ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಶ್ಯಾನುಭೋಗರ ಮಗಳು’ ಚಿತ್ರವು ಬಿಡುಗಡೆಗೆ ಸಿದ್ದಗೊಂಡಿದ್ದು, ಈಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಕಂಡಿದೆ.
ರಾಗಿಣಿ ಪ್ರಜ್ವಲ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವು ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧರಿಸಿ ತಯಾರಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಹಿರಿಯನಟ ರಮೇಶ್ ಭಟ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದೆ. ಕನ್ನಡ ಚಿತ್ರರಂಗಕ್ಕೆ ಕಾದಂಬರಿಯಾಧಾರಿತ ವಿಭಿನ್ನ ಶೈಲಿಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ ಕೂಡ್ಲು ರಾಮಕೃಷ್ಣ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಶಾನುಭೋಗರ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ, ಚನ್ನಪಟ್ಟಣ, ಚಿಕ್ಕಬಳ್ಳಾಪುರದ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಈ ಸಿನಿಮಾ ಪ್ರಾರಂಭವಾಗಿದ್ದೇ ಆಕಸ್ಮಿಕ. ಭಾಗ್ಯ ಅವರು ನನಗೆ 35 ವರ್ಷಗಳ ಸ್ನೇಹಿತೆ, ನನ್ನ 32 ಸಿನಿಮಾಗಳಲ್ಲಿ 14 ಕಾದಂಬರಿ ಆಧಾರಿತ ಚಿತ್ರಗಳೇ ಎನ್ನುವುದು ವಿಶೇಷ. 18ನೇ ಶತಮಾನದಲ್ಲಿ ನಡೆಯುವ ಕಥೆಯಿದು, ಮತ್ತೊಬ್ಬ ನಟಿ ರಿಶಿಕಾ ಸೆಕೆಂಡ್ ಲೀಡ್ ಮಾಡಿದ್ದಾರೆ ಎಂದರು ನಿರ್ದೇಶಕ ಕೂಡ್ಲು ರಾಮಕೃಷ್ಣ.
ಭುವನ್ ಫಿಲಂಸ್ ಲಾಂಛನದಲ್ಲಿ ಸಿ.ಎಂ. ನಾರಾಯಣ್ ನಿರ್ಮಿಸಿರುವ ಈ ಚಿತ್ರಕ್ಕೆ ಜೈಆನಂದ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ, ವಸಂತ ಕುಲಕರ್ಣಿ ಕಲಾನಿರ್ದೇಶನ, ಕವಿರಾಜ್-ಅರಸು ಅಂತಾರೆ ಸಾಹಿತ್ಯವಿದೆ. ರಮೇಶ್ ಕೃಷ್ಣನ್ ಸಂಗೀತ, ಕರಣ್ ಮಯೂರ್ ನಿರ್ಮಾಣ ನಿರ್ವಹಣೆ ಹಾಗೂ ಎಸ್.ನಾಗರಾಜ್ರಾವ್, ರಘು ಕಲ್ಪತರು ಸಹ ನಿರ್ದೇಶನವಿದೆ ಎಂಬ ಮಾಹಿತಿಗಳು ಬಂದವು.
ಚಿತ್ರಕ್ಕೆ ಬಿ.ಎ. ಮಧು ಅವರು ಸಂಭಾಷಣೆಗಳನ್ನು ಹೆಣೆದಿದ್ದಾರೆ.
ಉಳಿದ ಪಾತ್ರಗಳಲ್ಲಿ ನಿರಂಜನ್ ಶೆಟ್ಟಿ, ರಮೇಶ್ ಭಟ್, ಸುಧಾ ಬೆಳವಾಡಿ, ವಾಣಿಶ್ರೀ, ಪದ್ಮಾ ವಾಸಂತಿ, ಶ್ರೀನಿವಾಸಮೂರ್ತಿ, ಅನನ್ಯ, ಜೋಸೈಮನ್, ರಂಜಿತ್ ಕಾರ್ತಿಕ್, ಧರ್ಮ ನವೀನ್ ಹಾಗೂ ಸುಧಾಕರ ಬನ್ನಂಜೆ ನಟಿಸಿದ್ದಾರೆ. ಹಾಗೆಯೇ ಟಿಪ್ಪು ಸುಲ್ತಾನ್ ಪಾತ್ರದಲ್ಲಿ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ.
ಕಾದಂಬರಿಗಾರ್ತಿ ರಾಗಿಣಿ ಪ್ರಜ್ವಲ್, ಭಾಗ್ಯ ಕೃಷ್ಣಮೂರ್ತಿ, ನಟ ಸುಧಾಕರ ಬನ್ನಂಜೆ, ಸ್ವಸ್ತಿಕ್ ಶಂಕರ್, ನಿರ್ಮಾಪಕ ಸಿ.ಎಂ. ನಾರಾಯಣ್ ಹಾಗೂ ಇತರರು ಹಾಜರಿದ್ದರು