ರೈತ ದೇಶದ ಬೆನ್ನೆಲುಬು ಎಂಬುದು ಹಳೆಯ ಮಾತು ಮತ್ತು ಅದು ಕಟು ವಾಸ್ತವ. ಆದರೆ ರೈತ ಎಂದಿಗೂ ಅಮಾಯಕ. ಹಾಗಾಗಿ ಆತನ ಮೇಲೆ ನಡೆಯುವ ದೌರ್ಜನ್ಯ ನಿರಂತರ..
ರೈತನ ಮೇಲೆ ನಡೆಯುವ ದೌರ್ಜನ್ಯ ಮತ್ತು ಅದರ ವಿರುದ್ಧ ಸಿಡಿದೇಳುವ ಯುವಕನೊಬ್ಬನ ಕಥೆ ಇರುವ ಚಿತ್ರವೇ ‘ಕ್ಷೇತ್ರಪತಿ’. ಇದೇ ವಾರ ಅಂದರೆ ಆಗಸ್ಟ್ 18ರಂದು ಚಿತ್ರ ಕಾಣುತ್ತಿದೆ.
ಈ ಹಿನ್ನೆಲೆಯಲ್ಲಿ ನಡೆದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿತು ಮತ್ತು ಚಿತ್ರತಂಡ ಅದರಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿತ್ತು.
A Right Fight For The Right ಎಂಬ ಘೋಷಣೆ ಹೊಂದಿರುವ ಚಿತ್ರದಲ್ಲಿ ರೈತನ ಕಿಚ್ಚು ಮತ್ತು ಕೆಚ್ಚೆದೆ ವ್ಯಕ್ತವಾಗುವುದನ್ನು ಟ್ರೈಲರ್ ನಲ್ಲಿ ಒಳಗೊಳಿಸಲಾಗಿದೆ. ಉತ್ತರ ಕರ್ನಾಟಕ ಭಾಷೆಯ ಅಬ್ಬರದ ಜೊತೆಗೆ ಮಣ್ಣಿನ ಸೊಗಡು ಎದ್ದು ಕಾಣುತ್ತದೆ.
ಗುಲ್ಟು ಆದ ಮೇಲೆ ಕಥೆ ಮತ್ತು
ಅವಕಾಶಗಳಿಗೆ ಹುಡುಕಾಟ ನಡೆಸುವಾಗ ಸಿಕ್ಕಿದ ಚಿತ್ರವಿದು. ಹೊಸದಾಗಿ ನಿರ್ದೇಶನ ಮಾಡುವ ಹಂಬಲದಲ್ಲಿದ್ದ ಶ್ರೀಕಾಂತ್ ಕಟಗಿ ಅವರ ಕಥೆ ಇಷ್ಟವಾಗಿ ಬಳಿಕ ನಿರ್ಮಾಪಕರನ್ನು ಒಪ್ಪಿಸುವ ಸಲುವಾಗಿ ಸಣ್ಣ ಚಿತ್ರವೊಂದನ್ನು ಮಾಡಬೇಕಾದ ಅನಿವಾರ್ಯತೆಯನ್ನು ವಿವರಿಸಿದರು ನವೀನ್ ಶಂಕರ್.
ಮೂಲವಾಗಿ ಉತರ ಕರ್ನಾಟಕ ಭಾಗದ ರೈತಾಪಿ ಕುಟುಂಬದ ಹುಡುಗನಾದ ನನಗೆ ಅದೇ ಬಗೆಯ ಪಾತ್ರ ಸಿಕ್ಕಿದೆ. ಕೆಲವು ಸಮಯ ಪತ್ರಕರ್ತನಾಗಿ ಕೆಲಸ ಮಾಡಿದ ಅನುಭವದಲ್ಲಿ ಬೆಳೆದ ಬಗೆ ವಿಸ್ಮಯವೂ ಆಗಿದೆ ಎಂದರು.
ಕೆ.ಜಿ.ಎಫ್ ಹಾಗೂ ಹೊಂದಿಸಿ ಬರೆಯಿರಿ ಖ್ಯಾತಿಯ ಅರ್ಚನಾ ಜೋಯಿಸ್ ನವೀನ್ ಶಂಕರ್ ಎದುರು ನಟಿಸಿದ್ದಾರೆ. ರಾಹುಲ್ ಐನಾಪುರ, ಹರ್ಷ ಅರ್ಜುನ್ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿಗಳು ಬಂದವು.
ನಾನು ಹೊಸಬ ಆದರೆ ಇಲ್ಲಿನ ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಕಲಿತವರು ಮತ್ತು ನುರಿತರು ಹಾಗಾಗಿ ಈ ಸಿನಿಮಾ ಮಾಡುವ ಹಾದಿ ಕಷ್ಟವಾಗಲಿಲ್ಲ ಎಂದರು ನಿರ್ದೇಶಕ
ಶ್ರೀಕಾಂತ್ ಕಟಗಿ.
ಕರೋನ ಬಳಿಕ ಶೂಟಿಂಗ್ ಆರಂಭವಾಯಿತು. ಇದು ತಂದೆ ಮಗನ ಬಾಂಧವ್ಯದ ಜೊತೆಗೆ
ಹೋರಾಟದ ಹಾದಿ, ರೈತರ ಸಮಸ್ಯೆ
ಒಳಗೊಂಡಿರುವ ಸಿನಿಮಾ ಎಂದರು.
ಛಾಯಾಗ್ರಾಹಕ ಶಿವ ಸಾಗರ್, ಕಾರ್ಯನಿರ್ವಾಹಕ ನಿರ್ಮಾಪಕ ಶ್ರೀನಿವಾಸ್, ಸಹ ನಿರ್ಮಾಪಕರಾದ
ವಿವೇಕ್ ಹಾಗೂ ದರ್ಶನ್ ಜಯಣ್ಣ ಮಾತನಾಡಿದರು.