Snehapriya.com

April 14, 2025

ಕೆ.ಮಂಜು ನಿರ್ಮಾಣ @ 50 ವಿಷ್ಣುಪ್ರಿಯಾ ಈ ವಾರ ಬಿಡುಗಡೆ

Social Share :


* ನೈಜ ಘಟನೆಯ ಅಮರಕಾವ್ಯ *

* ಶ್ರೇಯಸ್ ಕೆ.ಮಂಜು ನಟನೆ *

* ಮೂಲ ಕಥೆಗಾರ್ತಿ‌ ಸಿಂಧುಶ್ರೀ *

ಗಂಡುಗಲಿ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ವಿಷ್ಣು ಪ್ರಿಯಾ’ ಚಿತ್ರ ಈ ವಾರ ಅಂದರೆ ಫೆಬ್ರವರಿ 21ರಂದು ಬಿಡುಗಡೆ ಕಾಣುತ್ತಿದೆ.

ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ಜೊತೆಗೆ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಕಾಣಿಸಿಕೊಂಡಿದ್ದು, ಈ ಅಮರ ಪ್ರೇಮ ಕಾವ್ಯ ಪ್ರೇಕ್ಷಕರಿಗೆ ನವಿರು ಪ್ರೇಮದ ರಸದೌತಣ ಬಡಿಸಲು ಸಜ್ಜಾಗಿದೆ.

ಮಲಯಾಳಂ ಮೂಲದ ಹೆಸರಾಂತ ನಿರ್ದೇಶಕ ವಿ.ಕೆ.ಪ್ರಕಾಶ್ ನಿರ್ದೇಶನದ ಈ ಚಿತ್ರ ಹಲವು ಕಾರಣಗಳಿಗೆ ಕುತೂಹಲ ಹುಟ್ಟಿಸಿದೆ.

90ರ ದಶಕದ ಪ್ರೇಮಕಥೆಯನ್ನು ಮಲೆನಾಡು ಹಸಿರು ಸಿಂಗಾರದ ಜೊತೆ ಜೋಡಿಸಿ ಕಣ್ಮನ ಸೆಳೆಯುತ್ತದೆ ತಣಿಯುವಂತೆ ಮಾಡಿರುವುದು ಚಿತ್ರದ ಮೊದಲ ಸಾರ್ಥಕತೆ ಎಂಬುದು ನಿರ್ಮಾಪಕ ಕೆ.ಮಂಜು ಅವರ ನಂಬಿಕೆ.

ಈಚೆಗೆ ನಡೆದ ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಈ ಚಿತ್ರದ ಮೂಲ ಕಥೆಗಾರ್ತಿ ಸಿಂಧು ಶ್ರೀ ಎಂಬುದಾಗಿ ಪರಿಚಯಿಸಿತು ಚಿತ್ರತಂಡ.

ಈ ಚಿತ್ರದ ಸಲುವಾಗಿ ಲೇಖಕರಿಂದ ಕಥೆಗಳನ್ನು ಆಹ್ವಾನ ಮಾಡಿದಾಗ ಸುಮಾರು 55 ಕಥೆಗಳು ಬಂದಿದ್ದವು. ಅದರಲ್ಲಿ ಅಥಣಿ ಮೂಲದ ಸಿಂಧು ಶ್ರೀ ಅವರ ಕಥೆ ಆಯ್ಕೆಯಾಯಿತು ಎಂಬ ವಿವರ ಕೊಟ್ಟರು ಕೆ.ಮಂಜು.

ಮರ್ಯಾದೆಗೇಡು ಹತ್ಯೆ ಪ್ರಕರಣಗಳು ಕಣ್ಣ ಮುಂದೆ ನಡೆದಾಗ ಆ ಕುರಿತು ಕಥೆ ಬರೆಯಬೇಕು ಎಂದು ಕೊಂಡು ಬರೆದ ಕಥೆ ಇದು. ಕೆ.ಮಂಜು ಅವರು ನಿಮ್ಮ ಕಥೆ ಆಯ್ಕೆಯಾಗಿದೆ ಎಂದು ಕರೆ ಮಾಡಿದಾಗ ನಿಜಕ್ಕೂ ನಂಬಲು ಸಾಧ್ಯವಾಗಲಿಲ್ಲ ಎಂಬ ವಿವರಣೆ ಬಂತು ಕಥೆಗಾರ್ತಿ ಸಿಂಧು ಶ್ರೀ ಅವರಿಂದ.

ಈ ಚಿತ್ರದಲ್ಲಿನ ಅನುಭವಗಳು ಸದಾ ನೆನಪುಗಳಾಗಿ ಕಾಡಬಹುದು. ಏಕೆಂದರೆ ಇದು ಇಷ್ಟ ಪಟ್ಟು ಮಾಡಿರುವ ಸಿನಿಮಾ ಎಂದರು ಶ್ರೇಯಸ್ ‌ಮಂಜು.

ಈ ಚಿತ್ರದಲ್ಲಿ ಜೋಡಿಯಾಗಿರುವ ಶ್ರೇಯಸ್ ಹಾಗೂ ಪ್ರಿಯಾ ವಾರಿಯರ್ ಅವರದು ಅನುಪಮ ಜೋಡಿ ಎಂಬಷ್ಟು ನೈಜವಾಗಿ ಬಂದಿದೆ. ಕೆ.ಮಂಜು ಅವರಿಗೆ ಪ್ರಚಾರ ಕೂಡ ಅತ್ಯುತ್ತಮವಾಗಿ ಮಾಡುವುದು ತಿಳಿದಿದೆ ಎಂದವರು ನಿರ್ದೇಶಕ ವಿ.ಕೆ.ಪ್ರಕಾಶ್.

ನಟಿ ಪ್ರಿಯಾ ವಾರಿಯರ್ ಅವರಿಗೆ ಇದು ಮೊದಲ ಕನ್ನಡ ಚಿತ್ರ ಮತ್ತು ಬಹಳವೇ ಇಷ್ಟವಾದ ಚಿತ್ರ ಎಂದು ಹೇಳಿಕೊಂಡರು.


ಬಿಂದ್ಯಾ ಮೂವೀಸ್ ಕೆ. ಮಂಜು ಸಿನಿಮಾಸ್ ಮೂಲಕ ಈ ಚಿತ್ರವನ್ನು ಡಾ. ಕೆ.ಮಂಜು‌ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಇದು ಮಂಜು ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ 50 ನೇ ಚಿತ್ರ ಎಂಬುದು ವಿಶೇಷ.(ಬೇರೆ ಭಾಷೆಯ 2 ಚಿತ್ರ ಸೇರಿ). ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಜೀವನದಲ್ಲಿ ಪ್ರೀತಿಯ ಮಹತ್ವ ಏನೆಂಬುದನ್ನು ನವೀನ ಶೈಲಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ.
ತೆಲುಗಿನಲ್ಲಿ ಹೆಸರು ಮಾಡಿರುವ ಗೋಪಿಸುಂದರ್ ಈ ಚಿತ್ರಕ್ಕೆ
ಸಂಗೀತ ನಿರ್ದೇಶಕ.

ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ಅವರಂತಹ ಮಾಗಿದ ನಟರು ಚಿತ್ರದಲ್ಲಿ ತಂದೆಯ ಪಾತ್ರಗಳನ್ನು ಮಾಡಿದ್ದಾರೆ.

ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *