Snehapriya.com

April 13, 2025

ಮಲೆ ಮಾದೇಶ್ವರ ಕುರಿತು ಮುದ್ದುಗಾರ ಮಾದಪ್ಪ ಹಾಡು

Social Share :

ವರನಟ ಡಾ.ರಾಜ್ ಕುಮಾರ್ ಅವರು ಹಾಡಿದ್ದ ಪ್ರಸಿದ್ಧ ‘ಚೆಲ್ಲಾಟಗಾರ ಮಾದಪ್ಪ’ ಧ್ವನಿ ಸುರುಳಿಗೆ ಸಾಹಿತ್ಯ, ಸಂಗೀತ ನೀಡಿದ್ದ ಕಲಾಶ್ರೀ ಡಾ.ಜಯಶ್ರೀ ಅರವಿಂದ್ ಅವರ ಹೊಸ ದೃಶ್ಯ ಗೀತೆ ಬಿಡುಗಡೆಗೊಂಡಿದೆ.

‘ಮುದ್ದುಗಾರ ಮಾದಪ್ಪ’ ಹೆಸರಿನ ಜಾನಪದ ಶೈಲಿಯ ಸುಪ್ರಭಾತ ದೃಶ್ಯ ಗೀತೆಯನ್ನು ಶ್ರೀಮಲೆ ಆಡಿಯೋ ವಿಡಿಯೋ ಸಂಸ್ಥೆ ಹೊರತಂದಿದೆ.

ಈಚೆಗೆ ಈ ದೃಶ್ಯ ಗೀತೆಯನ್ನು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಬಿಡುಗಡೆ ಮಾಡಿದರು.

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ನಡೆದ ಸಮಾರಂಭದ ಈ ಶುಭ ಸಂಧರ್ಭದಲ್ಲಿ ಸಂಗೀತ ನಿರ್ದೇಶಕಿ ಕಲಾಶ್ರೀ ಡಾ.ಜಯಶ್ರೀ ಅರವಿಂದ್, ಅರವಿಂದ್ ಕಿಗ್ಗಾಲ್, ಶ್ರೀ ಮಲೆ ಆಡಿಯೋ ವಿಡಿಯೋ ಸಂಸ್ಥೆಯ ಬಿ.ಅರುಣ್ ಕುಮಾರ್ ಸಿಂಗ್, ಎಂ.ಪ್ರಕಾಶ್, ಬಿ.ಹೇಮಾವತಿ ಮತ್ತು ತಲಕಾಡು ದೇವಸ್ಥಾನದ ಅಧ್ಯಕ್ಷ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಈ ಸೃಶ್ರಾವ್ಯವಾದ ಗೀತೆಯನ್ನು ಕನ್ನಡದ ಪ್ರಸಿದ್ಧ ಗಾಯಕರಾದ ಅಜಯ್ ವಾರಿಯರ್ ಮತ್ತು ಶ್ರೀರಕ್ಷಾ ಪ್ರಿಯರಂ ಅವರು ಹಾಡಿದ್ದಾರೆ, ಛಾಯಾಗ್ರಹಣ ಮತ್ತು ಸಂಕಲನ ಹೃಶಾಂಕ್ ಸಿಂಗ್ ಅವರದಾಗಿದೆ.

ಈ ಸುಮಧುರ ಗೀತೆಯನ್ನು ಕೇಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.                                                                                                                                                    https://youtu.be/cBgnb_bPxPY

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *