ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಆಡಿಯೋ ಕಂಪನಿ ಆರಂಭಿಸಿದ್ದು, ಕಿಚ್ಚ ಸುದೀಪ್ ಅದನ್ನು ಅನಾವರಣ ಗೊಳಿಸಿದ್ದಾರೆ.
ಈಚೆಗೆ ಜಿ.ಟಿ.ಮಾಲ್ ನ ಎಂ.ಎಂ.ಬಿ ಲೆಗಾಸಿಯಲ್ಲಿ ‘ತಾಯವ್ವ’ ಚಿತ್ರದ ಹಾಡುಗಳ ಬಿಡುಗಡೆ ವೇಳೆ ಆಡಿಯೋ ಕಂಪನಿ ಅಸ್ವಿತ್ವ ತಳೆದಿದ್ದು, ಅದೇ ಚಿತ್ರದ ಹಾಡುಗಳನ್ನು ಮೊದಲು ಹೊರ ತರಲಾಗಿದೆ.
ಹಿಂದೆ ತಾಯವ್ವ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ಕಿಚ್ಚ ಸುದೀಪ್, ಈಗ ಅದೇ ಹೆಸರಿನ ಚಿತ್ರದ ಹಾಡುಗಳ ಬಿಡುಗಡೆ ಹಾಗೂ ಆಡಿಯೋ ಕಂಪನಿ ಬಿಡುಗಡೆಯಲ್ಲಿ ಭಾಗವಹಿಸಿದ್ದರು.
‘ಕೆಲವು ಸ್ನೇಹಗಳನ್ನು ದೂರವಿಟ್ಟಿದ್ದರೆ ಚೆನ್ನಾಗಿತ್ತು’ ಎಂದು ಭಾ.ಮ.ಹರೀಶ್ ಕಾಲೆಳೆಯುವಂತೆ ಸುದೀಪ್ ಮಾತನಾಡಿದ್ದರೂ ಅವರ ಈಚಿನ ಕೆಲವು ಸ್ನೇಹಗಳಿಗೆ ಹೇಳಿದ ವಿದಾಯದತಿತ್ತು ಆ ಭಾಷಣ.
ಆಡಿಯೋ ಯಾವ ರೀತಿ, ಎಲ್ಲಿಯೂ ಆಗದೆ ಉಳಿದಿದ್ದನ್ನು ನೀವುಮಾಡುತ್ತೀರಾ ಎಂದು ಮತ್ತೆ ಮತ್ತೆ ಭಾ.ಮ.ಹರೀಶ್ ಕಾಳೆದರು ಸುದೀಪ್.
‘ತಾಯವ್ವ’ ಚಿತ್ರದಲ್ಲಿ ಅಭಿನಯಿಸಿರುವ ಗೀತಪ್ರಿಯ ಆ ಚಿತ್ರದ 11 ಕಿರು ಗೀತೆಗಳಿಗೂ ಧ್ವನಿಯಾಗಿರುವ ವಿಷಯಗಳನ್ನು ವಿವರಿಸಿದರು.
ಅನಂತ ಆರ್ಯನ್ ಸಂಗೀತದಲ್ಲಿ ಜಾನಪದದ ಹಿನ್ನೆಲೆಯ ಹಾಡುಗಳು ಗಮನ ಸೆಳೆದವು. ಮುಗ್ಧತೆ ಬೆರೆಸಿದ ಅದೇ ಹಳೆ ಶೈಲಿಯಿಂದ ಮನ ಗೆದ್ದವು.
ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಚಿತ್ರವನ್ನು ಪದ್ಮಾವತಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.
ಪದ್ಮಾವತಿ ಬಹಳ ವರ್ಷಗಳ ಗೆಳತಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಶ್ರಮವಹಿಸಿ ಕಲಿತು ಹಾಡಿದ್ದೇನೆ ಎಂಬ ವಿವರಗಳನ್ನು ನೀಡಿದರು ಗೀತಪ್ರಿಯ.