ಇದು ಯುವ ಜನರ ಧ್ವನಿಯಾಗಲಿದೆ; ಏಕೆಂದರೆ ಯುವ ಸಮೂಹ ಅತ್ಯಂತ ಉತ್ಸಾಹದಲ್ಲಿ ಮಿಂದೆದ್ದು ಮಾಡಿರುವ ಸಿನಿಮಾ..
ಅದೇ ರಕ್ತಾಕ್ಷ..!
ರೂಪದರ್ಶಿಯಾಗಿ ಹೆಸರು ಮಾಡಿರುವ ರೋಹಿತ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ವಿಶೇಷತೆಗಳು ಬಹಳಷ್ಟಿವೆ. ಅದರಲ್ಲಿ ಈಗ ಉತ್ತರ ಕರ್ನಾಟಕ ಭಾಗದ ‘ಜವಾರಿ ಹಾಡು’ ಸೇರಿಕೊಂಡಿದೆ.
ವಿಭಿನ್ನ ಬಗೆಯ ಹಾಡು ವಿನೂತನ ಡ್ಯಾನ್ಸ್ ಸೇರಿಕೊಂಡಿರುವ ಈ ಹಾಡಿನಲ್ಲಿ ಸಾಕಷ್ಟು ವೈವಿಧ್ಯತೆಗಳಿರುವುದು ವಿಶೇಷ.
ಇದೇ ಸೆಪ್ಟೆಂಬರ್ 28ರಂದು ಸಂಜೆ 7.45ಕ್ಕೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗುತ್ತಿರುವ ಹಾಡು ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಜೊತೆಗೆ ಇನ್ನೇನು ಬಿಡುಗಡೆಗೆ ಸಿದ್ಧಗೊಂಡಿರುವ ಈ ಚಿತ್ರದಲ್ಲಿ ಗಮನಾರ್ಹ ಅಂಶಗಳು ಬಹಳಷ್ಟಿವೆ.
ಈ ಹಿಂದೆ ಬಿಡುಗಡೆಗೊಂಡಿದ್ದ ಟೀಸರ್ ನಲ್ಲಿ ಪ್ರಮೋದ್ ಶೆಟ್ಟಿ ಮತ್ತು ರೋಹಿತ್ ಅವರ ಹೊಡೆದಾಟದ
ದೃಶ್ಯಗಳು ಮೈನವಿರೇಳಿಸುವ ಅಂಶಗಳನ್ನು ಹೊಂದಿದ್ದವು.
ರಕ್ತಾಕ್ಷ ಯುವ ಪ್ರತಿಭೆಗಳ ವಿಸ್ಮಯ ರೂಪ ಹೊಂದಿರುವ ಚಿತ್ರ. ಈಗಾಗಲೇ ಕುತೂಹಲವನ್ನು ಹುಟ್ಟು ಹಾಕಿರುವ ಈ ಚಿತ್ರದ ತಾರಾಗಣವೂ ರೂಪದರ್ಶಿಗಳಿಂದ ತುಂಬಿ ಹೋಗಿದೆ.
ಚಿತ್ರ ಬಿಡುಗಡೆಗೆ ಮುಂಚೆಯೇ ನಟ ರೋಹಿತ್ ಕನ್ನಡದ ಸಲ್ಮಾನ್ ಖಾನ್ ಎಂದು ಕರೆಸಿಕೊಂಡು ಸುದ್ದಿಯಾಗಿದ್ದಾರೆ.