Snehapriya.com

June 9, 2025

ಸ್ಟಾರ್ ನಿರ್ದೇಶಕ ಆರ್.ಚಂದ್ರು ಈಗ ಅಭಿಮಾನಿಗಳ ಸುತ್ತ..!

Social Share :

* ಅದ್ದೂರಿ ಹುಟ್ಟುಹಬ್ಬ ಆಚರಣೆ

* ಅಭಿಮಾನಿ ಸಂಘ ಘೋಷಣೆ

ಕನ್ನಡ ಚಿತ್ರರಂಗ ಸ್ಯಾಂಡಲ್ ವುಡ್‌ ನ ಸ್ಟಾರ್ ನಟರ ಡಾರ್ಲಿಂಗ್ ಆಗಿರುವ ಆರ್.ಚಂದ್ರು ಈಗ ಸಾಮಾಜಿಕ ಕಾಳಜಿಗಳಿಗೆ ಸ್ಪಂದಿಸುವ ಮನಸ್ಸು ಮಾಡಿದ್ದಾರೆ..

ಈಚೆಗಷ್ಟೇ ಒಮ್ಮೆಗೆ ಐದು ಚಿತ್ರಗಳನ್ನು ಘೋಷಣೆ ಮಾಡಿ ಧೈರ್ಯಶಾಲಿ ನಿರ್ದೇಶಕ ಎನಿಸಿಕೊಂಡ ಆರ್.ಚಂದ್ರು ಅವರ ಹೆಸರಿನಲ್ಲಿ ಅಭಿಮಾನಿಗಳ ಸಂಘ ಅಸ್ತಿತ್ವ ಪಡೆದಿದೆ..

ಅದೇ ‘ಅಖಿಲ ಕರ್ನಾಟಕ ಆರ್.ಚಂದ್ರು ಅಭಿಮಾನಿಗಳ ಸಂಘ’

ಚಿತ್ರರಂಗದ ಕೆಲಸಗಳ ಜೊತೆ ಸಾಮಾಜಿಕ ಪರಿವರ್ತನೆಯ ಕನಸಿನಲ್ಲಿ ಮೂಡಿ ಬಂದಿರುವ ಈ ಸಂಘ ರಾಜ್ಯ ವ್ಯಾಪಿ ಜನರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡಿಕೊಡಲಿದೆ.

ಜನಪ್ರಿಯ ನಿರ್ದೇಶಕ ಹಾಗೆಯೇ ಉದ್ಯಮದ ಪಾಲಿಗೆ ಹಾಟ್ ಫೇವರಿಟ್ ನಿರ್ಮಾಪಕ ಆಗಿರುವ ಆರ್.ಚಂದ್ರು ಕಳೆದ ಬುಧವಾರ ಅಂದರೆ ಫೆಬ್ರವರಿ 7 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಶುಭ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.

ಕಿಕ್ಕಿರಿದ ಜನ ಸಮೂಹ ಹಾಗೂ ಗಣ್ಯರ ನಡುವೆ ಬೆಂಗಳೂರಿನ ಸಹಕಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆರ್.ಚಂದ್ರು ಹುಟ್ಟುಹಬ್ಬ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಪ್ರೀತಿ ಮತ್ತು ಅತ್ಯುತ್ಸಾಹದ ಮೆರವಣಿಗೆಗಳು ನಡೆದವು. ಅಭಿಮಾನಿ ಬಳಗ ಇರುವುದು ಮೆರೆಯಲು ಅಲ್ಲ; ಜನೋಪಯೋಗಿ ಕೆಲಸಗಳಿಗಾಗಿ ಅದನ್ನು ಸದ್ಯವೇ ಪ್ರಕಟಿಸುವುದಾಗಿ ಹೇಳಿದರು ಆರ್.ಚಂದ್ರು.

ರಕ್ತದಾನ, ಆರೋಗ್ಯ ಸೇವೆಯಂತಹ ಕೆಲಸಗಳ ಜೊತೆ ಸಾಮಾಜಿಕ ಬದ್ಧತೆ ಹಾಗೂ ಜನರ ಸೇವೆಯ ಹೊಸ ಪರಿಕಲ್ಪನೆ ಸದಾಶಯಗಳು ವ್ಯಕ್ತವಾಗುವ ನಿಟ್ಟಿನಲ್ಲಿ ಹೆಚ್ಚೆಚ್ಚು ಕೆಲಸಗಳಾಗುತ್ತವೆ ಎಂದರು.

ಆರ್.ಸಿ. ಸ್ಟುಡಿಯೋಸ್ ಪ್ರೊಡಕ್ಷನ್ ಮೂಲಕ ಬರೀ ಐದು ಚಿತ್ರವಲ್ಲ; ಇನ್ನೂ ಬೇಕಾದಷ್ಟು ಚಿತ್ರಗಳನ್ನು ಮಾಡುವ ಸದಾಶಯವಿದೆ. ಇದರ ಮೂಲಕ ಹೊಸ ಪ್ರತಿಭೆಗಳನ್ನೂ ಬೆಳಕಿಗೆ ತರುವ ಯೋಜನೆ ಇದೆ.

ಈಗಾಗಲೇ ಪ್ಯಾನ್ ಇಂಡಿಯಾ ಚಿತ್ರಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅವು ವಿಶಿಷ್ಟ ಮತ್ತು ವಿನೂತನ ಮೇಕಿಂಗ್ ಸಿನಿಮಾಗಳಾಗುತ್ತವೆ ಎಂದು ಹೇಳುತ್ತಾ ಹೋದರು ಆರ್.ಚಂದ್ರು.

ಆರ್.ಸಿ.ಸ್ಟುಡಿಯೋಸ್ ಪ್ರೊಡಕ್ಷನ್ ಮೂಲಕ ಈಗಾಗಲೇ ಕಬ್ಜ-2, ಫಾದರ್, ಪಿಓಕೆ, ರಾಮಬಾಣ ಹಾಗೂ ಡಾಗ್ ಚಿತ್ರಗಳನ್ನು ನಿರ್ಮಾಣ ಮಾಡುವ ಘೋಷಣೆ ಮಾಡಲಾಗಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *