ಮುಂಗಾರು ಮಳೆಯ ತಂಡ ಹೊಸ ಪರೀಕ್ಷೆಯ ಫಲಿತಾಂಶ ಎದುರು ನೋಡುತ್ತಿದೆ. ಪರೀಕ್ಷೆಯ ಹಾಡೂ ಗೆದ್ದಿದೆ.. ರಂಜನೆ ಮನರಂಜನೆಯ ಹೂರಣ ಸವಿಯಲು ಕೇವಲ ಎರಡು ದಿನಗಳಷ್ಟೇ ಬಾಕಿ ಉಳಿದಿದೆ..
ಅದು ಗಾಳಿಪಟ2..!
ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ರಮೇಶ್ ರೆಡ್ಡಿ ಅವರ ಪರಿಶ್ರಮದ ಫಲವಾಗಿಯೇ ಈ ಚಿತ್ರ ಮೂಡಿ ಬಂದಿದೆ ಎಂದರೆ ತಪ್ಪಲ್ಲ; ಏಕೆಂದರೆ ಕೊರೊನಾ ಮತ್ತು ಚಳಿ ದೇಶದ ಪರಿಸರ ಸ್ನೇಹವಲ್ಲದ ಸಂದರ್ಭದಲ್ಲಿ ಸಾಹಸ ಮೆರೆದ ಕಾರಣ ಈ ಚಿತ್ರ ತಯಾರಾಗಿದೆ..
ಗಾಳಿಪಟ ಒಂದರ ಸೀಕ್ವೆಲ್ ಮುಂದುವರೆದರೂ ಕೆಲ ಪಾತ್ರಗಳು ಬದಲಾಗಿವೆ. ಈ ಅನಿವಾರ್ಯತೆ ಚಿತ್ರಕ್ಕೆ ವರವಾಗಿದೆ. ಆದ್ದರಿಂದ ನಿರ್ದೇಶಕ ಪವನ್ ಕುಮಾರ್ ಪಾತ್ರದ ಬಗ್ಗೆ ತೀವ್ರ ಕುತೂಹಲ ಏರ್ಪಟ್ಟಿದೆ.
ಹೇಳಿ ಕೇಳಿ ಇದು ಭಟ್ಟರ ಸಿನಿಮಾ ಅದರಲ್ಲೂ ಗಣೇಶ್ ಮತ್ತು ಭಟ್ಟರ ಸಿನಿಮಾ ಏನಾದರೂ ಕಮಾಲ್ ಮಾಡುತ್ತಾರೆ ಎಂಬುದು ನಂಬಿಕೆ. ಆದರೆ ಇಬ್ಬರೂ ಹೆಚ್ಚು ಕಮಾಲ್ ಮಾಡಿರುವುದು ಸ್ಪಷ್ಟವಾಗಿರುವುದರಿಂದ ಅದರ ಕುತೂಹಲ ಹೆಚ್ಚಾಗಿದೆ.
ಗೋಲ್ಡನ್ ಸ್ಟಾರ್ ಹೆಚ್ಚು ಯುವಕರಾಗಿ ಮುಗ್ಧತೆ ಮೈದಳೆದಂತೆ ನಟಿಸಿರುವುದು ನೋಡಲು ಚೆನ್ನ ಎಂಬುದು ಚಿತ್ರತಂಡದ ಮಾತು. ಜೊತೆ ತರಲೆ ವಿಷಯಗಳು ನಗಿಸುತ್ತವೆ. ದೂದ್ ಪೇಡಾ ದಿಗಂತ್ ಜೊತೆಗೆ ಸುಂದರ ತಾರೆಯರು ಇದ್ದಾರೆ.
ಮುಖ್ಯವಾಗಿ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಚಿತ್ರದ ಆಶಯಗಳ ಬಗ್ಗೆ ಹೆಚ್ಚು ಖುಷಿ ಇದೆ. ಒಂದು ಹಾಡಿಗೆ ದೊಡ್ಡ ಇಸ್ತ್ರಿ ಪೆಟ್ಟಿಗೆ ಮತ್ತು ಗಡಿಕೆಯ ಬೃಹತ್ ಕಲಾಕೃತಿ ರೂಪುಗೊಳ್ಳಲು ಲಕ್ಷಾಂತರ ಖರ್ಚು ಮಾಡಿದ್ದು ಅಲ್ಲದೆ. ಆ ವಸ್ತುಗಳನ್ನು ಮನೆಯ ಬಳಿ ರಕ್ಷಿಸಿ ಇಟ್ಟು ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ. ಇಂತಹ ಸಿನಿಮಾ ಪ್ರೇಮ ಇರುವ ನಿರ್ಮಾಪಕ ಮತ್ತೊಬ್ಬರಿದ್ದಾರೆಯೇ ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.