Snehapriya.com

June 8, 2025

ಕೊರೊನಾ ಜಾಗೃತಿ ಹಾಡು ಮಹೇಂದ್ರ ಮನ್ನೋತ್ ಸಂಕಲ್ಪ

Social Share :

ಉದ್ಯಮಿ ಮಹೇಂದ್ರ ಮನ್ನೋತ್ ತಮ್ಮ ಸಾಮಾಜಿಕ ಕಾರ್ಯಗಳಿಂದ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಮಹಾಮಾರಿ ಕೊರೊನಾ ಸಂಕಷ್ಟದ ಸಮಯದಲ್ಲಿ ಬಡ ಜನರ ಹಸಿವು ನೀಗಿಸಲು ಶ್ರಮಿಸುತ್ತಿರುವ ಮನ್ನೋತ್, ಮಹಾಮಾರಿ ಓಡಿಸಲು ಅಥವಾ ಜನರು ಧೈರ್ಯದಿಂದ ಬದುಕಲು ಸೂಚಿಸುವ ಗೀತೆಗಳ ಆಲ್ಬಂ ಕೂಡ ಮಾಡಿದ್ದಾರೆ.

ಸೋಮವಾರ ತಮ್ಮ ಕಾರ್ಯಗಳನ್ನು ಮಾಧ್ಯಮಗಳಿಗೆ ಮಹೇಂದ್ರ ಮನ್ನೋತ್ ವಿವರಿಸುವ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಂಡಳಿಯ ಮಾಜಿ ಕಾರ್ಯದರ್ಶಿ ಭಾ.ಮ.ಹರೀಶ್ ಹಾಜರಿದ್ದರು.

‘ಹೆದರದಿರು ಓ ಮನಸ್ಸೇ..’ ಹಾಗೂ ‘ ಆತ್ಮ ನಿರ್ಭರ ಭಾರತ’ ಪರಿಕಲ್ಪನೆಯಲ್ಲಿ ಗೀತೆಗಳನ್ನು ರಚಿಸಿ ಪ್ರಸ್ತುತ ಪಡಿಸಲಾಗಿರುವ ಆಲ್ಬಂ ವಿಶೇಷ ಎನಿಸಿತು.

ಹೆದರದಿರು ಓ ಮನಸೇ ಎಂಬ ಗೀತೆಯನ್ನು ಹರಿಹರನ್ ನಿರ್ದೇಶನ ಮಾಡಿದ್ದಾರೆ. ಎ.ಟಿ. ರವೀಶ್ ಸಂಗೀತಕ್ಕೆ ರೇವಣ್ಣ ನಾಯಕ್ ಸಾಹಿತ್ಯ ಬರೆದಿದ್ದಾರೆ.
ವಿನಾಯಕ್ ಛಾಯಾಗ್ರಹಣ ಗೀತೆಗಿದೆ. ಸಚಿನ್ ಎಸ್ ನಗರ್ತ ಈ ಹಾಡನ್ನು ಹಾಡಿದ್ದಾರೆ.

ಇದೇ ವೇಳೆ ಕಳೆದ ವರ್ಷ ನಿರ್ಮಿಸಿದ ಆತ್ಮ‌ನಿರ್ಭರ ಭಾರತ ಎನ್ನುವ ಗೀತೆಯನ್ನು ಬಿಡುಗಡೆ ಮಾಡಲಾಯಿತು. ಇದು ಗಜೇಂದ್ರ ನಿರ್ದೇಶನದಲ್ಲಿ ಹಾಗೂ ವಿಜಯಕೃಷ್ಣ ಸಂಗೀತದಲ್ಲಿ ಮೂರು ರಾಯರ ಗಂಡ ಸಾಹಿತ್ಯದಲ್ಲಿ ಮೂಡಿ ಬಂದಿದೆ. ತೇಜಸ್ವಿ ಹರಿ ಹಾಡಿದ್ದಾರೆ.
ಕೊರೊನಾ ವಾರಿಯರ್ಸ್ ಗೆ ಗೀತೆ ಅರ್ಪಿಸಲಾಗಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *