ಮಹಾಮಾರಿ ಕೊರೊನಾ ಬಂದಾಗಿನಿಂದಲೂ ಮನರಂಜನಾ ಕ್ಷೇತ್ರಕ್ಕೆ ಮಹಾ ಮಹಾ ಹೊಡೆತ ಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಕನ್ನಡದ ಚಿತ್ರ ಸಾಹಿತಿ ಶಿವನಂಜೆಗೌಡ ಅವರು ‘ಹೇ ಕೊರೊನಾ ಇದು ಸರಿನಾ..’ ಎಂಬ ಗೀತೆ ಮತ್ತು ‘ಬರಿದಾಗುತ್ತಿದೆ; ಬಂಜರಾಗುತ್ತಿದೆ’ ಎಂಬ ಪರಿಸರ ಗೀತೆ ಬರೆದಿದ್ದು ಆ ಗೀತೆಗಳು ಅತ್ಯಂತ ಜನಪ್ರಿಯ ವಾಗಿವೆ.
ಇದಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರಹೆಗ್ಗಡೆ ಅವರೂ ಸೇರಿದಂತೆ ಸಿನಿಮಾ ಸ್ಟಾರ್ ನಟರು ಹಾಗೂ ಇತರ ಗಣ್ಯರು ಶಿವನಂಜೆಗೌಡರ ಗೀತೆಗೆ ಮರಳಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ..
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಲವ್ಲಿಸ್ಟಾರ್ ಪ್ರೇಮ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಟಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ ಅಲ್ಲದೆ ಪರಿಸರವಾದಿ ಯಲ್ಲಪ್ಪರೆಡ್ಡಿ ಅವರಂತಹ ಗಣ್ಯರ ಹೊಗಳಿಕೆ ಈ ಪರಿಸರ ಗೀತೆಗೆ ದಕ್ಕಿದೆ.
ಶಿವನಂಜೇಗೌಡರು ಅನೇಕ ಚಲನಚಿತ್ರ ಗೀತೆಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಅಲ್ಲದೆ ಎರಡು ಭಕ್ತಿಗೀತೆಗಳ ಆಲ್ಬಂ ಹೊರತಂದಿದ್ದಾರೆ. ಈಗ ಈ ಪರಿಸರ ಗೀತೆಗೆ ಅವರೇ ರಾಗಸಂಯೋಜನೆ ಮಾಡಿದ್ದಾರೆ.