Snehapriya.com

June 8, 2025

ಮಧುರಕಾವ್ಯ ಈ ವಾರ ಬಿಡುಗಡೆ

Social Share :


ಆಯುರ್ವೇದ ಚಿಕಿತ್ಸಾ ಪದ್ಧತಿಯ ಅರಿವು ಮೂಡಿಸುವುದರ ಜೊತೆಗೆ ಔಷಧ ವ್ಯಾಪಾರದ ಮೋಸವನ್ನು ಬಯಲಿಳೆಯುವ ಕಥಾ ಹಂದರ ಹೊಂದಿರುವ ‘ಮಧುರ ಕಾವ್ಯ’ ಈ ವಾರ ಅಂದರೆ ಜುಲೈ 21ರಂದು ಬಿಡುಗಡೆ ಕಾಣುತ್ತಿದೆ.

ಆಯುರ್ವೇದ ವೈದ್ಯರಾಗಿರುವ ಮಧುಸೂದನ್ ಕ್ಯಾತನಹಳ್ಳಿ ಈ ಚಿತ್ರವನ್ನು ನಿರ್ಮಿಸಿ, ನಟಿಸಿ, ನಿರ್ದೇಶಿಸಿದ್ದಾರೆ.

ಆಯುರ್ವೇದ ಚಿಕಿತ್ಸಾ ಪದ್ದತಿಗೆ ಅದರದೇ ಆದ ಮಹತ್ವವಿದೆ. ಅದರೆ ಜನರಿಗೆ ಅದರ ಹಿರಿಮೆಯ ಅರಿವಿಲ್ಲ. ಹಾಗಾಗಿ ಆಯುರ್ವೇದದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಃ ಚಿತ್ರವೊಂದನ್ನು ಮಾಡಿದ್ದಾಗಿ ಮಧುಸೂದನ್ ಹೇಳಿಕೊಂಡಿದ್ದಾರೆ.

ಈ ಹಿಂದೆ ಕಿರು ಚಿತ್ರಗಳನ್ನು ಮಾಡಿದ್ದ ಅನುಭವದ ಆಧಾರದಲ್ಲಿ ಮಧುಸೂದನ್ ಕ್ಯಾತನಹಳ್ಳಿ ಈ ಚಿತ್ರವನ್ನು ಮಾಡಿದ್ದು, ಇದರಲ್ಲಿ ಆಯುರ್ವೇದ ವೈದ್ಯ ಮತ್ತು ಅಲೋಪಥಿ ವೈದ್ಯ ಪದ್ದತಿಯ ನಡುವೆ ನಡೆಯುವ ಸಂಘರ್ಷದ ಕಥಾವಸ್ತು ಇದೆ.

‘ಮಧುರಕಾವ್ಯ’ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಯರಿಲ್ಲ; ಆದರೆ ತಾಯಿಯ ಪಾತ್ರದಲ್ಲಿ ರಂಗಭೂಮಿ ನಟಿ ಯಶೋಧ ಕಾಣಿಸಿ ಕೊಂಡಿದ್ದಾರೆ. ರಾಜಕುಮಾರ್ ನಾಯಕ್ ಖಳನ ಪಾತ್ರದಲ್ಲಿ ನಟಿಸಿದ್ದಾರೆ.

ಸಮಾಜಕ್ಕೆ ಉತ್ತಮ ಸಂದೇಶ ಮಾಡುವ ಆಶಯದಲ್ಲಿ ಈ ಸಿನಿಮಾ ಮಾಡಲಾಗಿದೆ. ಬಹಳಷ್ಟು ರೋಗಗಳಿಗೆ ಮನೆಯ ಹಿತ್ತಲಿನಲ್ಲೇ ಔಷಧಗಳು ದೊರೆಯುತ್ತವೆ. ಪಾರಂಪರಿಕವಾಗಿ ನಾಟಿ ವೈದ್ಯ ಮಾಡಿಕೊಂಡು ಬಂದವರು ಜನರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸಿದ್ದಾರೆ.

ಅನಾದಿಕಾಲದಿಂದ ಜನರ ಆರೋಗ್ಯವನ್ನು ಸಂರಕ್ಷಿಸುತ್ತ ಬಂದಿರುವ ಆಯುರ್ವೇದವನ್ನು ಉಳಿಸಬೇಕು ಎನ್ನುವುದೇ ಇಲ್ಲಿನ ಮೂಲ ಉದ್ದೇಶ.

ಮೆಡಿಕಲ್ ವಿಷಯದಲ್ಲಿ ಲಾಭಿ ನಡೆಸುವವರ ವಿರುದ್ದ ಹೋರಾಟ ನಡೆಸಿ ನಾಟಿ ವೈದ್ಯ ಪದ್ದತಿಯನ್ನು ರಕ್ಷಿಸುವಂಥ ಪಾತ್ರದಲ್ಲಿ ಮಧುಸೂಧನ್ ಕಾಣಿಸಿಕೊಂಡಿದ್ದಾರೆ.

ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ನಾಲ್ಕು ಪುಟ್ಟ ಹಾಡುಗಳಿವೆ. ದೇಸೀ ಶೈಲಿಯ ವಾದ್ಯಗಳನ್ನೇ ಬಳಸಿ ಹಾಡುಗಳನ್ನು ಮಾಡಲಾಗಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *