥಿಕ ಸ್ವಾತಂತ್ರ್ಯದ ಹಕ್ಕು ಪ್ರತಿಪಾದನೆ..

Social Share :

ಸಾಕಷ್ಟು ಚುನಾವಣೆಗಳಿವೆ.. ಒಮ್ಮೆ ಆರಿಸಿ ಕಳಿಸಿದವರು ಅಥವಾ ಹೊಸಬರು ಖಂಡಿತಾ ಮತ ಕೇಳಲು ಬರುತ್ತಾರೆ..
ಆದರೆ ಪ್ರಜ್ಞೆಯಿಂದ ಮತದಾನ ಮಾಡಿ, ನಿಮ್ಮನ್ನು ನೀವು ದುಡ್ಡಿಗೆ ಮಾರಿಕೊಳ್ಳಬೇಡಿ..

ಈ ರೀತಿಯ ಸಂದೇಶ ಸಾರುವ ಚಿತ್ರವೊಂದು ಬಿಡುಗಡೆಗೆ ಸಜ್ಜುಗೊಂಡಿದೆ. ಹೆಸರು ‘ಪ್ರಜಾ ರಾಜ್ಯ’. ಡೈನಾಮಿಕ್ ಸ್ಟಾರ್ ದೇವರಾಜ್, ಸಂಪತ್ ಮೈತ್ರಿ ಹಾಗೂ ಇತರರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ..

ಅದು ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ. ಡೈನಾಮಿಕ್ ಸ್ಟಾರ್
ದೇವರಾಜ್ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ವ್ಯವಸ್ಥೆಯ ಲೋಪದೋಷಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ನನ್ನದು
ರಾಜಕೀಯ ಮುಖಂಡನ ಪಾತ್ರ. ಬರಲಿರುವ ಚುನಾವಣೆಗೆ ಉತ್ತಮ ಸಂದೇಶವಿದೆ ಎಂದರು ನಟ ದೇವರಾಜ್.

ಡಾ.ವರದರಾಜು ಡಿ.ಎನ್. ಚಿತ್ರದ ನಿರ್ಮಾಪಕ. ಈ ಚಿತ್ರವನ್ನು ಯಾವುದೇ ಪಕ್ಷ ಓಲೈಸಲು ಮಾಡಿಲ್ಲ; ವ್ಯವಸ್ಥೆ ಹದಗೆಟ್ಟಿದೆ. ಯಾರದು ತಪ್ಪು ಎಂಬ ವಿಶ್ಲೇಷಣೆ ಮಾಡಲಾಗಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳ ಮೇಲಾದರೂ ಆರ್ಥಿಕ
ಸ್ವಾತಂತ್ರ್ಯ ಇನ್ನೂ ಬಂದಿಲ್ಲ. ಆ ಬಗ್ಗೆ ಯಾರೂ ಯೋಚನೆಯನ್ನೂ ಮಾಡುತ್ತಿಲ್ಲ; ನಮ್ಮ ಅಪ್ಪನ ಪೀಳಿಗೆ, ನನ್ನ ಪೀಳಿಗೆ ಕೊನೆಗೆ ನನ್ನ ಮಕ್ಕಳ ಪೀಳಿಗೆ ಬಂದರೂ ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಚಿತ್ರದ ಮೂಲಕ ಒಂದು ಉತ್ತಮ ಸಂದೇಶ ರವಾನಿಸಲಾಗುತ್ತಿದೆ ಎಂದರು ನಿರ್ಮಾಪಕರು.

ಮುಂದಿನ ಪೀಳಿಗೆಗೂ ಅದರ ಅರಿವು ಬರಲ್ಲ. ಏಕೆಂದರೆ ಪ್ರಜ್ಞೆ ಮೂಡಿಸುವವರು ಯಾರು. ಸಂವಿಧಾನದ ನಾಲ್ಕನೆ ಅಂಗ ಎಂದು ಹೇಳಲಾಗುವ ಮಾಧ್ಯಗಳು ಹೊಣೆ ಅರಿತು ಕೆಲಸ ಮಾಡಬೇಕಾಗಿದೆ ಎಂದರು ಡಾ.ವರದರಾಜು.

ಚಿತ್ರವು ಉತ್ತಮವಾಗಿ ಮೂಡಿ ಬಂದಿದೆ ಎಂಬುದು ಖುಷಿ, ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ನಾನು ರೈತನ ಪಾತ್ರ ನಿರ್ವಹಿಸಿರುವೆ ಎಂದರು ನಿರ್ದೇಶಕ ವಿಜಯ್ ಭಾರ್ಗವ್.

ನಟ ಸಂಪತ್ ಮೈತ್ರಿ ಕೂಡ ರಾಜಕೀಯ ಮುಖಂಡನ ಪಾತ್ರ ನಿರ್ವಹಿಸಿದ್ದು, ಅದು ಯಾರೆಂಬುದನ್ನು ಚಿತ್ರದಲ್ಲೇ ನೋಡಿ ಎಂದರು.

ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ನಾದಬ್ರಹ್ಮ ಹಂಸಲೇಖ ಸೇರಿದಂತೆ ಐವರು ಸಂಗೀತ ನಿರ್ದೇಶಕರ ಬಳಿ ಕಲಿತ್ತಿದ್ದು, ಅವರ ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳು ಬಂದವು..

ಮದಗಜ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್, ಮಧುಗಿರಿ ಪ್ರಕಾಶ್, ಒಕ್ಕಲಿಗರ ಸಂಘದ ನಿರ್ದೇಶಕ ಡಿ.ಕೆ.ರಮೇಶ್, ಮ್ಯಾನೇಜರ್ ರವಿಶಂಕರ್, ನಟ ಡಾ.ಚಿಕ್ಕ ಹೆಜ್ಜಾಜಿ ಮಾದೇವ್, ಎಸ್ಕಾರ್ಟ್ ಶ್ರೀನಿವಾಸ್, ಅಮೂಲ್ಯ, ಕುಮಾರಸ್ವಾಮಿ ಹಾಗೂ ಗೀತರಚನೆ ಮಾಡಿರುವ ಸಂದೀಪ್ ಹಾಜರಿದ್ದರು.

ಅಂದ ಹಾಗೆ ಯೋಗರಾಜ್ ಭಟ್ ಬರೆದಿರುವ ಹಾಗೂ ಉಪೇಂದ್ರ ಧ್ವನಿ ಇರುವ ಹಾಡಿನಲ್ಲಿ ವ್ಯವಸ್ಥೆಯ ಅಣಕ ಮತ್ತು ಪ್ರಶ್ನೆ ಎರಡೂ ಇದ್ದವು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *