Snehapriya.com

June 8, 2025

ಈ ವಾರ ಚಿತ್ರಮಂದಿರಗಳಲ್ಲಿ ಮಂಜು ಕವಿ ಟೆಂಪರ್..

Social Share :

ಕೋಪವನ್ನು ಚಿಕ್ಕ ವಯಸ್ಸಿನಲ್ಲಿ ನಿಯಂತ್ರಿಸದಿದ್ದರೆ ಮುಂದೆ ಅದು ಬದುಕಿಗೇ ಮುಳ್ಳಾಗುತ್ತದೆ ಎಂಬ ಸಂದೇಶವಿರುವ ಚಿತ್ರ ‘ಟೆಂಪರ್’ ಈ ವಾರ ಬಿಡುಗಡೆ ಕಾಣುತ್ತಿದೆ.

ಸಂಗೀತ ನಿರ್ದೇಶಕ ಹಾಗೂ ಗೀತರಚನೆಕಾರ ಆಗಿ ಗುರುತಿಸಿಕೊಂಡಿರುವ ಮಂಜುಕವಿ ನಿರ್ದೇಶನದ ಪ್ರಥಮ ಚಿತ್ರವಿದು.

ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಸಂಪೂರ್ಣ ವಿವರಗಳನ್ನು ನೀಡಿತು. ಮಂಜುಕವಿ ಜೊತೆಗೆ ಮುಖ್ಯ ಪಾತ್ರದಲ್ಲಿರುವ ಆರ್ಯನ್ ಸೂರ್ಯ, ಖಾಸಿಮಾ ಹಾಗೂ ಖಳ ನಟನ ಪಾತ್ರ ನಿರ್ವಹಿಸಿರುವ ನಟ, ನಿರ್ದೇಶಕ ಯತಿರಾಜ್ ಹಾಜರಿದ್ದರು.

ಕೋಪ ಮನುಷ್ಯನ ಸಹಜ ಗುಣ..
ಇದು ಅತಿಯಾದರೆ ‘ಅಮೃತವೂ ವಿಷದಂತೆ..’ ಹಾಗಾಗಿ ಅದನ್ನು ನಿಯಂತ್ರಣದಲ್ಲಿ ಇಡುವುದು ಬಹಳವೇ ಮುಖ್ಯ; ಚಿಕ್ಕ ವಯಸ್ಸಿನಿಂದ ಅದನ್ನು ನಿಯಂತ್ರಿಸುವ ಅಗತ್ಯವಿದೆ ಎಂಬುದನ್ನು ಚಿತ್ರವು ಪ್ರತಿ ಪಾದಿಸುತ್ತದೆ..

ಅದೇ ಟೆಂಪರ್..!

ಚಿತ್ರದಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ತಬಲ ನಾಣಿ, ಮಿತ್ರಾ, ಟೆನ್ನಿಸ್ ಕೃಷ್ಣ ಮೊದಲಾದವರು ಇದರಲ್ಲಿ ಅಭಿನಯಿಸಿದ್ದಾರೆ.

ಚಿತ್ರರಂಗಕ್ಕೆ ಬಂದು ಬಹಳ ವರ್ಷಗಳಾದವು. ಚಿತ್ರ ನಿರ್ದೇಶನ ಮಾಡಬೇಕು ಹಂಬಲ ಬಹಳ ಹಳೇಯದು.. ಟೆಂಪರ್ ಚಿತ್ರದ ಮೂಲಕ ಆಸೆ ಈಡೇರಿದೆ. ಆದರೆ ಮನೆ ಮಂದಿಯೆಲ್ಲಾ ಕುಳಿತು ನನ್ನ ಈ ಚಿತ್ರ ನೋಡಿದಾಗ ಸಾರ್ಥಕ ಭಾವ ಮೂಡಬಹುದೇನೋ ಎಂದರು ನಿರ್ದೇಶಕ ಮಂಜುಕವಿ.

ಚಿತ್ರದಲ್ಲಿ ನನ್ನ ಟೆಂಪರ್ ಏನೆಂಬುದು ವ್ಯಕ್ತವಾಗಿದೆ. ಮೊದಲು ಅಭಿನಯ ಮತ್ತು ಫೈಟ್ ಕಷ್ಟವೆನಿಸಿತ್ತು. ಆದರೆ ಟ್ರೈಲರ್ ನೋಡಿದ ತಕ್ಷಣ ಆ ಕಷ್ಟವೆಲ್ಲಾ ಮರೆತು ಹೋಯಿತು ಎಂಬುದು ಆರ್ಯನ್ ಸೂರ್ಯ ನೀಡಿದ ವಿವರ. ಖಾಸಿಮಾಗೆ ಇದು ಪೂರ್ಣ ಪ್ರಮಾಣ ಅಭಿನಯ ನೀಡಲು ಸಿಕ್ಕಿರುವ ಪಾತ್ರ.

ನನಗೆ ಹುಡುಗಿಯ ಚಿಕ್ಕಪ್ಪನ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಅದರಲ್ಲಿ ನನ್ನ ಟೆಂಪರ್ ಸ್ವಲ್ಪ ಹೆಚ್ಚಾಗಿದೆ ಎಂದರು ಯತಿರಾಜ್

ಪತ್ರಕರ್ತ ಧನು ಕೂಡ ಚಿತ್ರದಲ್ಲಿ ಎರಡನೇ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಅಂದ ಹಾಗೆ ವಿ.ವಿನೋದ್ ಕುಮಾರ್ ಹಾಗೂ ಬಿ.ಮೋಹನ್ ಬಾಬು ಈ ಚಿತ್ರದ ನಿರ್ಮಾಪಕರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *