ಗೀತರಚನಕಾರ ಕಿನ್ನಾಳ್ ರಾಜ್ ನಿರ್ದೇಶನದ ‘ಸಿಂಹರೂಪಿಣಿ’ ತೆರೆಗೆ ಬರಲು ಸಜ್ಜಾಗಿದ್ದು, ಇದೇ ತಿಂಗಳು ಅಂದರೆ ಅಕ್ಟೋಬರ್ 17 ರಂದು ಚಿತ್ರವು ಬಿಡುಗಡೆ ಕಾಣುತ್ತಿದೆ.
ನಿರ್ಮಾಪಕ ಕೆ.ಎಂ.ನಂಜುಂಡೇಶ್ವರ
ಅವರ ಕಲ್ಪನೆಯ ಈ ಚಿತ್ರವು
ಗ್ರಾಮ ದೇವತೆ ಶ್ರೀ ಮಾರಮ್ಮಾ ದೇವಿಯ ಶಕ್ತಿಯ ದರ್ಶನ ಎಂಬುದು ನಿರ್ದೇಶಕರ ವಿವರಣೆ.
ಕೆ.ಜಿ.ಎಫ್ ಸೇರಿದಂತೆ ಕನ್ನಡದ ಸಾಕಷ್ಟು ಚಿತ್ರಗಳಿಗೆ ಗೀತ ರಚನೆ ಮಾಡಿರುವ ಕಿನ್ನಾಳ್ ರಾಜ್ ಅವರ ಮೊದಲ ನಿರ್ದೇಶನದ ಚಿತ್ರ ಸಿಂಹರೂಪಿಣಿ.
ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ಕೆ.ಎಂ.ನಂಜುಂಡೇಶ್ವರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆಡಿಯೋ ಹಕ್ಕುಗಳನ್ನು ’ಮಾಳು ನಿಪ್ನಾಳ್ ಮ್ಯೂಸಿಕ್ ಸಂಸ್ಥೆ’ಯು ಅಧಿಕ ಬೆಲೆ ನೀಡಿ ಖರೀದಿ ಮಾಡಿದ್ದು, ಇದು ಸಿನಿಮಾಕ್ಕೆ ಸಿಕ್ಕ ಮೊದಲ ಗೆಲುವು ಎಂದು ಹೇಳಿಕೊಂಡಿತು ಚಿತ್ರತಂಡ.
ಕಳೆದ ಜುಲೈನಲ್ಲಿ ಪಾತ್ರಗಳನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿ ಸಂಭ್ರಮಿಸಿದ್ದ ಚಿತ್ರತಂಡ, ನವರಾತ್ರಿಯ ಎರಡನೇ ದಿನವಾದ ಶುಕ್ರವಾರದಂದು ಹಾಡುಗಳ ಬಿಡುಗಡೆಯ ಅದ್ದೂರಿ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡಿತ್ತು.
ತೆಲುಗಿನ ಹೆಸರಾಂತ ನಟ ಸುಮನ್ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ದೇವಿಯ ಅಸ್ವಿತ್ವದ ಬಗ್ಗೆ ತಿಳಿದುಕೊಂಡೆ. ತೆಲುಗಿನ ‘ಅಣ್ಣಮಯ್ಯ’ ರೀತಿಯಲ್ಲಿ ಈ ಚಿತ್ರವು ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು.
ರಾಕ್ಷಸರ ಸಂಹಾರಕ್ಕೆ ಪಾರ್ವತಿ ದೇವಿಯು ಏಳು ಅವತಾರಗಳನ್ನು ಎತ್ತಿದ್ದು ಅದರಲ್ಲಿ ಕೊನೆಯದು ಮಾರಮ್ಮಾ ದೇವಿಯ ಅವತಾರ. ಹಾಗಾಗಿ ಗ್ರಾಮೀಣ ಭಾಗದ ಎಲ್ಲಿಯೇ ಆಗಲಿ ದೇವಿಯ ಅದ್ದೂರಿ ಜಾತ್ರೆ ನಡೆಯುತ್ತದೆ ಎಂಬ ವಿವರ ನೀಡಿದರು ನಿರ್ದೇಶಕ ಕಿನ್ನಾಳ್ ರಾಜ್.
ದೇವಿಯು ಮಹಾಲಕ್ಷ್ಮಿ ರೂಪದಲ್ಲಿ ಭೂಮಿಗೆ ಬರುವ ಅದ್ದೂರಿ ರೂಪವನ್ನು ಸೃಷ್ಟಿಸಲಾಗಿದ್ದು, ಕಥೆಯಲ್ಲಿ ಥ್ರಿಲ್ಲಿಂಗ್ ಅಂಶಗಳನ್ನು ಸೇರಿಸಿ ನಿರ್ಮಾಣ ಮಾಡಲಾಗಿದೆ. ನಿರ್ಮಾಪಕರು ಹಣದ ಮುಖ ನೋಡಿಲ್ಲ ಹಾಗಾಗಿ ಚಿತ್ರವು ಅತ್ಯಂತ ಅದ್ದೂರಿಯಾಗಿ ಮೂಡಿ ಬಂದಿದೆ ಎಂದರು.
‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ದ್ವಾಪರ..’ ಹಾಡಿನ ಖ್ಯಾತಿಯ ಜಸ್ ಕರಣ್ ಸಿಂಗ್ ಹಾಡಿರುವ ಪ್ರೇಮ್ ಗೀತೆ ಈಗಾಗಲೇ ಜನಮನ ಗೆದ್ದಿದೆ ಎಂದು ಹೇಳುತ್ತಾ ಹೋದರು ನಿರ್ದೇಶಕರು.
ಚಿತ್ರದಲ್ಲಿ ನೂರ ಇಪ್ಪತ್ತಕ್ಕೂ ಅಧಿಕ ಕಲಾವಿದರಿದ್ದು ಯಾರಿಗೂ ಭೇದ ಭಾವ ಮಾಡಲಾಗಿಲ್ಲ. ಬಿಡುಗಡೆಗೆ ಎಲ್ಲರೂ ಬಂದು ಸಹಕರಿಸಬೇಕು ಎಂದರು ನಿರ್ಮಾಪಕ ಕೆ.ಎಂ.ನಂಜುಂಡೇಶ್ವರ.
ತಾರಾ ಬಳಗದಲ್ಲಿರುವ ಯಶ್ಶೆಟ್ಟಿ, ಅಂಕಿತಾಗೌಡ, ದಿವ್ಯಾಆಲೂರು, ನೀನಾಸಂ ಅಶ್ವಥ್, ಹರೀಶ್ ರಾಯ್, ವಿಜಯ್ಚೆಂಡೂರು, ಯಶಸ್ವಿನಿ, ಆರವ್ಲೋಹಿತ್, ಖುಷಿಬಸ್ರೂರು, ಮನಮೋಹನ್ರೈ, ಸಾಗರ್, ಸಂಗೀತ ನಿರ್ದೇಶಕ ಆಕಾಶ್ಪರ್ವ, ಕಲರಿಸ್ಟ್ ಕಿಶೋರ್, ಛಾಯಾಗ್ರಾಹಕ ಕಿರಣ್ ಪಾಲ್ಗೊಂಡು ಚಿತ್ರದ ಭಾಗವಾಗಿದ್ದಕ್ಕೆ ಸಂತಸ ಹಂಚಿಕೊಂಡರು.